This page has not been fully proofread.

ಸಂಗ್ರಹರಾಮಾಯಣ
 
ಭರತನ ಮಾತನ್ನು ಕೇಳಿದವರೆಲ್ಲರೂ ಸಂತಸದಿಂದ "ರಾಮ ಭಕ್ತನಾದ
ನಿನಗೆ ಮಂಗಳವಾಗಲಿ " ಎಂದು ಕೊಂಡಾಡಿದರು.
 
22
 
ಸೈನಿಕರು-ಪ್ರಜೆಗಳ ಸಹಿತ ರಾಮನಿದ್ದಲ್ಲಿಗೆ ಹೋಗುವುದಕ್ಕಾಗಿ ಭರತನು
ಶಿಲ್ಪಿಗಳಿಂದ ಆಳುಗಳಿಂದ ರಸ್ತೆಯನ್ನು ರಚಿಸಿದನು. ರಸ್ತೆ ಸಿದ್ಧವಾದೊಡನೆ
`ಪ್ರಯಾಣ ಸಾಗಿತು. ತಾಯಂದಿರ ಜತೆಗೆ ಹೊರಟ ಭರತನನ್ನು ಎಲ್ಲ ಪೌರರೂ
ಅನುಸರಿಸಿದರು. ತಗ್ಗಿದ್ದಲ್ಲಿ ಹರಿವುದು ನೀರಿನ ಸ್ವಭಾವವಲ್ಲವೆ ? ಬಲಗುಂದಿದ
ಮುದುಕರು-ಮಕ್ಕಳು ಕೂಡ ರಾಮನನ್ನು ಕಾಣುವ ಆಸೆಯಿಂದ 'ನಾನು
ತಾನು' ಎಂದು ಈ ಕೂಟದಲ್ಲಿ ಸೇರಿಕೊಂಡರು !
 
ಗಂಗೆಯ ತಡಿಯಲ್ಲಿ ಸೈನ್ಯ ತಂಗಿತು. ಭರತನು ಗಂಗೆಯಲ್ಲೊಮ್ಮೆ ಪಿತೃ
ತರ್ಪಣವನ್ನಿತ್ತನು. ಈ ಅಸಂಖ್ಯ ಸೇನೆಯನ್ನು ಕಂಡು ಗುಹನಿಗೆ ಸಂಶಯ
ಮೂಡಿತು. ಭರತನು ರಾಮನಿಗೆ ಎರಡೆಣಿಸಿ ಬಂದಿರಬಹುದೆ ? ಆದರೆ ಭರತ
ನನ್ನು ಕಂಡಾಗ ಅವನೊಡನೆ ಮಾತನಾಡಿದಾಗ, ಗುಹನು ತನ್ನ ಸಂಶಯಕ್ಕಾಗಿ
ತಾನೇ ನಾಚಿಕೊಳ್ಳುವಂತಾಯಿತು.
 
ಗುಹನು ಭರತನ ಬಯಕೆಯಂತೆ-ರಾಮನು ಇಳಿದಿದ್ದ ತಾಣ-ಅವನು
ಮಲಗಿದ್ದ ತಾಣ-ಅವರಿಬ್ಬರೂ ಭೆಟ್ಟಿಯಾದಲ್ಲಿರುವ ಇಂಗುದೀವೃಕ್ಷ-ಎಲ್ಲವನ್ನೂ
ತೋರಿಸಿದನು. ಭರತನಿಗೆ ಇದನ್ನೆಲ್ಲ ಕಾಣುವುದು ಸಾಧ್ಯವಾಗಲಿಲ್ಲ. ಅವನು
ಸಹಿಸಲಾರದೆ ಕುಸಿದು ಬಿದ್ದು ಬಿಟ್ಟ. ರಾಮ-ಸೀತೆಯರನ್ನೂ ಲಕ್ಷ್ಮಣನನ್ನೂ
 
ನೆನೆದು ಕೊಂಡಾಡಿದ.
 
ಆ ರಾತ್ರಿ ಹೀಗೆಯೇ ಸಾಗಿತು. ಅನಂತರ ಪ್ರಾತಃಸಂಧ್ಯೆಯನ್ನು ತೀರಿಸಿ
ಕೊಂಡು ಭರತನು ಪರಿವಾರದೊಡನೆ ಗುಹನ ಸಹಕಾರದಿಂದ ಗಂಗೆಯನ್ನು
ದಾಟಿ ಪ್ರಯಾಗವನ್ನು ಸೇರಿದನು. ಅಲ್ಲಿ ಭರದ್ವಾಜ ಮುನಿಗಳ ದರ್ಶನವಾಯಿತು.
ಭರತನ ಮಹಾ ಸೇನೆಯನ್ನು ಕಂಡು ಮುನಿಗಳೂ ಚಿಕಿತ್ಸಕ ದೃಷ್ಟಿಯಿಂದ
ನುಡಿದರು :
 
ರಾಮನನ್ನು ಕಾಡಿಗೆ ಕಳುಹಿಸಿಯಂತೂ ಆಯಿತು. ಈ ಸೈನ್ಯವನ್ನು
ಕಟ್ಟಿಕೊಂಡು ಇನ್ನೂ ಏನು ಮಾಡಬೇಕೆಂದಿರುವೆ ಭರತ ? "
 
C
 
* ಮಹರ್ಷಿ, ತಾಯಿಯ ಕೈತವದಿಂದ ನನಗೆ ತಲೆ ತಗ್ಗಿಸುವಂತಾಗಿದೆ.
ನಾನು ಬಂದದ್ದು ತಾಯಿಯ ಬಯಕೆಯನ್ನು ನಡೆಯಿಸಲಿಕ್ಕಲ್ಲ; ನಮ್ಮ ಅಣ್ಣ