This page has been fully proofread once and needs a second look.

"ನಾವು ಹೇಳಿದ ಅರ್ಥ ಶಾಸ್ತ್ರಸಮ್ಮತವಹುದು

ಅಂತೆಯೇ ಆಗಿಹುದು ನಿಮ್ಮ ಅರ್ಥವು ಕೂಡ

ಮೂರು ಅರ್ಥವು ಉಂಟು ವೇದಾದಿಗಳಿಗೆ

ವ್ಯಾಸ ಭಾರತಕುಂಟು ಹತ್ತು ಅರ್ಥಗಳು

ಹರಿಯ ಸಾಸಿರ ನಾಮ ನೂರರ್ಥ ಪಡೆದಿಹುದು

ಇಂತೆಂದು ವ್ಯಾಖ್ಯಾನ ಮಾಡಿದರು ಗುರುಗಳು
 
॥ ೪ ॥
 
ಆನಂದ ತೀರ್ಥರ ವಾದ ವೈಖರಿ ಕೇಳಿ

ಉಲ್ಲಸಿತರಾದರು ಎಲ್ಲ ವಿಪ್ರೋತ್ತಮರು

ಆಚಾರ್ಯ ಮಧ್ವರನು ವಾದದಲಿ ಸೋಲಿಸುವ

ಬಯಕೆಯನ್ನು ಹೊಂದಿದ್ದ ಪಂಡಿತರು ಎಲ್ಲ

ಮೊಗದಲ್ಲಿ ನಗೆಯನ್ನು ಸೂಸುತ್ತ ಕೇಳಿದರು

"ಅರ್ಥಶತಕವ ಹೇಳಿ, ಹರಿನಾಮ ಸಾಸಿರಕೆ
 
" ॥ ೫ ॥
 
ಆನಂದ ತೀರ್ಥರು ನಿಯಮವನು ವಿಧಿಸಿದರು

"ನೂರು ಅರ್ಥವ ನಾನು ಈಗಲೇ ಹೇಳುವೆನು

ಅದರ ಅನುವಾದವನು ನೀವೀಗಲೇ ಕೊಡಬೇಕು

ಇದು ನನ್ನ ಕಟ್ಟು; ಒಪ್ಪಿಗೆಯೆ ? ಹೇಳಿ'
"
ಒಪ್ಪಿಕೊಂಡರು ಎಲ್ಲ ಪಂಡಿತರೂ ನಿಯಮಕ್ಕೆ

ಕಾರ್ಯದಲ್ಲಿ ತೊಡಗಿದರು ದೃಢವಾದ ಯತ್ನದಲ್ಲಿ
 
॥ ೬ ॥
 
L
 

 
"ವಿಶ್ವ" ದಿಂದಾರಂಭ ಹರಿಯ ಸಾಸಿರ ನಾಮ

ಈ ಹೆಸರು ಪ್ರಖ್ಯಾತ ಉಪನಿಷತ್ತುಗಳಲ್ಲಿ

ಪ್ರಕೃತಿ, ಪ್ರತ್ಯಯದ ಸಂಗಮದ ರೀತಿಯನು

ವ್ಯಾಕರಣ ಶಾಸ್ತ್ರದ ವಿಹಿತ ನಿಯಮದ ಸಹಿತ

"ವಿಶ್ವ"ಶಬ್ದದ ಅರ್ಥ ನೂರನ್ನು ಬಿಡಿಸಿದರು

ಇಂಥ ಚತುರರು ನಮ್ಮ ಆನಂದ ತೀರ್ಥರು
 
90 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
5
 
6
 
7
 
॥ ೭ ॥