This page has been fully proofread once and needs a second look.

ವಾಸುದೇವನ ಪದದಿ ಸತತ ಸಂಗವ ಪೊಂದಿ

ಸ್ವಂತ ಸಾಮರ್ಥ್ಯದಲ್ಲಿ ರುದ್ರದೇವನ ಮೆಟ್ಟಿ
 

ಪಾಪನಾಶಕವಾದ ಕೀರ್ತಿಯನ್ನು ಪಡೆದಿರುವ

ಆಚಾರ್ಯ ಮಧ್ವರು ಯಾತ್ರೆಯನ್ನು ಮುಂದರಿಸಿ

ಗಂಗಾಪ್ರವಾಹವನು ಕೆಚ್ಚಿನಿಂದಲಿ ಹಾಯ್ದು

ಬದರಿಕಾಶ್ರಮದೆಡೆಗೆ ಮುನ್ನಡೆದು ಹೋದರು
 
॥ ೩೬ ॥
 
ಹಾದಿಯಲ್ಲಿ ಅಡಿಗಡಿಗೆ ಆನಂದ ತೀರ್ಥರು

ಸ್ಮರಣ ಮಾತ್ರದಿ ಮನಕೆ ಆನಂದ ವೀಯುವ

ಮೂರು ಜಗಗಳಿಗೂ ವಿಸ್ಮಯವ ನೀಡುವ

ಪರಿ ಪರಿಯ ಕಾರ್ಯವನ್ನು ಸುಲಭದಲ್ಲಿ ಮಾಡುತ್ತ

ಶ್ರೀ ಹರಿಯು ನರರಿಗೆ ಗೋಚರಿಪ ಕ್ಷೇತ್ರವದು

ಬದರಿಕಾಶ್ರಮದ ಬಳಿ ಬಂದು ಸೇರಿದರು
 
॥ ೩೭ ॥
 
ವೇದವ್ಯಾಸಾನುಗ್ರಹ
 

 
ಭಾರತಕೆ ಭೂಷಣ ಬದರಿನಾರಾಯಣ

ಅನಂತ ಗುಣಪೂರ್ಣ, ಸರ್ವೋತ್ತಮ

ಸ್ವಾಮಿಯ ಚರಣಕ್ಕೆ ಭಕುತಿಯಲಿ ನಮಿಸುತ್ತ

ಅಡಿಗಡಿಗೆ ಆತನ ಕರುಣೆಯನು ಬೇಡುತ್ತ

ಭಕ್ತಿಯಲಿ ರಚಿಸಿದಾ ಹರಿಗೀತೆ ಭಾಷ್ಯವನ್ನು
ನು
ಅರ್ಪಿಸಿದರಾತನಾ ಚರಣಾರವಿಂದದಲಿ
 
॥ ೩೭ ॥
 
ಸಂಗಡಿಗರೆಲ್ಲರನು ದೂರಕ್ಕೆ ಕಳುಹಿ

ಏಕಾಂತದಲ್ಲವರು ಸ್ವಾಮಿ ಸನ್ನಿಧಿ ಸೇರಿ

ಅಂತರಂಗದ ಸೇವೆ ಸಲ್ಲಿಸುತಲವರು

ಬದರಿನಾರಾಯಣನ ಪ್ರೀತ್ಯರ್ಥವಾಗಿ

ಹರಿಗೀತೆ ಭಾಷ್ಯವನ್ನು ಪಠಿಸತೊಡಗಿದರು.

"ಶಕ್ತಿ ಇದ್ದಷ್ಟರ್ಥ ಹೇಳುವೆನು" ಎಂದರು
 
98/ ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
36
 
37
 
38
 
39
 
॥ ೩೮ ॥