This page has been fully proofread once and needs a second look.

ಸಂಶಯಕ್ಕೆಡೆಯಿಲ್ಲ ಅರ್ಥವಿವರಣೆಯಲ್ಲಿ

ಶಬ್ದ ಧಾರೆಯ ಸೋಸ್ರೋತ ಪುಂಖಾನು ಪುಂಖ

ಎಡೆಬಿಡದೆ ಆಚಾರ್ಯ, ಆನಂದ ತೀರ್ಥರು

ಹಲವು ಅರ್ಥಗಳ ಕ್ಷಣದಲ್ಲಿ ಬಿಡಿಸಿದರು

ಸಂಭ್ರಶ್ಲಿಷ್ಟ ಅರ್ಥಗಳ ಗ್ರಹಿಸಲಾರದ ದ್ವಿಜರು

ವ್ಯಾಕುಲವ ತಳೆದರು ಮನದಾಳದಲ್ಲಿ
 
॥ ೮ ॥
 
ಅಂತಿಂಥ ಸಾಮಾನ್ಯ ಪಂಡಿತರು ಅವರಲ್ಲ

ಸಾಂಗ ವೇದದ ಚತುರ, ಇತಿಹಾಸ ನಿಪುಣರು

ಧೈರ್ಯ ಸಾಹಸದಲ್ಲಿ ಹಿಮ್ಮೆಟ್ಟರವರು

ಅವರ ಸಂಖ್ಯೆಯು ಕೂಡ ಸಾಕಷ್ಟು ಅಧಿಕ

ಪ್ರಲಯ ಕಾಲದ ಜಲವ ತುಂಬಿಟ್ಟು ಕೊಳ್ಳಲು
 

ಬಾವಿ ಸಾವಿರವೆಲ್ಲ ಸಾಕಾಗಬಹುದೆ ?
 
॥ ೯ ॥
 
"ನಿಮ್ಮ ಪ್ರತಿಭೆಗೆ ನಾವು ಮಣಿಯುವೆವು ಸ್ವಾಮಿ

ದೇವವೃಂದಗಳಲ್ಲೂ ಕಾಣಬರದೀ ಪ್ರತಿಭೆ

ಚಪಲ ಮಾನವರಲ್ಲಿ ಇದು ಹೇಗೆ ಸಾಧ್ಯ ?

ಸಕಲವನೂ ಬಲ್ಲವರೇ ! ಸೌಮ್ಯ ಸ್ವರೂಪರೇ !

ಕ್ಷಮಿಸಿರೆಮ್ಮನು ನೀವು ಆನಂದ ತೀರ್ಥರೇ !"
 

ಎಂದೆನುತ ನಮಿಸಿದರು ಆಚಾರ್ಯವರ್ಯರಿಗೆ
 
॥ ೧೦ ॥
 
ಕೇರಳದ ಪಂಡಿತರ ಪರಾಜಯ
 

 
ಮತ್ತೊಮ್ಮೆ ಸಭೆಯಲ್ಲಿ ಪಾಲ್ಗೊಳ್ಳಲೆಂದು

ಕೇರಳ ಸುಮಂಡಲದಿ ಜನ್ಮವನು ತಾಳಿದ್ದ

ವೇದಾದಿ ಶಾಸ್ತ್ರದಲ್ಲಿ ಪರಿಣತಿಯ ಪಡೆದಿದ್ದ

ವಿದ್ಯೆ ನೀಡುವ ಧನಕೆ ಆಶೆಯನ್ನು ಹೊಂದಿದ್ದ

ಈ ಪರಿಯ ಜನರಿಂದ ತುಂಬಿ ತುಳುಕುತಲಿದ್ದ

ದೇವಮಂದಿರವೊಂದ ಹೊಕ್ಕರಾಚಾರ್ಯರು
 
ಆರನೆಯ ಸರ್ಗ / 91
 
8
 
9
 
10
 
11
 
॥ ೧೧ ॥