This page has not been fully proofread.

ಸಂಗ್ರಹರಾಮಾಯಣ
 
ಪಳಗದವನು. ಒಂಬತ್ತು ಸಾವಿರ ವರ್ಷಗಳ ಕಾಲ ಮಕ್ಕಳಿಗಾಗಿ ಪರಿತಪಿಸಿ-
ಪರಿತಪಿಸಿ ಈ ಕುಮಾರನನ್ನು ಪಡೆದಿದ್ದೇನೆ. ಓ ಕರುಣಾಳು ಮುನಿಯೆ, ನಾನು
ರಾಮನನ್ನು ತೊರೆದು ಒಂದರೆಗಳಿಗೆ ಬದುಕಲಾರೆ. ರಾಮನೆಂದರೆ ನನ್ನ
 
ಪ್ರಾಣವೇ, ಈ ನನ್ನ ಪ್ರಾಣಗಳನ್ನು ಕಸಿಯಬೇಡ, ಮಹರ್ಷಿಯೆ, ಮಾಯಾವಿ
ಗಳಾದ ರಾಕ್ಷಸರನ್ನು ಕೊಲ್ಲಲು ಸೇನಾಸಮೇತನಾಗಿ ನಾನೇ ಬರುವೆನು.
ಅವರೇನಾದರೂ ರಾವಣನ ಕಡೆಯವರಾಗಿದ್ದರೆ ಹಾಗಿದ್ದರೆ ನಮಗೆಲ್ಲರಿಗೂ
ಅಳಿಗಾಲ ಬಂತೆಂದೇ ಅರ್ಥ, ಜಗತ್ತು ಬುಡಮೇಲಾಗುವ ಕಾಲ ಸಮಾಸಿಸಿ
ತೆಂದೇ ಅರ್ಥ ! ಯಾರ ಹೆಸರನ್ನು ಕೇಳಿಯೇ ಇಂದ್ರಾದಿಗಳೂ ಬೆದರುವರೋ
ಅಂಥವನೊಡನೆ ಹೇಗೆ ಸಾಧ್ಯ ? ಚಿಂತಿಸು ಓ ಮಹರ್ಷಿದೆ. ಆದರೆ ಈ
ಕ್ಷತ್ರಿಯ ದೇಹ ಗೋವುಗಳ, ಬ್ರಾಹ್ಮಣರ ಹಿತಕ್ಕಾಗಿ ಮಾಸಲಾಗಿದೆ. ಪ್ರಾಣ
ಇರುವತನಕ ನಿಮ್ಮ ವೈರಿಗಳೊಡನೆ ಹೋರಾಡಬಲ್ಲೆ. ಈ ಮೈ ನಿಮ್ಮದು."
 
ಮುನಿಯು ಈ ಮಾತನ್ನು ಕೇಳಿ-ತುಪ್ಪ ಸುರುವಿದ ಬೆಂಕಿಯಂತೆ ಉರಿದೆ
ದ್ದನು. ವಿಶ್ವಾಮಿತ್ರನ ಮುನಿಸು ಕೇಳಬೇಕೆ ? ಈ ಕೋಪೋದ್ರೇಕವನ್ನು ಕಂಡ
ವಸಿಷ್ಠರು ರಾಜನ ಬಳಿ ಹೀಗೆಂದು ನುಡಿದರು…
 
((
 
೧೭
 
ರಾಜನ್, ಅತಿಥಿಗಳಾದ ಮಹರ್ಷಿಗಳಿಗೆ ನೀನು ಮಾತು ಕೊಟ್ಟಿಲ್ಲವೆ
ನಿಮ್ಮ ಅಪೇಕ್ಷೆಯನ್ನು ಪೂರಯಿಸುವೆನೆಂದು ? ಅತಿಥಿಯಾಗಿ ಬಂದ
ಪ್ರೋತ್ರೀಯನಾದ ವಿಪ್ರನಿಗೆ ಕೊಟ್ಟ ಮಾತಿಗೆ ತಪ್ಪುವೆಯಾ ? ನಿನ್ನ ಮಗನ
ಮಹಿಮೆ ನಿನಗರಿಯದು. ಅವನ ಕೋಪದ ಕಿಡಿಗಣ್ಣು ಬ್ರಹ್ಮಾಂಡವನ್ನೆ
ಸುಟ್ಟಿತು. ಪರಮ ವೈಷ್ಣವನಾದ ವಿಶ್ವಾಮಿತ್ರನೇನು ಸಾಮಾನ್ಯನೆ ? ದಕ್ಷನ
ಮಕ್ಕಳಾದ ಜಯ-ಸುಪ್ರಭೆಯರಲ್ಲಿ ಹುಟ್ಟಿರುವ ನೂರು ಅಸ್ತ್ರ ವಿದ್ಯೆಗಳನ್ನೂ
ಈತ ಬಲ್ಲ. ಆದ್ದರಿಂದ ಈ ಬ್ರಹ್ಮರ್ಷಿಯೊಡನೆ ರಾಮನನ್ನು ಹೋಗಗೊಡು
ಈ ಭಕ್ತವತ್ಸಲನೂ ಈ ಭಕ್ತನೂ ಸೇರಿ ಒಂದು ಮಹಾ ಕಾರ್ಯವಾಗಲಿದೆ.
ರಾಜನ್, ರಾಕ್ಷಸ ಕುಲದ ಸಂಹಾರವಾಗಲಿದೆ, ಯಜ್ಞ ಕಾರ್ಯದ ರಕ್ಷಣೆಯಾಗ
`ಲಿದೆ, ಹೋಗಗೊಡು ಅವರನ್ನು."
 
ಮಹರ್ಷಿ ವಶಿಷ್ಠರ ಮಾತು ಮಹಾರಾಜನಿಗೆ ನೆಮ್ಮದಿಯನ್ನೀಯಿತು.
ಕುಲಪುರೋಹಿತರ ಆಣತಿಯನ್ನು ನಂಬಿ ಬಾಳಿದ ಮನೆತನ ಅದು. ಆದುದರಿಂದ
ದಶರಥನು ರಾಮನನ್ನೂ ಜತೆಗೆ ಲಕ್ಷ್ಮಣನನ್ನೂ ವಿಶ್ವಾಮಿತ್ರ ಮಹರ್ಷಿಗೆ
ಅರ್ಪಿಸಿದನು.