This page has been fully proofread once and needs a second look.

ಮಿಂಚಿನಬಳ್ಳಿ
 
ಮುಂಚಿತವಾಗಿ ತಮ್ಮ ಬರವನ್ನು ದೂತರಿಂದ ದಶರಥನು ತಿಳಿಯಪಡಿಸಿದನು.
ಸುಮಂತನು ರಥವನ್ನು ಸಜ್ಜುಗೊಳಿಸಿದನು.
 

 
ರಾಜವೈಭವದ ಸೇನೆ ಮುಂಬದಿಯಲ್ಲಿ ಹೊರಟು ನಿಂತಿತ್ತು. ಮಂತ್ರಿ
ಗಳು-ಬ್ರಾಹ್ಮಣರು- ಪಟ್ಟದರಸಿ- ಯರು- ವಸಿಷ್ಠ ಮಹರ್ಷಿಗಳು ಇವರೆಲ್ಲರೊಡನೆ

ಮಹಾರಾಜ ದಶರಥನು ಮಿಥಿಲೆಗೆ ತೆರಳಿದನು.
 

 
ಮಹಾರಾಜನ ಬರವನ್ನು ದೂರದಲ್ಲಿಯೆ ಗಮನಿಸಿದ ಜನಕರಾಯನು
ಶತಾನಂದರೊಡನೆ ಎದುರ್ಗೊಂಡು, ವೈಭವದ ಸ್ವಾಗತವನ್ನು ಕೋರಿದನು.
ಸತ್ಕಾರವೆಲ್ಲ ನಡೆದಮೇಲೆ ಯೋಗ- ಕ್ಷೇಮದೊಡನೆ ವಿಷಯದ ಪ್ರಸ್ತಾವವೂ
 
ಬಂತು.
 

 
"ಮಹಾರಾಜನನ್ನು ಕಂಡು ತುಂಬ ಸಂತೋಷ -ವಾಯಿತು. ನಿಮ್ಮಂಥವರ
ದರ್ಶನ ಪ್ರಿಯವಾದರೂ ದುರ್ಲಭವಾಗಿದೆ. ರಘುವಂಶದ ರಾಜರೊಡನೆ ನಮ್ಮ

ಸಂಬಂಧ ಬೆಳೆವುದು ನಮಗೆ ಸಂತಸದ ಮಾತು. ಯಜ್ಞಕಾರ್ಯವು ಮುಗಿದ
ಮೇಲೆ ನನ್ನ ಕನ್ನೆಯರಾದ ಸೀತೋರ್ಮಿಲೆಯರನ್ನು ನಿಮ್ಮೆಲ್ಲರ ಒಪ್ಪಿಗೆಯಿದ್ದರೆ

ರಾಮ-ಲಕ್ಷ್ಮಣರಿಗೆ ಕೊಡುವುದೆಂದು ಬಯಸಿದ್ದೇನೆ."
 

 
ದಶರಥನ ಉತ್ತರ ಚುಟುಕು ಆದರೂ ಸಮಗ್ರ- ವಾಗಿತ್ತು:

"ಕೊಡುಗೆಯಲ್ಲಿ ಕೊಳ್ಳುವವರ ಇಚ್ಛೆಗಿಂತಲೂ ಕೊಡುವವರ ಇಚ್ಛೆ
ಮೇಲಲ್ಲವೆ ? 'ಪ್ರತಿಗ್ರಹೋ ದಾತೃವಶಃ'. ಅಂತೂ ಈ ಮದುವೆಗೆ ನಾನು

ಸಂತೋಷದಿಂದ ಸಮ್ಮತಿಸಬಲ್ಲೆ. ಇದು ನಮಗೆ ಪ್ರಿಯವಾದ ಸಂಬಂಧ"
 

 
ಜನಕನ ತಮ್ಮನಾದ ಕುಶಧ್ವಜನೂ ಮದುವೆಯ ವಾರ್ತೆಯನ್ನು ದೂತ
ರಿಂದ ತಿಳಿದು ಮಿಥಿಲೆಗೆ ಹೊರಟು ಬಂದನು. ಕುಲಾಚಾರ್ಯರಾದ ವಸಿಷ್ಠ

ಮಿಶ್ರರು ಕುಲ ಪದ್ಧತಿಗಳನ್ನೆಲ್ಲ ನೆರವೇರಿಸಿದರು. ಇಕ್ಷಾಕು-ಮಾಂಧಾತೃ-
ಸಗರ-ಅಂಬರೀಷ-ರಘು-ಅಜರಂಥ ಹರಿಭಕ್ತರಾದ ಸಾರ್ವಭೌಮರನ್ನು ಪಡೆದ

ವರವಂಶವನ್ನು ಬಣ್ಣಿಸಿದರು.
 

 
ಮುನಿಗಳ ಅಪ್ಪಣೆಯಂತೆ ವಧೂವಂಶವನ್ನು ಜನಕನೇ ಬಣ್ಣಿಸಿದನು:

"ನಿಮಿ-ದೇವರಾತ-ಪ್ಹ್ರಸ್ವರೋಮ ಮೊದಲಾದ ರಾಜರ್ಷಿಗಳ ವಂಶದಲ್ಲಿ
ಜನಿಸಿದ ಈ ಸೀರಧ್ವಜನು ತನ್ನ ಕನ್ನೆಯರನ್ನು ರಾಮ-ಲಕ್ಷ್ಮಣರಿಗೆ ವಾಗ್ದಾನ
-
ವಿತ್ತಿದ್ದಾನೆ."