This page has been fully proofread once and needs a second look.

ಮಿಂಚಿನಬಳ್ಳಿ
 
ಮುಂದೆ ಬಂದು ನಿಂತ ರಾಮನನ್ನು ಕಂಡ ಪುರ- ರಮಣಿಯರು ವಿಸ್ಮಿತರಾಗಿ
ತಮ್ಮೊಳಗೇ ಮಾತನಾಡಿ- ಕೊಳ್ಳುತ್ತಿದ್ದರು.
 
((
 

 
" ಇಂಥ ಮಗನನ್ನು ಪಡೆದ ಕೌಸಲ್ಯಯೂ ದಶರಥನೂ ಧನ್ಯರು.
. ಅಕೃತ್ರಿಮ ಸೌಂದರ್ಯದ ನೆಲೆವೀಡಾದ ಈ ರಾಮಚಂದ್ರನು ಕಣ್ಣೆಗೆಸೆಯುವ

ಸೋಜಿಗವಾಗಿದ್ದಾನೆ.
 

 
ನೇಗಿಲದ ದಾರೆಯಲ್ಲಿ ಹುಟ್ಟಿದ ಸೀತೆಯೂ ಸಾಮಾನ್ಯಳೇನಲ್ಲ. ನೆಲದ
ಮಗಳಾದ ಸೀತೆಯೇ ರಾಮನಿಗೆ ಅನುರೂಪಳಾದ ಮಡದಿ, ರಾಮನೇ ಸೀತೆಗೆ
ಅನುರೂಪನಾದ ಪತಿ."
 

 
ರಮೆಯೇ ಹರಿಗೆ ತಕ್ಕವಳಾದ ಪತ್ನಿ; ಹರಿಯೇ ರಮೆಗೆ ತಕ್ಕವನಾದ
ಪತಿ, ಅಲ್ಲವೆ ?
 

 
ಇವನು ಸೀತೆಗೆ ತಕ್ಕ ಇನಿಯ ಎನ್ನುವುದನ್ನು ಬಿಲ್ಲು ಹಿಡಿದೇ ಪರೀಕ್ಷಿಸ
ಬೇಕೇಕೆ ? ಸೂರ್ಯನ ಬೆಳಕನ್ನು ಗುರುತಿಸುವುದಕ್ಕೆ ಪಂಜು ಹಿಡಿದು ಹುಡುಕ
ಬೇಕೆ ?
 

 
ನಮ್ಮ ಪುಣ್ಯಫಲವನ್ನಾದರೂ ಧಾರೆಯೆರೆದು ನಾವು ದೇವರಲ್ಲಿ ಬೇಡಿ
ಕೊಳ್ಳುವೆವು, ಭಗವಾನ್, ಇವನೇ ಸೀತೆಯನ್ನು ವರಿಸುವಂತಾಗಲಿ. ಇನ್ನೆಲ್ಲಿ
 

ಸಿಗಬೇಕು ಇಂಥ ಜೋಡಿ !"
 

 
ಊರ ಮುತ್ತೈದೆಯರು ಪಿಸುಗುಟ್ಟಿದ ಮಾತು ರಾಮನ ಕಿವಿಗೆ ಬೀಳ
ದಿರಲಿಲ್ಲ. ಇಂಪಾದ ಮಾತ- ನ್ನಾಲಿಸಿದ ರಾಮಚಂದ್ರನು ಮುಗುಳುನಗೆ ನಗುತ್ತ

ಮೆಲ್ಲಗೆ ಎಡಗೈಯಿಂದ ಬಿಲ್ಲನ್ನೆತ್ತಿದನು.
 

 
ರಾಜರ ಗುಂಪು ಅಚ್ಚರಿಯಿಂದ ಕಣ್ಕಣ್ಣು ಬಿಡು- ತ್ತಿತ್ತು. ಸೀರಧ್ವಜ
ನೂ ವಿಶ್ವಾಮಿತ್ರನೂ ಮನದಲ್ಲಿ 'ಶುಭವಾಗಲಿ' ಎಂದು ಕೋರುತ್ತಿದ್ದರು. ಲಕ್ಷ್ಮಣನು

ನಗುಮೋರೆಯಿಂದ ಅಣ್ಣನ ಬೀರವನ್ನು ನಿರೀಕ್ಷಿ- ಸುತ್ತಿದ್ದನು.
 

 
ರಾಮನು ಹೆದೆಯೇರಿಸಿ ಬಿಲ್ಲಿಗೆ ಇಂಬನ್ನು ಹೂಡಿ- ದನು. ಭಾರಿ ಪ್ರಮಾ
ಣದ ಆ ಧನುಸ್ಸು ಈ ಕುಮಾರನ ಸೆಳೆತಕ್ಕೆ ತಾಳಲಾರದೆ ಐರಾವತದ
ಸೊಂಡಿಲಿನಲ್ಲಿ ಸಿಕ್ಕ ಕಬ್ಬಿನ ಕೋಲಿನಂತೆ ಮಧ್ಯದಲ್ಲಿಲೆ ಮುರಿದು ಬಿತ್ತು !
 

 
ಸಿಡಿದ ಧನುಸ್ಸಿನಿಂದ ಹೊಮ್ಮಿದ ನಾದ 'ರಾಮನು ಸೀತೆಯನ್ನು ಗೆಲಿದ
' ಎಂಬ ಸುದ್ದಿಯನ್ನು ಒಯ್ಯುವ ಹರಿಕಾರನಂತೆ ದಿಗಂತಕ್ಕೆ ಪಸರಿಸಿತು.