This page has been fully proofread once and needs a second look.

60800000000000000000000000000009969600
 

 
ಆಸ್ಥಾನ ವಿದ್ವಾನ್

ಬನ್ನಂಜೆ ಗೋವಿಂದಾಚಾರ್ಯರು
 

 
ರಾಮಾಯಣದ ಅನುವಾದಕರಾದ ಶ್ರೀ ಬನ್ನಂಜೆ ಗೋವಿಂದಾ.
-
ಚಾರ್ಯರು ಉಡುಪಿಯ ಪ್ರಸಿದ್ಧ ವಿದ್ವಾಂಸರಾದ ಪಂ. ಬನ್ನಂಜೆ

ನಾರಾಯಣಾಚಾರ್ಯರ ಮಕ್ಕಳು. ದೊಡ್ಡ ವಿದ್ವಾಂಸರು, ಶ್ರೀ ಶ್ರೀ

ಭಂಡಾರಕೇರಿ ಶ್ರೀಪಾದಂಗಳವರಲ್ಲಿ ತತ್ವಜ್ಞಾನವನ್ನು ಅಭ್ಯಸಿಸಿದವರು.
ಮತತ್ರಯಾಚಾರ್ಯರ ಉದ್ಧಂಗ್ರಂಥಗಳನ್ನು ತುಲನಾತ್ಮಕ ದೃಷ್ಟಿಯಿಂದ
ಅಧಯ್ಯನ ಮಾಡಿದವರು. ತೀಕ್ಷ್ಣ ವಿಮರ್ಶಕರು, ಚುರುಕು ಬುದ್ಧಿ -
ಯವರು, ಕವಿಗಳು, ಪತ್ರಿಕಾ ಲೇಖಕರು, ಪುರಾಣಗಳ ವಿಶೇಷ
ಅಭ್ಯಾಸಿಗಳು, ಋಗ್ವಾಭಾಷ್ಯವನ್ನು ಕನ್ನಡಿಸಲುಪಕ್ರಮಿಸಿದವರು. ತಂತ್ರ
ಸಾರವನ್ನು ಕನ್ನಡಿಸಿದವರು. ಈಗಾಗಲೇ ತಮ್ಮ ವಿಮರ್ಶಾತ್ಮಕ ಲೇಖ,
ನ, ಕವಿತೆಗಳಿಂದ ಕನ್ನಡಿಗರಿಗೆ ಪರಿಚಿತರಾದವರು. ಒಟ್ಟಿನಲ್ಲಿ ಇವರೊಬ್ಬರು

ಸಾಹಿತ್ಯ ಕ್ಷೇತ್ರದಲ್ಲಿ ಕಾಲಿಡುತ್ತಿರುವ ಉಜ್ವಲ ವ್ಯಕ್ತಿಗಳೆಂದು ಹೇಳ
 

 

ಬಹುದು.
 

 
ಸಂಪಾದಕ
 
00000000000000909990090900000000000001000