This page has not been fully proofread.

ಸಂಗ್ರಹಾಮಾಯಣ
 
ಬಿಡುತ್ತಾ ರಹಡಿಯೊಂದಿದವಳೇ ಕೈಕೇಯಿಯ ರಾಣೀವಾಸಕ್ಕೆ ಬಂದು
"ಅಯ್ಯೋ ಕೆಲಸ ಕಟ್ಟಿತಲ್ಲಾ' ಎಂದು ಹಲುಬಿದಳು !
 
ಆಕಸ್ಮಿಕವಾದ ಈ ಕೂಗನ್ನು ಕೇಳಿ ಕೈಕೇಯಿ ಕಾತರಳಾದಳು. ನಡೆದು
ದಾದರೂ ಏನು ? ಏತಕ್ಕೆ ಹೀಗೆ ಕೂಗುತ್ತಿರುವೆ ?" ಎಂದು ಅಷ್ಟೇ ಲವಲವಿಕೆ
ಯಿಂದ ಕೇಳಿದಳು. ಮಾಯಾವಿನಿ ಮಂಡ ತನ್ನ ಬಗೆಯ ಬವಣೆಯನ್ನರು,
 
ಹಿದಳು.
 
* ಆ ರಾಮನಿಗೆ ರಾಜ್ಯವಂತೆ ! ಅವನನ್ನು ಯುವರಾಜನಂತೆ ! ಬಂತು
ತಾಯಿ, ನಮಗೆ ಕೇಡುಗಾಲ ! "
 
ಕೈಕೇಯಿ ಸುದ್ದಿಯನ್ನು ಕೇಳಿದವಳೇ ಆನಂದದಿಂದ ತನ್ನ ಕೊರಳಿನ
ಸ್ವರ್ಣ ಹಾರವನ್ನೇ ಅವಳಿಗೆ ತೊಡಿಸಿದಳು.
 
" ಭದ್ರೆ, ಏತಕ್ಕಾಗಿ ಬೆದರಿಕೊಂಡೆ? ನನಗಂಧ ಕೇಡುಗಾಲ ? ನನಗೆ
ಭರತನಂತೆಯೇ ರಾಮಚಂದ್ರನೂ ಮಗನಲ್ಲವೆ ? ಗುಣಭರಿತನೂ ಪ್ರಜಾ-
ಪ್ರಿಯನೂ ಹಿರಿಯ ಮಗನೂ ಆದ ಮನು ಯುವರಾಜನಾಗುವುದು
ನ್ಯಾಯವೇ ಅಲ್ಲವೆ ? ಅವನು ನನ್ನನ್ನು ತನ್ನ ಹೆತ್ತ ತಾಯಿಯಂತೆಯೇ ಪ್ರೀತಿ
ಸುತ್ತಾನೆ. ನಾನು ಅವನಿಗೆ ಎರಡೆಣಿಸುವುದು ಹೇಗೆ ಸಾಧ್ಯ?
 
*
 
ನಿರ್ಭಾಗ್ಯ ಮಂಥರೆಯ ಸಿಟ್ಟು ಇಮ್ಮಡಿಯಾಯಿತು. ರಾಣಿ ತೊಡಿಸಿದ
ತೊಡವೆಯನ್ನು ಕಿತ್ತು ಚೆಲ್ಲಿ ಆಕೆಯನ್ನು ಗದರುವಂತೆ ನುಡಿದಳು.
 
" ನಿನ್ನ ಈ ವಿನಯವೇ ನಿನಗೆ ಮುಳುವಾಗಲಿದೆ ನೋಡು. ಭಾರಿ
ವಿಪತ್ತಿನ ಮಡುವಿನಲ್ಲಿ ಮುಳುಗಬೇಕೆಂದು ಬಯಸಿರುವೆಯಾ ? ನಿನ್ನ ಸವತಿ
ಯಾದ ಕೌಸಲ್ಯಯ ಮೇಲೆಯೇ ರಾಜನಿಗೆ ಒಲವು. ಎಂಥ ಪಕ್ಷಪಾತ ! ಅಯ್ಯೋ !
ಏನೂ ಅರಿಯದ ಮುಗುದೆ ನೀನು, ಅವನ ಕವಡಿಗೆ ಬಲಿಯಾದೆಯಾ ?
ಆಲೋಚಿಸು, ಭರತನನ್ನು ಶತ್ರುಘ್ನನೊಡನೆ ಕೇಳಯಕ್ಕಟ್ಟಿ ಇಲ್ಲಿ ಪಟ್ಟ
ಕಟ್ಟುವ ಸಂಚು ನಡೆಯುತ್ತಿದೆ. ಇದು ಏತರ ನ್ಯಾಯ ? ವಸಿಷ್ಠರು ಪುರೋಹಿತ
ರಾಗಿದ್ದು, ದಶರಥ ರಾಜನಾಗಿದ್ದು, ರಘುವಂಶದಲ್ಲಿ ಇಂಥ ಅನ್ಯಾಯ
ನಡೆವುದೆ ?
 
ಲಕ್ಷ್ಮಣನಂತೂ ರಾಮನ ಬೆನ್ನುಹತ್ತಿದ್ದಾನೆ. ಇದರಲ್ಲಿ ದೂರಾಗು
ವವರು ನಮ್ಮ ಭರತ ಮತ್ತು ಆ ಸುಮಿತ್ರೆಯ ಮಗ ಇಬ್ಬರೇ. ರಾಮ ನಿನ್ನ
 
3