This page has not been fully proofread.

ಶ್ರೀ ಗುರುಭೋ ನಮಃ
 
ಆರನೆಯ ಸರ್ಗ
 
ಸಭೆಯೊಂದರಲ್ಲಿ ಐತರೇಯ ಕಥನ
 
ಸಭೆಯಲ್ಲಿ ಕುಳಿತಿದ್ದ ಹಿರಿಯ ಪಂಡಿತನೊಬ್ಬ
ಆನಂದ ತೀರ್ಥರನು ಕುರಿತು ಇಂತೆಂದ:
"ಐತರೇಯದ ಸೂಕ್ತ ತಮ್ಮ ಮುಂದಿರಿಸುವೆನು
ಈ ಸೂಕ್ತದರ್ಥವನು ಸರಿಯಾಗಿ ಅರಿಯಲು
ತವಕದಲಿ ಕಾದಿಹುದು ನಮ್ಮ ಪಂಡಿತ ಸಭೆಯು
ಪೂಜ್ಯರಿದ ದಯಮಾಡಿ ಕೃತ ಪಡಿಸಬೇಕು"
 
ದಶಪ್ರಮತಿಗಳಿಂದ ವಿಷ್ಣು ಸಹಸ್ರನಾಮದ ಶತಾರ್ಥ ಕಥನ
 
ಮೇಘ ಸದೃಶವಾದ ಗಂಭೀರ ದನಿಯಲ್ಲಿ
ಸಭೆಯತ್ತ ಮೊಗಮಾಡಿ ಹೇಳತೊಡಗಿದರು
ವರ್ಣಗಳ ಸ್ಪಷ್ಟತೆ, ಮತ್ತದರ ಹಿರಿಮೆ
ಅನುರೂಪ ಮಾತ್ರೆಗಳ ಉಚಿತ ಉಚ್ಚಾರಣೆ
ಮತ್ತಿತರ ವ್ಯಾಕರಣ ಲಕ್ಷಣಗಳೊಂದಿಗೆ
ಸೂಕ್ತದ ಅರ್ಥವನು ಸರಳಗೊಳಿಸಿದರು
 
"ಮಂತ್ರದುಚ್ಚಾರಣೆಯು ಅತಿ ಸುಲಭ ಇವರಿಗೆ
ವಿಹಿತ ಲಕ್ಷಣವೆಲ್ಲ ಕರತಲಾಮಲಕ
 
ದೇವತಾಗುರುಗಳಿಗೆ ಇವರು ಸಮನಾಗಿಹರು ''
 
ಇಂತು ಮನದಲ್ಲಿಯೇ ಆದರಿಸಿ ಪಂಡಿತರು
"ಸೂಕ್ತಕ್ಕೆ ಬೇರೊಂದು ಅರ್ಥವೂ ಇಹುದು
ನೀವು ಹೇಳಿದ ಅರ್ಥ ಸರಿಯಲ್ಲ" ಎಂದರು
 
1
 
2
 
3