This page has not been fully proofread.

ಮಿಂಚಿನಬ
 
ಲಕ್ಷ್ಮಿಯು ನಾರಾಯಣನನ್ನೆಂಬಂತೆ,
 
ಜಯಂತಿಯು ವೃಷಭದೇವ
ನನ್ನೆಂಬಂತೆ ಸೀತೆಯು ರಾಮನನ್ನನುಸರಿಸಿದಳು. ಗುಣಭರಿತರಾದ ಈ ದಂಪತಿ
ಗಳು ಜಗತ್ತಿನ ತಾಯಿ-ತಂದೆಯರಲ್ಲವೆ ? ಇವರಿಗೆ ಮುಪ್ಪೆಂಬುದಿಲ್ಲವಂತೆ !
ದೋಷದ ಲೇಶವೂ ಇಲ್ಲವಂತೆ ! ದೇವತೆಗಳು ಪ್ರಾರ್ಥಿಸಿದರೆಂದು ಇವರು
ಭೂಮಿಯಲ್ಲಿ ಅವತರಿಸಿದರಂತೆ ! ಹೀಗೆಂದು ಮದುವೆಯ ಮನೆಯಲ್ಲಿ ಜನ-
ರಾಡಿಕೊಳ್ಳುತ್ತಿದ್ದರು.
 
ಅನಂತರ ಜನಕನ ಒಪ್ಪಿಗೆ ಪಡೆದು ವಿಪ್ರರೊಡನೆ, ಸೇನೆಗಳೊಡನೆ,
ಮಕ್ಕಳು ಸೊಸೆಯಂದಿರೊಡನೆ ರಾಜನು ಅಯೋಧ್ಯೆಗೆ ತೆರಳಿದನು. ಸಂತಸದಲ್ಲಿ
ಸಾಗಿತ್ತು ಪ್ರಯಾಣ. ನಡುವೆ ಏಕೋ ಭಯದ ಕಾರ್ಮುಗಿಲು ಸುಳಿದಂತಾ
 
ಯಿತು.
 
ಕೀಲಿಸಿತ್ತು. ಏನೀದುಕುನದ ಅರ್ಥ ?
 
ಯಾವುದೋ ಪ್ರಾಣಿ ಸಂತಸದ ಸೇನೆಗೆ ಅಪಶಕುನದ ಬೇನೆಯನ್ನು
ರಾಜನ ಬಗೆ ತಳಮಳಗೊಂಡಿತು.
ಬರಬಹುದಾದ ವಿಪತ್ತಿನ ಕಲ್ಪನೆಯಿಂದ ಮೂಕಯಾತನೆಯನ್ನನುಭವಿಸಿತು.
ಇಂಥ ಸಂದರ್ಭದಲ್ಲಿ ವಸಿಷ್ಠರೇ ಊರುಗೋಲು, ಅವರ ಸಮಾಧಾನದ ಮಾತೇ
ಆಸರೆ, ನಿರೀಕ್ಷಿಸಿದಂತೆಯೇ ಆ ಆಸರೆ ದಶರಥನಿಗೆ ದೊರೆಯಿತು.
 

 
"ಆಪತ್ತು ಸನ್ನಿಹಿತವಾಗಿದೆ ರಾಜನ್, ಆದರೆ ಅದು ಬೇಗನೆ ಶಾಂತವಾಗ
ಲಿದೆ, ಕಳವಳಬೇಡ ತಾಳ್ಮೆಯಿಂದಿರು. "
 
ವಸಿಷ್ಠರ ಮಾತು ಮುಗಿವುದರೊಳಗೆ ಪ್ರಳಯಾಗಿಯಂತೆ ಪಜ್ಜಳಿಸುವ
ಒಂದು ರೂಪ, ಸೇನೆಯ ಮುಂದೆ ನಿಂತಿತ್ತು. ಆ ರೂಪವನ್ನು ಕಂಡು ಮಹರ್ಷಿ
ಗಳೂ ಚಿಂತೆಗೀಡಾದರು.
 
ಇಪ್ಪತ್ತೊಂದು ಬಾರಿ ಭೂಮಿಯಲ್ಲಿ ಕ್ಷತ್ರಿಯರ ಸಂತಾನವನ್ನು ಸದೆ
ಬಡಿದ ಈ ಪರಶುರಾಮ ಮತ್ತೆ ಪುನಃ ಏಕೆ ಉರಿದೆದ್ದಿದ್ದಾನೆ ? ಹೆಗಲಲ್ಲಿರಿಸಿದ
ಈ ಕೊಡಲಿ-ಕೈಯಲ್ಲಿ ತೊಳಗುವ ಈ ಧನುರ್ಬಾಣ ಏನನ್ನು ಬಯಸುತ್ತಿದೆ ?
ಮತ್ತೊಮ್ಮೆ ಈ ರಾಮಾಗ್ನಿಯು ಕ್ಷತ್ರಿಯ ವಂಶವನ್ನು ಒಣಹುಲ್ಲಿನಂತೆ ಸುಡ-
ಬಯಸುವುದಿಲ್ಲ ತಾನೆ ? ತ್ರೈಲೋಕ್ಯವನ್ನೇ ನಾಶಿಸಬಯಸುವುದಿಲ್ಲ ತಾನೆ ?
 
'ವಸಿಷ್ಠಾದಿಗಳು ಮುಂದೆ ಬಂದು ಪ್ರಸನ್ನನಾಗು ಜಾಮದಗ್ನ' ಎಂದು
ಬೇಡಿಕೊಂಡರು. ಕೊಡಲಿರಾಮ ನೇರವಾಗಿ ದಾಶರಥಿ ರಾಮನೆಡೆಗೆ ಬಂದು
ನುಡಿದನು.