This page has not been fully proofread.

ಅಲ್ಲಿಂದ ಹಿಂದಿರುಗಿ ಆನಂದ ತೀರ್ಥರು
ಶ್ರೀ ಮುಗ್ಧ ಮೊದಲಾದ ಕ್ಷೇತ್ರಗಳ ಕಾಣುತ್ತ
ವಿವಿಧ ದೇವಾಲಯದಿ ವಿಧವಿಧದಿ ಪೂಜಿಸುತ
ಅತಿಶಯದ ಮಹಿಮೆಯನು ಅಲ್ಲಲ್ಲಿ ತೋರುತ್ತ
ಶ್ರೀ ಹರಿಯ ಚರಣಕ್ಕೆ ಅಡಿಗಡಿಗೆ ನಮಿಸುತ್ತ
 
ಉತ್ತರೋತ್ತರದಲ್ಲಿ ಉತ್ತರಕೆ ನಡೆದರು
 
ಮರಳಿ ಪಯಸ್ವಿನೀ ತೀರಕ್ಕೆ
 
ಸಕಲ ಸಲ್ಲಕ್ಷಣದಿಂದ ಕೂಡಿದಾ ಮಹಿಮರನು
ಭವ್ಯ ಆಕೃತಿಯಿಂದ ಕಂಗೊಳಿಸಿ ಮೆರೆದವರ
ಬೆರಗಾಗಿ ನೋಡಿದರು ಎಲ್ಲೆಲ್ಲೂ ಮಂದಿ
ಹಾದಿಯಲಿ ಹಲವಾರು ಗ್ರಾಮಗಳ ಹಾಯ್ದು
ಪಯಸ್ವಿನೀ ನದಿಯ ದಡ ಮತ್ತೆ ಸೇರಿದರವರು
ಒಳಹೊಕ್ಕರಲ್ಲಿದ್ದ ಗುಡಿಯ ಸೇರಿ
 
ಶಾಸ್ರೋಕ್ತ ನಿಯಮಗಳಿಗನುಸಾರವಾಗಿ
ವ್ಯಾಕರಣ ಮುಂತಾದ ಅಧ್ಯಯನ ಮಾಡಿ
ಅರ್ಥ ನಿರ್ಣಯದಲ್ಲಿ ಕೌಶಲ್ಯ ಸಾಧಿಸಿ
ಖ್ಯಾತ ಪಂಡಿತರಾದ ಹಲವು ವಿಪ್ರೋತ್ತಮರು
ಮೂರ್ಲೋಕ ದಾಚಾರ್ಯ ಆನಂದ ತೀರ್ಥರನು
 
ಕಾಣುವಾ ತವಕದಲಿ ಅಲ್ಲಿಗೈತಂದರು
 
*
 
ಚಂದ್ರಮನ ಹೋಲುವಾ ಮಂದಹಾಸದ ಮೊಗವು
 
ಕಮಲಪುಷ್ಪದ ಪರಿಯ ಮುದಗೊಳಿಪ ಕಣ್ಣುಗಳು
ಹೊನ್ನ ಕಾಂತಿಯ ದೇಹ, ಮೃದು ಮಧುರ ಮಾತುಗಳು
ಯಾವ ಭೂಷ
ಮೂರ್ಲೋಕ ಭೂಷಣರು
 
ಇಂಥ ಮಹಿಮರು ನಮ್ಮ ಆನಂದ ತೀರ್ಥರನು
ಕಾಣುವಾ ತವಕದಲ್ಲಿ ಧಾವಿಸಿತು ಮಂದಿ
 
ಐದನೆಯ ಸರ್ಗ / 85
 
48
 
49
 
50
 
51