This page has not been fully proofread.

"ಆನಂದ ತೀರ್ಥರದು ಬಹು ಭವ್ಯ ಆಕೃತಿ
ಸಕಲ ಸಲ್ಲಕ್ಷಣದಿಂದ ಸಂಪನ್ನ ದೇಹ
ಪ್ರಾಜ್ಞ, ಪ್ರಕೃತಿಗಳಿಗೆ ಸರಿಯಾದ ಲಕ್ಷಣ"
ಎಂದು ಹೊಗಳಲು ಅಲ್ಲಿ ನೆರೆದಿದ್ದ ಬಲ್ಲ ಜನ
"ಸಂಕರ' ನ ಕಿಂಕರರು ಮತ್ತೇನೂ ಅರಿಯದಲೆ
ಅಧಿಕ ಗಾತ್ರದ ಅವನ ಪೃಷ್ಠವನೆ ಹೊಗಳಿದರು
 
"ಪೃಷ್ಠಭಾಗದ ಗಾತ್ರ ಮಿತಿಯೊಳಗೆ ಇರಬೇಕು
ಲಕ್ಷಣದ ಶಾಸ್ತ್ರಗಳು ಸಾರುತಿದೆ ಹೀಗೆಂದು
 
ಖತಿಗೊಂಡ ಸಂಕರನು ಈ ಮಾತ ಕೇಳಿ
 
ಪಣ ತೊಟ್ಟ ಖಂಡಿಸಲು ಆಚಾರ್ಯ ದಂಡವನು
ಅವನ ಸಾಮರ್ಥ್ಯಕ್ಕೆ ಸರಿಯಾದ ಮಾತಲ್ಲ
ಆದರೂ ಇಂಥ ಹಟ ದುಷ್ಟರಿಗೆ ಸಹಜ
 
ಕನ್ಯಾಕುಮಾರಿ, ರಾಮೇಶ್ವರ ಸಂದರ್ಶನ
 
ಕೇರಳದಿ ಹಲವಾರು ತೀರ್ಥದರ್ಶನ ಮಾಡಿ
 
ತೆರಳಿದರು ತ್ವರೆಯಿಂದ ಆನಂದ ತೀರ್ಥರು
ಕನ್ಯಕಾತೀರ್ಥದಲ್ಲಿ ಸ್ನಾನವನ್ನು ಮಾಡಿ
ಸಮುದ್ರಸೇತುವನು ಸಂದರ್ಶಿಸಿದರು
ರಾಮೇಶ್ವರವೆಂಬೊಂದು ತೀರ್ಥಕ್ಷೇತ್ರವ ಸೇರಿ
ಶ್ರೀ ರಾಮನಾಥನಿಗೆ ಭಕ್ತಿಯಲ್ಲಿ ನಮಿಸಿದರು
 
ಯತಿವೇಷ ಧಾರಿಯನು ಎದುರಾಗಿ ಕಂಡು
ದಂಡವನು ತೋರುತ್ತ ಆನಂದ ತೀರ್ಥರು
ನಗುನಗುತ ಆತನಿಗೆ ನುಡಿದರಿಂತೆಂದು
 
"ಕೋಪಿಷ್ಠ, ಗರ್ವಿಷ್ಠ, ಮಂದಮತಿಯವನೇ !
ನೀ ತೊಟ್ಟ ಪಣದಂತೆ ಮುರಿ, ಈ ದಂಡವ
ಇಲ್ಲದಿರೆ ನೀನೊಬ್ಬ ಷಂಡ, ಭಂಡ "
 
ಐದನೆಯ ಸರ್ಗ / 83
 
40
 
41
 
42
 
43