This page has been fully proofread once and needs a second look.

ಸಂಗ್ರಹರಾಮಾಯಣ
 
ಕತ್ತಲಿನ ರೂಪಕ್ಕೆ ತಳ್ಳುವೆಯಾ ? ಸೂರ್ಯನಿಲ್ಲದೆ ಹಗಲೂ ಇಲ್ಲ. ನೀರಿಲ್ಲದೆ
ತಾವರೆಯೂ ಇಲ್ಲ. ರಾಮನಿಲ್ಲದೆ ನಾನೂ ಇಲ್ಲ. ರಾಮಚಂದ್ರನೂ ನಾನೂ
ಇರದ ತಾಣದಲ್ಲಿ ಭರತನೂ ಇರಲಾರನು. ನೀನು ಭರತನ ತಾಯಿ, ನನ್ನ
ಧರ್ಮಪತ್ನಿ, ಅಶ್ವಪತಿ ರಾಜನ ಮಗಳು-ಹೀಗಿದ್ದು ನಮ್ಮ ಮೂವರ ಹೆಸರಿಗೂ
ಮಸಿ ಬಳಿಯುವೆಯಾ ? ನೀನು ಈ ವರೆಗೆ ಇಂಥ ಚುಚ್ಚು ಮಾತುಗಳನ್ನಾಡಿ-
ದವಳಲ್ಲ ! ಇಂದೇನಾಯಿತು ನಿನಗೆ ? ನಿನ್ನ ಎಲ್ಲ ಗುಣಗಳೂ ಈ ಒಂದು
ಮುಳ್ಳಾಮಾತಿನ ಅಪರಾಧಕ್ಕೆ ಸಾಟಿಯಾಗ- ಲಾರವು.
 
೪೫
 
ಲಾರ.
 

 
ಎಲ್ಲರಿಗೂ ಪ್ರಿಯನಾದ, ಗುಣಭರಿತನೂ ಹುಜು ಸ್ವಭಾವದವನೂ
ಆದ ರಾಮಚಂದ್ರನನ್ನು ಯಾವ ಪಾತಕಿಯೂ ಕಿಚ್ಚಿನ ಕಣ್ಣಿನಿಂದ ನೋಡ-
ಲಾರ.
ಇಂದೇನು ನಿನಗೆ ಗರ ಬಡಿದಿದೆ ? ನನಗೆ ರಾಮನೂ ಭರತನೂ
ಇಬ್ಬರೂ ಒಂದೇ ಎಂದು ಈ ಮೊದಲು ಗಳಸುಹುತ್ತಿದ್ದೆಯಲ್ಲ. ಅಂಥ ರಾಮನನ್ನು
-ನಿನ್ನ ಶುಶೂಶ್ರೂಷೆಯಲ್ಲಿ ಭರತನಿಗಿಂತಲೂ ಮೇಲುಗೈ- ಯೆನ್ನಿಸಿದ ರಾಮಚಂದ್ರನನ್ನು
ಕಾಡಿಗಟ್ಟಲು ನಿನಗೆ ಮನಸ್ಸು ಬರುವುದೆ ? ನಿರ್ದೋಷಿಯಾದ ರಾಮಚಂದ್ರನಿಗೆ
*
'ಕಾಡಿಗೆ ಹೋಗು "' ಎಂದು ಯಾವ ಬಾಯಿಂದ ಹೇಳಲಿ ? ಹೊಸ ಹರೆಯ-
ದಲ್ಲೇ ಗಂಡನಿಂದ ಅಗಲಿಸಿ ಪಾಪ, ಆ ಸೀತೆಗಾದರೂ ಯಾವ ಮೋರೆ
ತೋರಿಸುವುದು ?
 
-

 
ನಮ್ಮ ರಾಷ್ಟ್ರದ ಜನಕ್ಕೆ ನಿನ್ನ ಕುರಿತು ಒಳ್ಳೆಯ ಗೌರವದ ಭಾವನೆ
ಯಿದೆ. ಈ ಕುವರ್ತನೆಯಿಂದ ಆ ಗೌರವವನ್ನು ಕಳೆದುಕೊಳ್ಳಬೇಡ. ಈ
ವರಗಳನ್ನು- ಳಿದು ಇನ್ನೇನಾದರೂ ಕೇಳು. ಆದರೆ ಇಂಥ ಮಾತ- ನ್ನು ಮಾತ್ರ
ಆಡಬೇಡ. ಇರೋದೋ ಮುಪ್ಪಡರಿದ ಈ ತಲೆಯನ್ನು ಬಗ್ಗಿ ಬೇಡಿಕೊಳ್ಳುತ್ತಿ-
ದೇ
ದ್ದೆನೆ. ನಿನ್ನ ಪ್ರಿಯಕರನ ಈ ಕರುಣಾವಸ್ಥೆಯನ್ನು ಕಂಡಾದರೂ ನಿನ್ನ
ಮನಸ್ಸು ಕರಗದೆ ? "
 

 
ಮಹಾರಾಜ ಭೂಮಿಯಲ್ಲಿ ಬಿದ್ದು ಹಲುಬು- ತ್ತಿದ್ದಾನೆ. ಆದರೆ ಮಂಥರೆ
ಅರೆದ ಮದ್ದು ಕೈಕೇಯಿ- ಯಲ್ಲಿ ಇನ್ನೂ ಪರಿಣಾಮಕಾರಿಯಾಗಿತ್ತು ! ಅವಳು

ಸೆಟೆದುಕೊಂಡೇ ಉತ್ತರಿಸಿದಳು:
 

 
" ನೀನು ಈ ವರಗಳನ್ನು ಕೊಡದಿದ್ದರೆ ನನ್ನದೇನೂ ಅಭ್ಯಂತರವಿಲ್ಲ.
ಆದರೆ ಮಹಾರಾಜ, ಸ್ವಲ್ಪ ಚಿಂತಿಸು, ನಿನ್ನ ಸತ್ಯಸಂಧತೆಗೆ ಏನು ಬೆಲೆ ಬಂದ

ಹಾಗಾಯಿತು ? ಸತ್ಯ ಬಾಹಿರವಾದ ನಿನ್ನ ಯಶಸ್ಸು - ನಿನ್ನ ಧಾರ್ಮಿಕತೆ