This page has been fully proofread once and needs a second look.

ಮಿಂಚಿನಬಳ್ಳಿ
 
ಆದಷ್ಟು ಬೇಗನೆ ಕಾರ್ಯರೂಪಕ್ಕೆ ಬರುವಂತಾಗಲಿ ಎನ್ನುವುದೇ ಎಲ್ಲರ ಬಯಕೆ.
 
ಪ್ರಜಾಪಾಲಕ, ನಿನ್ನ ಮಗನಲ್ಲಿ ತುಂಬಿರುವ ಅಕೃತ್ರಿಮ ಗುಣಗಳಿಂದ ಅವನು ಪ್ರಜೆಗಳ ಮನಸ್ಸ- ನ್ನು ಸೂರೆಗೊಂಡಿದ್ದಾನೆ. ಅಯಸ್ಕಾಂತ ಶಿಲೆಯಂತೆ ಅವನು ಆಕರ್ಷಣಶೀಲನಾಗಿದ್ದಾನೆ. ನಿನ್ನ ಕುಮಾರನೆಂದರೆ - ನಮಗೆಲ್ಲರಿಗೂ ಪರಾಯಣನಾದ ಪರಮಪುರುಷ ನಾರಾಯಣನಲ್ಲವೆ ? ಭೂಮಿಯ ಮಳಲನ್ನಾದರೂ ಲೆಕ್ಕಿಸುವುದು ಸಾಧ್ಯ. ಅವನ ಗುಣಗಳನ್ನು ಇಷ್ಟೆಂದು ಎಣಿಸಿದವರುಂಟೆ ? ಅವನು ಅಣುವಿನಲ್ಲೂ ಇರುವ ಅಣುರೂಪಿ; ಜಗತ್ತನ್ನೆ ತುಂಬಿರುವ ವಿಶ್ವರೂಪಿ ! ಬ್ರಹ್ಮಾಂಡವನ್ನೇ ಹೊತ್ತಿರುವ ಅವನಿಗಿಂತ ಗುರುತರವಾದ ವಸ್ತು ಇನ್ನೊಂದಿದೆಯೆ ? ಆ ಹರಿಯೇ ಹೂವಿಗಿಂತ ಹಗುರವೂ ಆಗಿಲ್ಲವೆ ? ಅವನು ಹುಬ್ಬು ಹಾರಿಸಿದರೆ ಸಾಕು- ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳು ನಡೆ-
ಯುತ್ತವೆ. ಇವನ ಕೀರ್ತಿ-ಚಂದ್ರನಿಗೆ ಪಕ್ಷಗಳಲ್ಲಿ ವೃದ್ಧಿ ಹ್ರಾಸಗಳಿಲ್ಲ; ಕಲಂಕದ ಲೇಶವೂ ಇಲ್ಲ. ಇದರೆದುರು ಈ ಬಾನಿನ ಚಂದ್ರಮ ಎಲ್ಲಿಯ ಎಣೆ ?
 
ತಾಯಿ ಲಕ್ಷ್ಮೀದೇವಿ ಜನಕನ ಮಗಳಾಗಿ ಭೂಮಿ- ಯಲ್ಲಿ ಮೂಡಿಬಂದುದು ಇವನ ಸೊಬಗಿಗೆ ಮರುಳಾಗಿಯಲ್ಲವೆ? ಅಂಥ ಅನುಪಮವಾದ
ರೂಪಶ್ರೀಯನ್ನು ಕಣ್ಣಾರೆ ಕಾಣುವ ಭಾಗ್ಯಶಾಲಿಗಳು ನಾವು ! "
 
ಹಿಂದೆ ಇದ್ದ- ಈಗ ಇರುವ- ಮುಂದೆ ಬರುವ ಎಲ್ಲ ವಸ್ತುಗಳನ್ನೂ ಕೈಯಲ್ಲಿನ ಹೂಮಾಲೆಯನ್ನೆಂಬಂತೆ -ನಿನ್ನ ಮಗ ಕಾಣಬಲ್ಲ. ಅವನ ತಿಳಿವಿಗೊಂದು ಎಣೆಯೆಂಬುದುಂಟೆ ? ಎಲ್ಲೆಯೆಂಬುದುಂಟೆ ?
 
ನಿಜಾನಂದಮಗ್ನನಾದ ನಿನ್ನ ತನಯನಿಗೆ ರಾಜ್ಯ- ಭೋಗದ ಸುಖವಾದರೂ ಏತಕ್ಕೆ ಬೇಕು ? ವೇದ- ಗಳಲ್ಲಿ ಮತ್ತು ನೀತಿ ಶಾಸ್ತ್ರಗಳಲ್ಲಿ ಹೇಳಿದ ಎಲ್ಲ ಗುಣಗಳಿಗೂ ನಿಜವಾದ ನೆಲೆ-ಆಸರೆ ನಿನ್ನ ಮಗನಾದ ರಾಮಚಂದ್ರನೊಬ್ಬನೆ. ಬ್ರಹ್ಮನ ಪರಮ ಪದವಿ, ಶಿವನ ಓಜಸ್ಸು, ಇಂದ್ರನ ಐಸಿರಿ, ಎಲ್ಲರ ಎಲ್ಲ ಗುಣಗಳೂ ನಿನ್ನ ಮಗನ ಮಹಾಗುಣದ ಅಂಶಗಳು. ಆ ಮಹಾಸಾಗರದ ಬಿಂದುಗಳು, ಸೀರ್ಪನಿಗಳು.
 
ಕಾಮಾದಿ ಷಡ್ವೈರಿಗಳನ್ನು ನಿಗ್ರಹಿಸಿದ ದಾಂತ ನಮ್ಮ ರಾಮಚಂದ್ರ. 'ಆದಿತ್ಯವರ್ಣಂ ತಮಸಃ ಪರಸ್ತಾತ್' ಎಂದು ವೇದಗಳೇ ಕೊಂಡಾಡಿದ ಅವ