This page has not been fully proofread.

ಮಿಂಚಿನಬಳ್ಳಿ
 
ಮಹರ್ಷಿ ತಂದೆಯ ವಚನಕ್ಕಾಗಿ ಗೋಹತ್ಯೆಯನ್ನೇ ಮಾಡಿದ್ದ. ನೀನು ನನ್ನನ್ನು
ಪ್ರೀತಿಸುವುದಾದರೆ ತಂದೆಯ ಮಾತನ್ನು ನಡೆಸುವಂತೆ ನನಗೆ ಆಶೀರ್ವದಿಸು
ತಾಯಿ." ಹೀಗೆ ತಾಯಿಯನ್ನು ಸಮಾಧಾನಗೊಳಿಸಿ ಲಕ್ಷ್ಮಣನೆಡೆಗೆ ತಿರುಗಿ
ನುಡಿದನು; " ದೈವಸಂಕಲ್ಪಕ್ಕೆ ವಿರುದ್ಧವಾಗಿ ಸಿಟ್ಟಾಗುವುದು ಚೆನ್ನಲ್ಲ ತಮ್ಮ
ಸಮಾಧಾನ ತಾಳು, "
 
ME
 
ಕೈಕೇಯಿಯ ಕಪಟ, ಪ್ರಜೆಗಳ ಕಳವಳ, ರಾಮಚಂದ್ರನ ನಿರ್ವ್ಯಾಜ
ಸರಳತೆಗಳನ್ನು ಯೋಚಿಸಿದಾಗ ಲಕ್ಷ್ಮಣನಿಗೆ ಸಿಟ್ಟು ಬರದಿರುವುದಾದರೂ
ಹೇಗೆ ? ಹುಬ್ಬು ಗಂಟಿಕ್ಕಿತು; ಕಣ್ಣು ಕಿಡಿ ಕಾರಿತು; ಸೆಟೆದು ನಿಂತು ಲಕ್ಷ್ಮಣನು
ತನ್ನ ಖಡ್ಗವನ್ನು ಝಳಪಿಸುತ್ತ ನುಡಿದನು.
 
ಅಣ್ಣ, ನಿನ್ನ ಒಪ್ಪಿಗೆಯಿಲ್ಲದೆ ನಾನೇನನ್ನೂ ಮಾಡುವಂತಿಲ್ಲ. ಇಲ್ಲ
ದಿದ್ದರೆ ನಿನ್ನ ರಾಜ್ಯ ಪ್ರಾಪ್ತಿಗೆ ಕಂಟಕವಾದ ಆ ದೈವ-ಅದರ ಸಂಕಲ್ಪ ಎಂಥದು
ಎಂದು ನೋಡಿಬಿಡುತ್ತಿದ್ದೆ. ಲಕ್ಷ್ಮಣನ ಪೌರುಷ ಇನ್ನೂ ಸತ್ತು ಹೋಗಿಲ್ಲ.
ಈ ಬ್ರಹ್ಮಾಂಡದಲ್ಲಿ ಯಾವನೇ ಆಗಲಿ ನಿನ್ನ ಅಭಿವೃದ್ಧಿಗೆ ಕಿಚ್ಚು ಪಡುವವ
ನಿದ್ದರೆ ಅವನ ರಕ್ತವನ್ನು ಹೀರಲಿಕ್ಕೆ ನನ್ನ ನಿರ್ದಯಿ ಖಡ್ಗಕ್ಕೆ ಏನೂ
ಸಂಕೋಚವಿಲ್ಲ. ಕೈಕೇಯಿ ಕವಡಿನಿಂದ ವರವನ್ನು ಪಡೆದರೆ ಅಖಂಡ
ಪ್ರಜಾವರ್ಗದ ಅಭಿಪ್ರಾಯವನ್ನು ಕಡೆಗಣಿಸಿ-ಒಬ್ಬ ಕೈಕೇಯಿಗಾಗಿ ಈ
ಕೋಟಿಕಂಠದ ಕರೆಯನ್ನು ನಿರ್ಲಕ್ಷಿಸಿ ಕಾಡಿಗೆ ತೆರಳುವುದು ನ್ಯಾಯವೆ ಅಣ್ಣ ??
 
* ಲಕ್ಷಣ, ಯಾವುದಕ್ಕೂ ದುಡುಕಬಾರದು. ಸುಖ-ದುಃಖ ಎನ್ನು
ವುದು ಅರಮನೆಯಲ್ಲಿ ಕಾಡಿನಲ್ಲಿ ಬೆಲೆಗೆ ಪಡೆವಂಥ ಮಾಲಲ್ಲ. ಅದು ಅಂತ
ರಂಗದ ವಿಷಯ, ನಿಸ್ಸಂಗರಾಗಿ ಅಲೆವ ಜನಕ್ಕೆ ಪಟ್ಟಣವೇನು ? ನನವೇನು?
ರಾಮಚಂದ್ರ ರಾಜ್ಯದ ಮೋಹದಿಂದ ತಂದೆಯ ಮಾತನ್ನು ಮಾರಿದ ಎಂದು
ಜನ ಆಡಿಕೊಳ್ಳುವಂತಾಗಬಾರದಲ್ಲ. ನಮ್ಮ ಕುಲದ ಪರಂಪರೆಗೆ ನನ್ನಿಂದಾಗಿ
ಕಲಂಕ ತಟ್ಟಬಾರದಲ್ಲ. ಅದು ಮುಖ್ಯ ವಿಷಯ: ಕಾಡಿನಲ್ಲಿ ತಪಸಿಗಳ
ಸೇವೆ ಮಾಡುತ್ತ ಸುಖವಾಗಿರಬಲ್ಲೆ. ಅಲ್ಲದೆ ಕಾಡಿಗೆ ಹೋಗುವುದರಿಂದ
ಮುಂದೆ ತುಂಬ ಪ್ರಯೋಜನವಾಗಲಿದೆ. ಅದಿರಲಿ ಕುಮಾರ, ನಿನಗೆ ನನ್ನ
ಮೇಲೆ ತುಂಬ ಮಮತೆ, ಅದರಿಂದ ನಿನಗೆ ಹೀಗೆ ತೋರುವುದೂ ಸಹಜ,
ನನ್ನ ಚಿಂತೆ ತೊರೆದುಬಿಡು. ಭರತನೊಡನೆ ತಂದೆ-ತಾಯಂದಿರ ಸೇವೆಗೆ
ದೀಕ್ಷೆತೊಡು, "