This page has not been fully proofread.

"ಗೀತೆಯಲ್ಲಿ ಹಲವಾರು ಸೂಕ್ಷ್ಮ ಅರ್ಥಗಳುಂಟು
ಎಲ್ಲ ಅರ್ಥಗಳನ್ನು ಹೇಳ ಬಲ್ಲಿರಿ ನೀವು
ಆದರೀ ಅರ್ಥಗಳ ಭಾಷ್ಯದಲ್ಲಿ ಬರೆದಿಲ್ಲ
"ಶಕ್ತಿತಃ" ಎಂಬುದಕೆ ಪಠ್ಯಾಯವಾಗಿ
"ಲೇಶತಃ" ಎಂಬ ಪದ ಬಳಸಿ ಬರೆಯಿರಿ ನೀವು"
 
ಇಂತು ಆಣತಿಯಿತ್ತ ಬದರಿನಾರಾಯಣ
 
"ಲೇಶತಃ" ಎಂಬುವ ಪದವನ್ನು ಬರೆದು
ಪಠಿಸಿದರು ಮಧ್ವರು ಭಾಷ್ಯವನ್ನು ಮತ್ತೆ
ಶಿಷ್ಯರೆಲ್ಲರೂ ಅಂದು ರಾತ್ರಿಯಲ್ಲಿ ನಿದ್ರಿಸಲು
ಶ್ರೀ ಹರಿಯು ಭೂಮಿಯನ್ನು ಬಡಿದು ಸದ್ದನು ಮಾಡಿ
"ಮತ್ತೊಮ್ಮೆ ಪಠಿಸೆಂದು" ಆದೇಶವಿತ್ತನು
ಎಚ್ಚೆತ್ತರಾ ಶಿಷ್ಯರೀ ದನಿಯ ಕೇಳಿ
 
ಪರಮ ಪುರುಷನು ಹರಿಯು ಪ್ರತಿಮೆಯಲಿ ಸನ್ನಿಹಿತ
"ಉಚ್ಯತಾಂ " ಶಬ್ದವನು ಹರಿಯು ನುಡಿದುದ ಕೇಳಿ
ಅದರ ಭಾವವನವರು ಸಾವಧಾನದಿ ಗ್ರಹಿಸಿ
ಶಿಷ್ಯರೆಲ್ಲರ ಕರೆದು ಆನಂದ ತೀರ್ಥರು
ಪ್ರವಚನವ ಮಾಡಿದರು ಗ್ರಂಥವನು ಮತ್ತೊಮ್ಮೆ
ಪರಮಾತ್ಮನಿದರಿಂದ ಸುಪ್ರೀತನಾದ
 
ಅಲಕನಂದಾ ಸ್ನಾನದ ವೈಖರಿ
 
ಅಲಕನಂದೆಗೆ ಹೆಸರು ಶೈತ್ಯಗಂಗೆ ಎಂದು
ಆ ಪುಣ್ಯತೀರ್ಥದ ನೀರು ಅತಿ ಶೀತವಹುದು
ಸ್ಪರ್ಶಿಸಲೂ ಅಂಜುವರು ಮಂದಿ ಅದನು
ಅರುಣ ಕಾಲದಲೆದ್ದು ಆನಂದ ತೀರ್ಥರು
ಮೀಯುವರು ಪ್ರತಿನಿತ್ಯ ಆತಂಕವಿರದೆ
ಎಷ್ಟಾದರೂ ಅವರು ಪವಮಾನ ಸುತರು
 
ಆರನೆಯ ಸರ್ಗ / 99
 
40
 
41
 
42
 
43