This page has been fully proofread once and needs a second look.

ಸಂಗ್ರಹರಾಮಾಯಣ
 
" ಇಂದೇ ಯುವರಾಜನಾಗು ಕಂದ
 
"
 
ಮರುದಿನ ಮುಂಜಾನೆ ಮಹಾರಾಜ ಇನ್ನೂ ಎದ್ದು ಬಾರದ್ದನ್ನು ಕಂಡು
ಕಾರ್ಯಜ್ಞನಾದ ಸುಮಂತ್ರನು ತ್ವರಿತವಾಗಿ ಅಂತಃಪುರವನ್ನು ಪ್ರವೇಶಿಸಿದನು.

ಅಲ್ಲಿ ಮಹಾರಾಜನು ಶಯ್ಕೆಯೆಯಲ್ಲಿ ಮಲಗಿಕೊಂಡೇ ಇದ್ದ. ಸುಮಂತನು ಮೆಲ್ಲನೆ
 
ಉಸುರಿದ:
 
೪೭
 

 
" ಮಹಾರಾಜ, ರಾಜಕಾರ್ಯದಿಂದ ನಿನ್ನನ್ನು ಎಚ್ಚರಿಸಬೇಕಾಗಿದೆ.
ಪೌರ ಜಾನಪದರೆಲ್ಲ ಬಂದು ನೆರೆದಿದ್ದಾರೆ, ಉತ್ಸುಕತೆಯಿಂದ ಅಭಿಷೇಕ ಕ್ಷಣ-

ವನ್ನು ಇದಿರು ನೋಡುತ್ತಿದ್ದಾರೆ. ರಾಮನ ಅಭಿಷೇಕ ಕಾಲ ಸನ್ನಿಹಿತವಾಗಿದೆ.
ಸಭೆಗೆ ಚಿತ್ತೈಸಬೇಕು. "
 

 
ರಾಜ ಒಂದು ಮಾತನ್ನೂ ಆಡಲಿಲ್ಲ. ಬಗ್ಗಿಸಿದ್ದ ತಲೆಯನ್ನೂ ಮೇಲೆ
ತ್ತಲಿಲ್ಲ. ತೋರುವುದಾದರೂ ಯಾವ ಮುಖವನ್ನು ? ಆಡುವದಾದರೂ ಯಾವ

ಮಾತನ್ನು ? ಕೈಕೇಯಿಯೇ ಸುಮಂತ್ರನ ಮಾತಿಗೆ ಮಾರ್ನುಡಿದಳು:
 

 
"
ಸುಮಂತ್ರ, ಪಟ್ಟಾಭಿಷೇಕದ ಸಂತಸದಿಂದ ಮಹಾರಾಜ ರಾತ್ರಿಯಿಡೀ
ಎಚ್ಚರಾಗಿದ್ದ, ಅದರಿಂದ ಈಗ ಜೊಂಪು ಹತ್ತಿರಬೇಕು. ಚಿಂತಿಲ್ಲ, ಬೇಗನೆ

ರಾಮನನ್ನು ಇಲ್ಲಿಗೆ ಕರೆದುಕೊಂಡು ಬಾ,. "
 

 
ಕೈಕೇಯಿಯ ಮಾತನ್ನು ನಿಜವೆಂದು ಬಗೆದ ಮಂತ್ರಿ ಸುಮಂತ್ರನು
ಮರಳುತ್ತಿದ್ದಾಗ ಅಂತಪುರ ದ್ವಾರದಲ್ಲಿ ರಾಜನ ಬರವನ್ನು ಕಾದು ನಿಂತಿದ್ದ
ಮಂತ್ರಿಗಳು-ಪುರೋಹಿತರು ಸುಮಂತ್ರನ ಬಳಿ ವಿಜ್ಞಾಪಿಸಿ- ಕೊಂಡರು.
 
:
 
"
ಮಂತ್ರಿ, ಸೂರ್ಯದೇವ ಉದಿಸುತ್ತಿದ್ದಾನೆ. ಸಾಮಗ್ರಿಯೆಲ್ಲ
ಸಿದ್ಧವಾಗಿದೆ. ಬೇಗನೆ ಚಿತ್ತೈಸುವಂತೆ ಸನ್ನಿಧಾನದಲ್ಲಿ ನಿವೇದಿಸಿಕೊಳ್ಳು."
 

 
ಎಲ್ಲಿ ಕಾಲ ಮೀರೀತೋ ಎನ್ನುವ ದುಗುಡ ಎಲ್ಲರಿಗೂ. ಕಳವಳದಿಂದಲೇ
ಸುಮಂತ್ರ ಮತ್ತೊಮ್ಮೆ ಅಂತಃಪುರವನ್ನು ಸೇರಿ ರಾಜನನ್ನು ನುತಿಸಿ ಎಚ್ಚರಿ

ಸಿದನು:
 

 
" ಓ ಮಹೇಂದ್ರ ತುಲ್ಯನಾದ ಮಹಾರಾಜನೆ. ಓ ರಕ್ಕಸರ ಸೊಕ್ಕನ್ನು
ಮುರಿದ ಮಹಾ ವೀರನೆ, ಓ ರಾಮಚಂದ್ರನನ್ನು ಮಗನನ್ನಾಗಿ ಪಡೆದ ಪುಣ್ಯ

ಚರಿತನೆ ಎಚ್ಚರು, ಎಚ್ಚರು.
 
ರ.