This page has been fully proofread once and needs a second look.

ವೃಂದದಲ್ಲೆಲ್ಲ ಹಾಹಾಕಾರವೆದ್ದಿತು. ಆಕಾಶದಲ್ಲಿ ಸುಬಾಹು-ಮಾರೀಚರು ಕಾಣಿಸಿಕೊಂಡರು.
 
ರಾಮಚಂದ್ರನು ಲಕ್ಷ್ಮಣನಿಗೆ ಅಣಿಯಾಗು ಎಂದು ಸೂಚಿಸಿ ಬಿಲ್ಲನ್ನು ಸಜ್ಜುಗೊಳಿಸಿದನು. ಆ ರಕ್ಕಸರು ನೆತ್ತರನ್ನು ಕಾರಿ ಯಾಗವನ್ನು ಕೆಡಿಸುವ ಮೊದಲೇ ರಾಮನು ಅವರೆಡೆಗೆ ಬಿರುಸಾದ ಬಾಣಗಳನ್ನೆಸೆದ- ನು. ರಾಮಬಾಣದಿಂದ ತಾಡಿತನಾದ ಮಾರೀಚನು ನೂರುಯೋಜನ ದೂರದ ಸಮುದ್ರದಲ್ಲಿ ಹೋಗಿ ಬಿದ್ದ. ರಾಮನ ಇನ್ನೊಂದು ಬಾಣ ಸುಬಾಹುವನ್ನು., ಅವನ ತಾಯಿ ಹೋದ ತಾಣಕ್ಕೆ-ಯಮಪುರಿಗೆ ಅಟ್ಟಿತು. ಅವರ ಅನುಯಾಯಿಗಳಲ್ಲಿ ಕೆಲವರು
ರಾಮಬಾಣದ ರುಚಿಯನ್ನು ಕಂಡರು. ಕೆಲವರು ಕಂಗೆಟ್ಟು ಓಡಿದರು. ಯಜ್ಞ ನಿರ್ವಿಘ್ನವಾಗಿ ಕೊನೆಗೊಂಡಿತು. ಋಷಿಗಳೆಲ್ಲ ರಾಮನನ್ನು ಕೊಂಡಾಡಿದರು.
 
ಅಂದು ರಾತ್ರೆಯೂ ಅಲ್ಲೇ ತಂಗಿದ್ದಾಯಿತು. ಬೆಳಗಾದಾಗ ಮಹರ್ಷಿಯು ರಾಮಲಕ್ಷ್ಮಣರನ್ನು ಕುರಿತು ಹೀಗೆಂದನು;
 
" ವತ್ಸ, ಜನಕನ ಮಗಳು ಸೀತೆಗೆ ಸ್ವಯಂವರವಂತೆ. ಈ ಉತ್ಸವವನ್ನು ಕಾಣಲು ಎಲ್ಲರೂ ವಿದೇಹ ರಾಜಧಾನಿಗೆ ಹೋಗು ತ್ತಿದ್ದಾರೆ. ಸೀತೆಯನ್ನು ವರಿಸ- ಲೆಂದು ರಾಜವೃಂದವೂ ಬರುತ್ತಿದೆ. ನಾವೂ ಅಲ್ಲಿಗೆ ಹೋಗುವುದು ಚೆನ್ನು, ಆ ಉತ್ಸವದಲ್ಲಿ ನಾವೂ ಪಾಲುಗಾರರಾಗೋಣ. "
 
ಹೀಗೆ ಹೇಳಿ.. ಮುನಿಯು ರಾಮ ಲಕ್ಷ್ಮಣರೊಡನೆ
ಉತ್ತರದಿಕ್ಕಿ- ನೆಡೆಗೆ ಮುನ್ನಡೆದನು.ದಾರಿಯಲ್ಲಿ ಶೋಣನದ ಎದುರಾಯಿತು. ಆ ರಾತ್ರಿ ಅವರೆಲ್ಲ ಅಲ್ಲಿ ತಂಗಿದರು. ಕುಶಿಕವಂಶದ ರಾಜರದೇಶ-ವಾಗಿದ್ದ ಆ ಭಾಗವನ್ನು ಕಂಡಾಗ ಮಹರ್ಷಿಯು ತನ್ನ ಪೂರ್ವ- ಜರಕಥೆಯನ್ನು ರಾಮನಿಗೆ ಅರುಹಿ- ದನು. ಕುಶನಿಂದ ಕುಶನಾಭ, ಅವನಿಂದ ಗಾಧಿ, ಗಾಧಿಯಿಂದ ತನ್ನ ಜನನ ಇವೆಲ್ಲ ಕಥೆಗಳನ್ನು ಹೇಳಿದನು.
 
ಬೆಳಿಗ್ಗೆ ಅಲ್ಲಿಂದ ಹೊರಟವರು ಮಧ್ಯಾಹ್ನದ ಹೊತ್ತಿಗೆ ಗಂಗಾತಟವನ್ನು ಸೇರಿ ಅಲ್ಲೇ ವಿಶ್ರಮಿಸಿ- ದರು. ಆಗ ಗಂಗೆಯ ಪೂರ್ವಚರಿತ್ರೆಯನ್ನು ಕೇಳ- ಬಯಸಿದ ರಾಮಚಂದ್ರನಿಗೆ ಮುನಿ ಆ ಕಥೆಯನ್ನು ವಿವರಿಸಿದನು;
 
" ಪರ್ವತರಾಜನಾದ ಹಿಮವಂತನಿಗೆ ಇಬ್ಬರು ಮಕ್ಕಳು. ಅವರಲ್ಲಿ ಗಂಗೆ ಸ್ವರ್ಗದ ನದಿಯಾಗಿ ಹರಿದಳು. ಉಮೆ ಶಂಕರನ ಅರ್ಧಾಂಗಿಯಾದಳು. ಬಹು