This page has been fully proofread once and needs a second look.

ಹೊನ್ನ ಹಾವುಗೆ ಹೊತ್ತು ತಂದನು
 
ಸೂರ್ಯನ ಹೊಂಬೆಳಕು ಅಯೋಧ್ಯೆಯನ್ನು ಬೆಳಗಿಸಿದರೂ ಭರತನ ಅಂತರಂಗದಲ್ಲಿ ಇನ್ನೂ ಕತ್ತಲು ದಟ್ಟೈಸಿತ್ತು. ಅದನ್ನರಿತ ವಸಿಷ್ಠರು ಮುಂದಿನ ಕಾರ್ಯಕ್ಕಾಗಿ ಅವನನ್ನು ಪ್ರೇರಿಸಿದರು:
 
"ಆಯುಷ್ಮನ್, ಎದ್ದೇಳು. ತಂದೆಯ ಉತ್ತರಕ್ರಿಯೆ- ಯನ್ನು ನೆರವೇರಿಸು. ತೆರವಾದ ರಾಜಾಸನವನ್ನ- ಲಂಕರಿಸು, ನಡೆದುದಕ್ಕಾಗಿ ಚಿಂತಿಸಬೇಡ. ಇದೆಲ್ಲ ಕಾಲಪುರುಷನ ಲೀಲೆ. ವಿದ್ವಾಂಸರು ಸುಖಬಂದಾಗ ಉಬ್ಬುವುದಿಲ್ಲ; ದುಃಖಬಂದಾಗ ಕುಗ್ಗುವುದೂ ಇಲ್ಲ. ಲೋಕದ ಗತಿಯೇ ಹೀಗೆ ! "
 
ಕಣ್ಣೀರನೊರಸುತ್ತ ಭರತನು ಪಡಿನುಡಿದನು:
 
"ಗುರುಗಳೆ, ದುಃಖದಲ್ಲಿ ಕುಗ್ಗದಷ್ಟು ನನ್ನ ಪ್ರಜ್ಞೆ ಇನ್ನೂ ಪಕ್ವವಾಗಿಲ್ಲ. ರಾಮನನ್ನು ಬಿಟ್ಟು ನಾನಿರ ಲಾರೆ. ಕಾಡಿನಲ್ಲಿ ರಾಮನಸೇವೆ ಮಾಡಿಕೊಂಡಿ-
ರುವುದು ಸಾಮ್ರಾಜ್ಯಸುಖಕ್ಕಿಂತ ನೂರುಪಟ್ಟು ಮಿಗಿಲು. ಬ್ರಹ್ಮನಂದನರಾದ ಮಹರ್ಷಿಗಳೆ, ಜಗನ್ನಾಥನಾದ ರಾಮಚಂದ್ರನನ್ನು ಕಾಡಿಗಟ್ಟಿ 'ಸ್ವಾಮಿನ್', 'ಮಹಾರಾಜ' ಎಂದು ನಿಮ್ಮಿಂದ ಸಂಬೋಧಿಸಿಕೊಳ್ಳುವ ನಾಟಕ ನನಗೆ ಬೇಡ."
 
ಭರತನ ಸೌಜನ್ಯವನ್ನು ಕಂಡು ಪ್ರಜೆಗಳೂ ಕಾರುಣ್ಯದಲ್ಲಿ ಕರಗಿಹೋದರು !
 
ವಸಿಷ್ಠರು ಭರತನನ್ನು ರಾಣೀವಾಸಕ್ಕೆ ಕರೆ- ದೊಯ್ದರು. ಅಲ್ಲಿ ಎಣ್ಣೆಯ ದೋಣಿಯಲ್ಲಿ ಹಾಕಿದ್ದ ದಶರಥನ ಕಳೇಬರವನ್ನು ಕಂಡಾಗ ಭರತನಿಗೆ ದು:ಖ
ತಡೆಯಲಾಗಲಿಲ್ಲ. ಅಂತಃಪುರದ ಹದಿನಾಲ್ಕು ಸಾವಿರ ಸ್ತ್ರೀಯರು, ರಾಜಪತ್ನಿಯರು ಎಲ್ಲರೊಡನೆ ಭರತನೂ ಗೋಳೋ ಎಂದು ಅತ್ತು ಬಿಟ್ಟನು.
 
ಮತ್ತೆ ವಸಿಷ್ಠರೇ ಬಂದು ಸಮಾಧಾನಗೊಳಿಸ- ಬೇಕಾಯಿತು:
 
" ಪ್ರಾಕೃತಜನರಂತೆ ಅಳುತ್ತ ಕುಳಿತಿರುವುದು ಚೆನ್ನಲ್ಲ ಭರತ, ಬಂಧುಗಳ ಕಣ್ಣೀರು ಸ್ವರ್ಗದಲ್ಲಿ- ರುವ ಪುಣ್ಯಜೀವಿಯನ್ನು ಕೆಳಕ್ಕೆ ತಳ್ಳುವುದಂತೆ. ಕಣ್ಣೊರಸಿಕೊ ಭರತ. ಮುಂದಿನ ಕೆಲಸಕ್ಕೆ ಅಣಿ- ಯಾಗು. "
 
ಭರತನು " ಗುರುಗಳ ಅಪ್ಪಣೆ " ಎಂದು ಎದ್ದು ಹೊರಟನು. ಅವನು ಬರುತ್ತಿದ್ದಾಗ ದಾರಿಯಲ್ಲಿಯ ಕೆಲಸದಾಳುಗಳು ಅವನಿಗೆ ಮಹಾರಾಜನಿಗೆಂಬಂತೆ