This page has been fully proofread once and needs a second look.

ಮಿಂಚಿನಬಳ್ಳಿ
 
ರಾಮಚಂದ್ರ ಕಾಲುನಡಿಗೆಯಿಂದ ಕಾಡಿಗೆ ಹೊರಟು ದನ್ನು ಕಂಡು, ಮಹಾರಾಜ
ಸುಮಂತ್ರನನ್ನು ಕರೆದು ಆಜ್ಞಾಪಿಸಿದ
 
66
 
*

 
"
ಸುಮಂತ್ರ, ನನ್ನ ಕಂದನನ್ನು ನನ್ನ ರಥದಲ್ಲಿ ಕರೆದುಕೊಂಡು ಹೋಗು,
ತಾಯಿ-ತಂದೆಯರು ಕೈಬಿಟ್ಟ ಮಗನನ್ನು ಕಾಡಿಗೆ ಬಿಟ್ಟು ಬಾ ಸುಮಂತ್ರ."
 

 
ಒಡನೆ ಸುಮಂತ್ರ ರಥವನ್ನು ದ್ವಾರದಲ್ಲಿ ತಂದಿರಿಸಿದ. ಚೀರವಸನೆ
ಯಾದ ಸೀತೆಯನ್ನು ಕಂಡು, ಮಹಾರಾಜ ಕೋಶಾಧ್ಯಕ್ಷನನ್ನು ಬರಿಸಿ

ನುಡಿದನು:
 
&0
 

 
"ಬೆಲೆಬಾಳುವ ಬಟ್ಟೆಗಳು, ಬಂಗಾರದ ತೊದೊಡವೆ ಗಳು ಇನ್ನೂ ಎಲ್ಲ
ಸಿಂಗಾರದ ಬಗೆಗಳನ್ನು ನನ್ನ ಸೊಸೆ ಸೀತೆಗೆ ತಂದುಕೊಡು,"
 
."
 
ಕೋಶಾಗಾರದ ಅಮೂಲ್ಯ ಆಭರಣಗಳು ಸೀತೆಯ ಮೈಯಲ್ಲಿ ತೊಳಗಿದವು.
ಕೌಸಲ್ಯೆ ಸೀತೆಯನ್ನು ಮಗಳಂತೆ ಮುಂಡಾಡಿ ನುಡಿದಳು:
 

 
"ಮಗಳೆ ! ನಾನು ಬಲ್ಲೆ, ರಾಮಚಂದ್ರನ ಮೇಲೆ ನಿನಗೆ ತುಂಬ ಒಲವು.
ಅವನು ಯಾವುದೋ ದುರ್ವಿಪಾಕದಿಂದ ಕಾಡಿಗೆ ತೆರಳುತ್ತಿದ್ದಾನೆ. ತಸಿ- ಯಾದ
ಗಂಡನನ್ನು ಹಳಿಯಬೇಡ ತಾಯಿ. ಅವನ ಮನಸ್ಸು ನೋಯುವಂಥ ಯಾವ
ಮಾತನ್ನೂ ಆಡಬೇಡ, ಸಾಧಿಧ್ವಿಯಾಗಿ ಬಾಳು. "
 
(6
 

 
" ಅತ್ತೆ ! ಗಂಡನನ್ನು ಗೌರವಿಸದ ಕುಸಂಸ್ಕೃತ- ರೊಡನೆ ನನ್ನನ್ನು
ಹೋಲಿಸಬೇಡಿ. ಗಂಡನಿಲ್ಲದ ತರುಣಿ ಗಾಲಿಯಿಲ್ಲದ ತೇರು ಎಂದು ನನಗೆ
ಗೊತ್ತು. ತಂತಿಯಿಲ್ಲದ ವೀಣೆ ಎಂದಿಗೂ ನುಡಿಯಲಾರದು. "
 

 
ಸೊಸೆಯ ಮಾತಿನಿಂದ ಸಂತಸಗೊಂಡ ಕೌಸಲ್ಯೆ ಅವಳನ್ನು ಬಿಗಿದಪ್ಪಿ,
ರಾಮನಿಗೂ ಒಂದೆರಡು ಹಿತದ ನುಡಿಯನ್ನಾಡಿದಳು :
 

 
" ಕಂದ, ಕಾಡಿನಲ್ಲಿ ಎಚ್ಚರಿಕೆಯಿಂದಿರು. ಅಂತೆಯೇ ನನ್ನ ಸೊಸೆಯನ್ನೂ
ಕುಮಾರ ಲಕ್ಷ್ಮಣನನ್ನೂ ಜೋಪಾನವಾಗಿ ನೋಡಿಕೊಂಡಿರು ವತ್ಸ. '
 

 
ಸೊಸೆಯ
 
ರಾ
 
*
"
 
"
ಮಾತೆ, ಈ ತ್ರೈಲೋಕ್ಯದಲ್ಲಿ ದೇವ-ದಾನವರೆಲ್ಲ ಕೂಡಿ ಕದನ ಹೂಡಿ
ನನಗೆ ಸೋಲೆಂಬುದಿಲ್ಲ, ಕಳವಳಗೊಳ್ಳಬೇಡ. ಆದಷ್ಟು ಬೇಗ ನಿನ್ನ
ನ್ಯೂ
ಸೊಸೆಯನ್ನು ಕುಮಾರ ಲಕ್ಷ್ಮಣನನ್ನೂ ಕರೆದು ಕೊಂಡು ಬರುವೆ ತಾಯಿ, "
 
. "
 
ರಾ
ಮಚಂದ್ರನು ಕ್ರಮವಾಗಿ ಮಹಾರಾಜನ ಮುನ್ನೂರೈವತ್ತು ಮಡದಿ
ತಂ
ಯರನ್ನು ವಂದಿಸಿ- ಬೇಡಿಕೊಂಡನು ;