This page has been fully proofread once and needs a second look.

ಮಿಂಚಿನಬಳ್ಳಿ
 
ನನ್ನು ನಮ್ಮ ರಾಷ್ಟ್ರದ ಅಧಿನಾಯಕನನ್ನು ಜಗತ್ಪ್ರಭುವನ್ನು, ಕಾಡಿನಿಂದ ನಾಡಿಗೆ
 
66
 
ಕರೆದೊಯ್ಯಲು ಬಂದಿದ್ದೆನೆ."
 
"
ಧನ್ಯ, ಭರತ ಧನ್ಯ. ನೀನು ರಾಮನ ತಮ್ಮನೇ ನಿಜ, " ಎಂದು
ಭರದ್ವಾಜರು ಅವನನ್ನು ಕೊಂಡಾಡಿ ದರು. ಆವತ್ತಿನ ಆತಿಥ್ಯ ತಮ್ಮಲ್ಲಿಯೆ
ನಡೆಯ ಬೇಕೆಂ- ದು ಕೇಳಿಕೊಂಡರು. ಸಿದ್ಧ ಪುರುಷರಾದ ಭರದ್ವಾಜ- ರು ಭಗವತ-
ತ್ಪ್ರಸಾದದಿಂದ ಆ ಕಾಡಿನಲ್ಲಿ ಆ ಅಸಂಖ್ಯಾತ ಸೈನಿಕರಿಗೆ- ಜಾನಪದರಿಗೆ ರಾಜ
ಭೋಗ- ವನ್ನುಣಿಸಿದರು. ಯಾರು ಏನನ್ನು ಬಯಿಸಿದರೆ ಅದು ಅವರಿಗೆ
ದೊರಕುತ್ತಿತ್ತು.
 
ಕಲಿ
 

 
ಮರುದಿನ ಪ್ರಾತಃಕಾಲ ಹೊರಟುನಿಂತ ಭರತನು ಮಹರ್ಷಿಯನ್ನು ವಂದಿ
ಸಿದನು,. ರಾಜಮಹಿಷಿ- ಯರೂ ಮುನಿಗೆ ತಲೆವಾಗಿದರು.
 

 
ಭರದ್ವಾಜರಂದರು :
 
*

 
"
ಈ ಮೂರು ಮಹಿಷಿಯರು ಯಾರು ಯಾರು ಎಂದು ಪರಿಚಯಿಸಿ
ಕೊಡು ಭರತ. "
 
*

 
"
ನಿಮಗೆ ಮೊದಲು ವಂದಿಸಿದವಳು ಪುತ್ರವಿರಹ ದಿಂದ ದುಃಖಿತಳಾದ
ಮಾತೆ ಕೌಸಲ್ಯೆ,, ಅವಳ ಬಳಿ ಯಲ್ಲಿರುವಾಕೆ ವೀರರಾದ ಲಕ್ಷ್ಮಣ-ಶತ್ರುಘ್ನರ

ಜನನಿಯಾದ ಸುಮಿತ್ರೆ, - ಅಲ್ಲಿ ನಾಚಿಕೆಯಿಂದ ತಲೆ ತಗ್ಗಿಸಿ ನಿಂತವಳೆ
ರಾಮನನ್ನು ಕಾಡಿಗಟ್ಟಿದ ಹೆಂಗಸು-ಕೈಕೇಯಿ; ನಿರ್ಭಾಗ್ಯನಾದ ಈ ಭರತನನ್ನು

ಹಡೆದ ತಾಯಿ,. "
 

 
ಆಗ ಭರದ್ವಾಜರು ಸಮಾಧಾನಗೊಳಿಸಿದರು :
 
(6
 
*

 
"
ಭರತ, ಕೈಕೇಯಿ ಒಂದು ನಿಮಿತ್ತ ಮಾತ್ರ. ರಾಮಚಂದ್ರ ದೇವ
ಕಾರ್ಯಕ್ಕಾಗಿ ಕಾಡಿಗೆ ತೆರಳಿ- ದ್ದಾನೆ. ತಾಯಿಯ ಮೇಲೆ ತಪ್ಪನ್ನು ಹೊರಿಸ
ಬೇಡ, ಪ್ರಭುವಿನ ಲೀಲಾ ನಾಟಕಕ್ಕೆ ನಾವೆಲ್ಲ ಒಂದಲ್ಲ ಒಂದು ನಿಮಿತ್ತಗಳು-
ಅಷ್ಟೆ. "
 

 
ಭರದ್ವಾಜರ ಒಪ್ಪಿಗೆ ಪಡೆದು ಅವರಿಂದ ರಾಮನ ಆಶ್ರಮದ ತಾಣವನ್ನು
ತಿಳಿದುಕೊಂಡು ಭರತನು ಅಲ್ಲಿಂದ ಹೊರಟನು. ಕ್ರಮೇಣ ಯಮುನೆಯನ್ನು

ದಾಟಿ ಚಿತ್ರಕೂಟವನ್ನು ಸೇರಿದನು. ಚಿತ್ರಕೂಟದ ತಪ್ಪಲಲ್ಲೆ ಸೈನ್ಯವನ್ನು
ನಿಲ್ಲಿಸಿ ಪುರೋಹಿತರೊಡನೆ-ಮಾತೆಯರೊಡನೆ ಭರತನು ಮುಂದುವರಿದನು.