This page has not been fully proofread.

सौन्दर्यलहरी
 
ತಿಳಿ
 
ಓ ದೇವಿ ! ಬ್ರಹ್ಮ ವಿಷ್ಣು-ರುದ್ರರೆಂಬ ಸೇವಕರು ಕೊನೆಗೆ ನಿನ್ನ ಮಂಚವಾದರು.
ಸದಾಶಿವನು ಮಾತ್ರ ಶುಭ್ರಕಾಮಯವಾದ ಹೊದ್ದಿಕೆಯಾಗಿದ್ದಾನೆ, ಮತ್ತು ನಿನ್ನ
ಎಳೆಗೆಂಪಾದ ಕಾನಿಯ ಪ್ರತಿಫಲನದಿಂದ ಮೂರ್ತಿವೆತ್ತ ಶೃಂಗಾರರಸದಂತೆ ನಿನ್ನ
ಕಣ್ಣುಗಳನ್ನು ತಣಿಸುತ್ತಿದ್ದಾನೆ.
 
93. ಅರಾಲಾ ಕೇಶೇಷ-P, 186,
ದೇವೀಸೌಂದರ್ಯವರ್ಣನೆ
 
(ಸಕಲಾಭೀಷ್ಟ ಸಿದ್ಧಿ)
 
ಕುಟಿಲವಾದ ಮುಂಗುರುಳುಗಳಿಂದಲೂ, ಸ್ವಭಾವಸರಳವಾದ ಮುಗುಳ್ನಗೆ
ಯಿಂದಲೂ, ಶಿರೀಷಕುಸುಮದಂತೆ ಸುಕುಮಾರವಾದ ಮನಸ್ಸಿನಿಂದಲೂ, ಕಠಿಣವಾದ
ಸ್ತನಗಳಿಂದಲೂ, ಕೃಶವಾದ ನಡುವಿನಿಂದಲೂ ಸ್ಕೂಲವಾದ ಸ್ತನ-ನಿತಂಬಗಳಿಂದಲೂ
ಕೂಡಿದ ಅರುಣವರ್ಣವಾದ ಸದಾಶಿವನ ಕರುಣಾಮಯಶಕ್ತಿಯು ಜಗತ್ತೆಲ್ಲವನ್ನೂ
ಕಾಪಾಡಲು ಸಮರ್ಥವಾಗಿದೆಯಲ್ಲವೇ ?
 
94. ಕಲಂಕಃ ಕಸ್ತೂರೀ-P. 187.
ಚಂದ್ರಮಂಡಲವೇ ದೇವಿಯ ಕರ್ಪೂರಕರಣ
(ಇಷ್ಟಾರ್ಥಸಿದ್ಧಿ )
 
ಓ ದೇವಿ ! ಚಂದ್ರಮಂಡಲದಲ್ಲಿ ಕಾಣುವ ಕಳಂಕವೇ ಕಸ್ತೂರಿ, ಕಲೆಗಳೆಂಬ
ಕರ್ಪೂರದಿಂದ ತುಂಬಿದ ಜಲಮಯವಾದ ಆತನ ಮಂಡಲವೇ ಮರಕತಮಣಿಮಯ
 
ಮತ್ತೆ ಮತ್ತೆ ಪ್ರಾಯಶಃ ನಿನಗಾಗಿಯೇ ತುಂಬುತ್ತಿರಬಹುದು.
ವಾದ ಭರಣಿ, ನಿನ್ನ ದೈನಂದಿನ ಭೋಗದಿಂದ ಬರಿಯದಾಗುತ್ತಿರುವ ಇದನ್ನು ಬ್ರಹ್ಮನು
 
95, ಪುರಾರಾತೇರನ್ನಃಪುರಂ P. 188.
ಚಂಚಲಚಿತ್ತರಿಗೆ ದೇವೀಪೂಜಾ ದೌರ್ಲಭ್ಯ
 
(ಸದ್ಯೋವ್ರ ಣವಿರೋಪಣ)
 
ಓ ದೇವಿ ! ನೀನು ತ್ರಿಪುರಸಂಹಾರಕನ ಪಟ್ಟಮಹಿಷಿಯಾಗಿರುವೆ. ಆದ್ದರಿಂದಲೇ
ಚಪಲ ಚಿತ್ರರಿಗೆ ನಿನ್ನ ಪಾದಗಳನ್ನು ಪೂಜಿಸುವುದು ಅಷ್ಟೇನೂ ಸುಲಭವಲ್ಲ. ಆದ್ದ
ರಿಂದಲೇ ಇಂದ್ರಾದಿ ದೇವತೆಗಳೂ ಸಹ ನಿನ್ನ ಬಾಗಿಲಿನ ಹತ್ತಿರದಲ್ಲೇ ಇರುವ ಅಣಿ
 
CC-0. Jangamwadi Math Collection. Digitized by eGangotri