This page has been fully proofread once and needs a second look.

ಸಂಗ್ರಹಾಮಾಯಣ
 
ಬಿಡುತ್ತಾ ಹಡಿಯೊಂದಿದವಳೇ ಕೈಕೇಯಿಯ ರಾಣೀವಾಸಕ್ಕೆ ಬಂದು
"
'ಅಯ್ಯೋ ಕೆಲಸ ಕೆಟ್ಟಿತಲ್ಲಾ' ಎಂದು ಹಲುಬಿದಳು !
 

 
ಆಕಸ್ಮಿಕವಾದ ಈ ಕೂಗನ್ನು ಕೇಳಿ ಕೈಕೇಯಿ ಕಾತರಳಾದಳು. 'ನಡೆದು
ದಾದರೂ ಏನು ? ಏತಕ್ಕೆ ಹೀಗೆ ಕೂಗುತ್ತಿರುವೆ ?"' ಎಂದು ಅಷ್ಟೇ ಲವಲವಿಕೆ
-
ಯಿಂದ ಕೇಳಿದಳು. ಮಾಯಾವಿನಿ ಮಂಥರೆ ತನ್ನ ಬಗೆಯ ಬವಣೆಯನ್ನರು,
 
ಹಿದಳು.
 
*

 
"
ಆ ರಾಮನಿಗೆ ರಾಜ್ಯವಂತೆ ! ಅವನಿನ್ನು ಯುವರಾಜನಂತೆ ! ಬಂತು
ತಾಯಿ, ನಮಗೆ ಕೇಡುಗಾಲ ! "
 

 
ಕೈಕೇಯಿ ಸುದ್ದಿಯನ್ನು ಕೇಳಿದವಳೇ ಆನಂದ- ದಿಂದ ತನ್ನ ಕೊರಳಿನ
ಸ್ವರ್ಣ ಹಾರವನ್ನೇ ಅವಳಿಗೆ ತೊಡಿಸಿದಳು.
 

 
" ಭದ್ರೆ, ಏತಕ್ಕಾಗಿ ಬೆದರಿಕೊಂಡೆ? ನನಗಂಧಮಗೆಂಥ ಕೇಡುಗಾಲ ? ನನಗೆ
ಭರತನಂತೆಯೇ ರಾಮಚಂದ್ರ- ನೂ ಮಗನಲ್ಲವೆ ? ಗುಣಭರಿತನೂ ಪ್ರಜಾ-
ಪ್ರಿಯನೂ ಹಿರಿಯ ಮಗನೂ ಆದ ರಾಮನು ಯುವರಾಜ- ನಾಗುವುದು
ನ್ಯಾಯವೇ ಅಲ್ಲವೆ ? ಅವನು ನನ್ನನ್ನು ತನ್ನ ಹೆತ್ತ ತಾಯಿಯಂತೆಯೇ ಪ್ರೀತಿ
ಸುತ್ತಾನೆ. ನಾನು ಅವನಿಗೆ ಎರಡೆಣಿಸುವುದು ಹೇಗೆ ಸಾಧ್ಯ?
 
*
 
"
 
ನಿರ್ಭಾಗ್ಯ ಮಂಥರೆಯ ಸಿಟ್ಟು ಇಮ್ಮಡಿಯಾಯಿತು. ರಾಣಿ ತೊಡಿಸಿದ
ತೊ
ದೊಡವೆಯನ್ನು ಕಿತ್ತು ಚೆಲ್ಲಿ ಆಕೆ- ಯನ್ನು ಗದರುವಂತೆ ನುಡಿದಳು.
 

 
" ನಿನ್ನ ಈ ವಿನಯವೇ ನಿನಗೆ ಮುಳುವಾಗಲಿದೆ ನೋಡು. ಭಾರಿ
ವಿಪತ್ತಿನ ಮಡುವಿನಲ್ಲಿ ಮುಳುಗ- ಬೇಕೆಂದು ಬಯಸಿರುವೆಯಾ ? ನಿನ್ನ ಸವತಿ
ಯಾದ ಕೌಸಲ್ಯೆಯ ಮೇಲೆಯೇ ರಾಜನಿಗೆ ಒಲವು. ಎಂಥ ಪಕ್ಷಪಾತ ! ಅಯ್ಯೋ !
ಏನೂ ಅರಿಯದ ಮುಗುದೆ ನೀನು, ಅವನ ಕವಡಿಗೆ ಬಲಿಯಾದೆಯಾ ?

ಆಲೋಚಿಸು, ಭರತನನ್ನು ಶತ್ರುಘ್ನನೊಡನೆ ಕೇಯಕ್ಕಟ್ಟಿ ಇಲ್ಲಿ ಪಟ್ಟ
ಕಟ್ಟುವ ಸಂಚು ನಡೆಯುತ್ತಿದೆ. ಇದು ಏತರ ನ್ಯಾಯ ? ವಸಿಷ್ಠರು ಪುರೋಹಿತ
ರಾಗಿದ್ದು, ದಶರಥ ರಾಜನಾಗಿದ್ದು, ರಘುವಂಶದಲ್ಲಿ ಇಂಥ ಅನ್ಯಾಯ

ನಡೆವುದೆ ?
 

 
ಲಕ್ಷ್ಮಣನಂತೂ ರಾಮನ ಬೆನ್ನುಹತ್ತಿದ್ದಾನೆ. ಇದರಲ್ಲಿ ದೂರಾಗು
ವವರು ನಮ್ಮ ಭರತ ಮತ್ತು ಆ ಸುಮಿತ್ರೆಯ ಮಗ ಇಬ್ಬರೇ. ರಾಮ ನಿನ್ನ
 
3