We're performing server updates until 1 November. Learn more.

This page has not been fully proofread.

ಪಂಡಿತರ ಸುಜ್ಞಾನ ತಾರಾಪ್ರಕಾಶವನ್ನು
ಸೂರ್ಯನಾ ತೆರದಲ್ಲಿ ನಿಸ್ತೇಜಗೊಳಿಸಿದರು
ದುರ್ವಾದಿ ಆನೆಗಳ ದುಸ್ತರ್ಕ ಕುಂಭಗಳ
ಸಿಂಹದಾ ತೆರದಲ್ಲಿ ಸೀಳಿ ಹಾಕಿದರು
ಲೋಕ ದೃಕ್ಕುಮುದಿನಿಯ ಅರಳಿಸುವ ರವಿಯಂತೆ
ಕಂಗೊಳಿಸಿ ಮೆರೆದರು ಆನಂದ ತೀರ್ಥರು
 
52
 
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀವಿಕ್ರಮ ಪಂಡಿತಾಚಾರ್ಯರ ಪುತ್ರ
ಶ್ರೀಮನ್ನಾರಾಯಣ ಪಂಡಿತಾಚಾರ್ಯರಿಂದ ರಚಿಸಲ್ಪಟ್ಟ ಶ್ರೀ ಸುಮಧ್ವ ವಿಜಯ
ಮಹಾಕಾವ್ಯದ ಆನಂದಾಂಕಿತವಾದ ಐದನೆಯ ಸರ್ಗವು ಸಮಾಪ್ತಿ.
 
86 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ