This page has been fully proofread once and needs a second look.

ಸಂಗ್ರಹರಾಮಾಯಣ
 
ಮಾಲ್ಯವಂತ, ಸುಮಾಲ, ಮಾಲಿ ಎಂದು ಮೂವರು ಮಕ್ಕಳು. ಅವರು
ಮೂವರೂ ಬ್ರಹ್ಮವರದಿಂದ ಅವಧ್ಯರಾಗಿದ್ದರು. ಬ್ರಾಹ್ಮಣ ಹಿಂಸೆ ಅವರ
ಕುಲವ್ರತ. ಲಂಕೆ ಅವರ ರಾಜಧಾನಿ. ಈ ಮೂವರಿಂದ ಮೂರು ಲೋಕವೂ
ಬೆದರಿತು. ದೇವತೆಗಳು ಶಂಕರನನ್ನು ಶರಣು ಹೋದರು.
 
ಕವ
 

 
ಬಂದ ದೇವತೆಗಳನ್ನು ಶಂಕರನು ಸಂತೈಸಿದನು.
 
66
 

 
" ಬ್ರಹ್ಮನ ವರವನ್ನು ಮಾರಿ ನಾನು ಅವರನ್ನು ಕೊಲ್ಲಲಾರೆ. ಈಗ
ನಮಗೆ ಉಳಿದಿರುವುದು ಒಂದೇ ದಾರಿ,. ಶ್ರೀ ಹರಿಗೆ ಶರಣಾಗುವುದು. ಬನ್ನಿ,
ಅವನು ನಮಗೆ ಒಳಿತನ್ನುಂಟುಮಾಡುವನು."
 

 
ಕ್ಷೀರಸಾಗರದ ತಡಿಯಲ್ಲಿ ದೇವತೆಗಳು ಶ್ರೀಹರಿಯನ್ನು ಬಿನ್ನವಿಸಿಕೊಂಡರು:
*

"
ಜಗನ್ನಾಥ ! ಸುಕೇಶನ ಮಕ್ಕಳಿಂದ ನಮ್ಮನ್ನು ಪಾರುಗಾಣಿಸು.
ಜಗತ್ತನ್ನು ಪ್ರಳಯದ ಬಾಗಿಲಿಂದ ತಪ್ಪಿಸು. "
 

 
ದೈತ್ಯರನ್ನು ಸಂಹರಿಸಲು ಭಗವಂತನು ಗರುಡನನ್ನೇರಿ ಬಂದನು.
ರಕ್ಕಸರೆಲ್ಲ ಯುದ್ಧಕ್ಕೆ ಅಣಿಯಾಗಿ ಬಂದೆರಗಿದರು. ಬೆಂಕಿಯಲ್ಲಿ ಬಿದ್ದ ಪತಂಗ
ಗಳಂತೆ ಅವರ ಪಾಡಾಯಿತು. ಅಂದು, ಮಾಲಿ ತೋರಿದ ಕೆಚ್ಚು, ದೇವತೆ
ಗಳೂ ಅಚ್ಚರಿಪಡುವಂಥದು. ಆದರೆ ಶ್ರೀಹರಿಯ ಮುಂದೆ ಯಾರ ಕೆಚ್ಚು
ಏನು ನಡೆದೀತು ? ಮಾಲಿ ಮಡಿದುರುಳಿದನು . ಸುಮಾಲಿ ಮತ್ತು ಮಾಲ್ಯ
ವಂತ ತಲೆತಪ್ಪಿಸಿ ಕೊಂಡರು. ದೇವತೆಗಳು ನೆಮ್ಮದಿಯ ನಿಟ್ಟುಸಿರುಗರೆದರು.
 

 
ಯುದ್ಧದಲ್ಲಿ ಓಡಿಹೋದ ಸುಮಾಲಗೆ ಮನಸ್ಸಿನಲ್ಲಿ ಕಿಚ್ಚು ತಾಂಡವ
ವಾಡುತ್ತಿತ್ತು.
ತೊಟ್ಟನು.
 
ಯುದ್ಧದಲ್ಲಿ ಓಡಿಹೋದ ಸುಮಾಲಗೆ ಮನಸ್ಸಿನಲ್ಲಿ ಕಿಚ್ಚು ತಾಂಡವ
ದೇವತೆಗಳನ್ನು ಹೇಗಾದರೂ ಸದೆಬಡಿಯ -ಬೇಕೆಂದು ಪಣ
ತೊಟ್ಟನು. ಅದಕ್ಕೆಂದೇ ತನ್ನ ಮಗಳು ಕೈಕಸಿಯನ್ನು ಪಾತಾಳದಿಂದ ಕರೆದು
ಕೊಂಡು ಬಂದು ವಿಶ್ರವಸನ ಬಳಿ ಬಿಟ್ಟನು. ಕೈಕಸಿಯ ಯೌವನ-ಲಾವಣ್ಯ
ತಾಪಸನ ಮನಸ್ಸಿಗೆ ನಾಟಿತು. ವಿಶ್ರವಸ-ಕೈಕಸಿಯರು ಜತೆಯಾದರು.
ಮೊದಲು ಹತ್ತು ತಲೆಯ ಮಗನೊಬ್ಬ ಹುಟ್ಟಿದ. ಅನಂತರ ಕುಂಭಕರ್ಣ.
ಮೂರನೆಯವಳು ಶೂರ್ಪಣಖೆ, ಕೊನೆಯವನೆ ಪುಣ್ಯಾತ್ಮನಾದ ವಿಭೀಷಣ.
 

 
ತನ್ನ ಸವತಿಯ ಮಗ ಕುಬೇರನ ಸಿರಿಯನ್ನು ಕಂಡು ಕೈಕಸಿಗೆ ಕಿಚ್ಚಾ -

ಯಿತು. ಅವಳು ತನ್ನ ಮಕ್ಕಳನ್ನು ತಪಸ್ಸಿಗೆ ಪ್ರಚೋದಿಸಿದಳು. ಮೂವರೂ
ಸೋದರರು ಸಾವಿರ-ಸಾವಿರ ವರ್ಷಕಾಲ ತಪಸ್ಸನ್ನಾಚರಿಸಿದರು.
 
- ಸಿದರು.