This page has not been fully proofread.

ಮಿಂಚಿನಬಳ್ಳಿ
 
ರಾಮಚಂದ್ರ ಕಾಲುನಡಿಗೆಯಿಂದ ಕಾಡಿಗೆ ಹೊರಟುದನ್ನು ಕಂಡು, ಮಹಾರಾಜ
ಸುಮಂತ್ರನನ್ನು ಕರೆದು ಆಜ್ಞಾಪಿಸಿದ
 
66
 
* ಸುಮಂತ್ರ, ನನ್ನ ಕಂದನನ್ನು ನನ್ನ ರಥದಲ್ಲಿ ಕರೆದುಕೊಂಡು ಹೋಗು,
ತಾಯಿ-ತಂದೆಯರು ಕೈಬಿಟ್ಟ ಮಗನನ್ನು ಕಾಡಿಗೆ ಬಿಟ್ಟು ಬಾ ಸುಮಂತ್ರ."
 
ಒಡನೆ ಸುಮಂತ್ರ ರಥವನ್ನು ದ್ವಾರದಲ್ಲಿ ತಂದಿರಿಸಿದ. ಚೀರವಸನೆ
ಯಾದ ಸೀತೆಯನ್ನು ಕಂಡು, ಮಹಾರಾಜ ಕೋಶಾಧ್ಯಕ್ಷನನ್ನು ಬರಿಸಿ
ನುಡಿದನು:
 
&0
 
"ಬೆಲೆಬಾಳುವ ಬಟ್ಟೆಗಳು, ಬಂಗಾರದ ತೊಡವೆಗಳು ಇನ್ನೂ ಎಲ್ಲ
ಸಿಂಗಾರದ ಬಗೆಗಳನ್ನು ನನ್ನ ಸೊಸೆ ಸೀತೆಗೆ ತಂದುಕೊಡು,"
 
ಕೋಶಾಗಾರದ ಅಮೂಲ್ಯ ಆಭರಣಗಳು ಸೀತೆಯ ಮೈಯಲ್ಲಿ ತೊಳಗಿದವು.
ಕೌಸಲ್ಯ ಸೀತೆಯನ್ನು ಮಗಳಂತೆ ಮುಂಡಾಡಿ ನುಡಿದಳು:
 
"ಮಗಳೆ ! ನಾನು ಬಲ್ಲೆ, ರಾಮಚಂದ್ರನ ಮೇಲೆ ನಿನಗೆ ತುಂಬ ಒಲವು.
ಅವನು ಯಾವುದೋ ದುರ್ವಿಪಾಕದಿಂದ ಕಾಡಿಗೆ ತೆರಳುತ್ತಿದ್ದಾನೆ. ತವಸಿಯಾದ
ಗಂಡನನ್ನು ಹಳಿಯಬೇಡ ತಾಯಿ. ಅವನ ಮನಸ್ಸು ನೋಯುವಂಥ ಯಾವ
ಮಾತನ್ನೂ ಆಡಬೇಡ, ಸಾಧಿಯಾಗಿ ಬಾಳು. "
 
(6
 
" ಅತ್ತೆ ! ಗಂಡನನ್ನು ಗೌರವಿಸದ ಕುಸಂಸ್ಕೃತರೊಡನೆ ನನ್ನನ್ನು
ಹೋಲಿಸಬೇಡಿ. ಗಂಡನಿಲ್ಲದ ತರುಣಿ ಗಾಲಿಯಿಲ್ಲದ ತೇರು ಎಂದು ನನಗೆ
ಗೊತ್ತು. ತಂತಿಯಿಲ್ಲದ ವೀಣೆ ಎಂದಿಗೂ ನುಡಿಯಲಾರದು. "
 
ಸೊಸೆಯ ಮಾತಿನಿಂದ ಸಂತಸಗೊಂಡ ಕೌಸಲ್ಯ ಅವಳನ್ನು ಬಿಗಿದಪ್ಪಿ,
ರಾಮನಿಗೂ ಒಂದೆರಡು ಹಿತದ ನುಡಿಯನ್ನಾಡಿದಳು :
 
" ಕಂದ, ಕಾಡಿನಲ್ಲಿ ಎಚ್ಚರಿಕೆಯಿಂದಿರು. ಅಂತೆಯೇ ನನ್ನ ಸೊಸೆಯನ್ನೂ
ಕುಮಾರ ಲಕ್ಷ್ಮಣನನ್ನೂ ಜೋಪಾನವಾಗಿ ನೋಡಿಕೊಂಡಿರು ವತ್ಸ. '
 

 
ಸೊಸೆಯ
 
ರಾ
 
* ಮಾತೆ, ಈ ತ್ರೈಲೋಕ್ಯದಲ್ಲಿ ದೇವ-ದಾನವರೆಲ್ಲ ಕೂಡಿ ಕದನ ಹೂಡಿ
ನನಗೆ ಸೋಲೆಂಬುದಿಲ್ಲ, ಕಳವಳಗೊಳ್ಳಬೇಡ. ಆದಷ್ಟು ಬೇಗ ನಿನ್ನ
ನ್ಯೂ ಕುಮಾರ ಲಕ್ಷ್ಮಣನನ್ನೂ ಕರೆದುಕೊಂಡು ಬರುವೆ ತಾಯಿ, "
 
ಮಚಂದ್ರನು ಕ್ರಮವಾಗಿ ಮಹಾರಾಜನ ಮುನ್ನೂರೈವತ್ತು ಮಡದಿ
ತಂದಿಸಿ ಬೇಡಿಕೊಂಡನು ;