This page has been fully proofread once and needs a second look.

ಗೀತಾ ಭಾಷ್ಯ ರಚನೆ

 
ಯಾತ್ರೆಯನ್ನು ಕೈಗೊಂಡ ಸಜ್ಜನನು ಒಬ್ಬ

ತನ್ನೆಲ್ಲ ಬಂಧುಗಳ ಸನಿಹಕ್ಕೆ ಕರೆದು

ಉತ್ಕೃಷ್ಟ ಧನರಾಶಿ ಹಂಚಿ ತೆರಳುವ ತೆರದಿ

ಶ್ರೇಷ್ಠತಮ ಹರಿಗೀತೆ ಭಾಷ್ಯವೊಂದನು ರಚಿಸಿ

ಅಚ್ಯುತ ಪ್ರೇಕ್ಷರಿಗೂ ಜೇಷ್ಠಯತಿಗಳಿಗೂ
 

ಪರಮ ಭಕುತಿಯಲದನು ಅರ್ಪಿಸಿದರು
 
॥ ೩೨ ॥
 
ಪ್ರಥಮ ಬದರೀ ಯಾತ್
 
ರೆ
 
ಶ್ರೀ ಹರಿಯ ಸೇವೆಯನು ಸಾಧಿಸುವ ಸಲುವಾಗಿ

ಬದರಿಕಾಶ್ರಮದತ್ತ ಪಯಣಿಸುವ ಆಸೆಯಲಿ

ಸ್ವಾಮಿ ಪುರುಷೋತ್ತಮರ ಅನುಮತಿಯ ಬೇಡಿದರು

ಆನಂದ ತೀರ್ಥರ ಮನದಭೀಷ್ಟವ ಕಂಡು

ಶ್ರೀ ಹರಿಯ ರಕ್ಷಣೆಯು ಸರ್ವದಾ ಇರಲೆಂದು

ಅನುಮತಿಯನಿತ್ತರು ಪೂಜ್ಯ ಗುರುವರ್ಯರು
 
॥ ೩೩ ॥
 
ಮಲಯ ಮಂಡಲದಿಂದ ಭರದಿಂದ ಬರುವಂಥ

ಭ್ರಮರಗಳ ಹಿಂಡುಗಳ ಹಿಂದೆಯೇ ಇರುವಂಥ

ಪರಮ ಪರಿಶುದ್ಧತೆಯ ವಾಯುವಿನ ತೆರದಲ್ಲಿ

ಸಾಧು ಪಾಂಥರ ತಾಪ ಪರಿಹರಿಸಲೆಂಬಂತೆ

ಯೋಗ್ಯ ಹಿಂಬಾಲಕರ ತಂಡದಿಂದೊಡಗೂಡಿ

ಬಡಗ ನಾಡಿನ ಕಡೆಗೆ ಒಡನೆ ತೆರಳಿದರು
 
॥ ೩೪ ॥
 
ಗಂಗಾದಿ ತೀರ್ಥಗಳು, ಭಾಗವತ ಶಾಸ್ತ್ರಗಳು

ಪಾಪ ಪರಿಹರಿಸುವ ಎರಡು ವಿಧ ಸಾಧನವು

ಬುದ್ಧಿ ಶುದ್ಧಿಯ ಕೊಡುವ ಭಾಗವತ ಬೋಧಿಸುತ

ಗಂಗಾದಿ ನದಿಗಳಲ್ಲಿ ಸ್ನಾನವನ್ನು ಮಾಡುತ್ತ

ಎರಡು ವಿಧ ಸಾಧನವ ಪರಿಶುದ್ಧಗೊಳಿಸುತ್ತ

ಮುಂದಕ್ಕೆ ನಡೆದರು ಆನಂದ ತೀರ್ಥರು
 
ಆರನೆಯ ಸರ್ಗ / 97
 
32
 
33
 
34
 
35
 
॥ ೩೫ ॥