This page has been fully proofread once and needs a second look.

ಮೂರು ಕೋಟಿ ಮೂರ್ಖರು
 
ಅಶ್ವಮೇಧವೊಂದೇ ಏನು ? ಅಗ್ನಿಷ್ಟೋಮ-ವಾಜಪೇಯ ಮುಂತಾದ ಅನೇಕ ಯಾಗಗಳನ್ನು ರಾಮಚಂದ್ರನು ನೆರವೇರಿಸಿ ದನು. ಹೀಗೆ ರಾಷ್ಟ್ರ ಧರ್ಮಮಯವಾಗಿತ್ತು. ಸಂಪದದ ನೆಲೆ- ಯಾಗಿತ್ತು. ವಿಪತ್ತು ಅಲ್ಲಿಗೆ ಸುಳಿಯಲೇ ಇಲ್ಲ.
 
ಕೆಲಕಾಲದಲ್ಲಿ ಕೌಸಲ್ಯ ಮುಂತಾದ ರಾಜಮಾತೆಯರು ಮೃತ ರಾದರು. ರಾಮಚಂದ್ರನು ಅವರ ಅಂತ್ಯಕ್ರಿಯೆಯನ್ನು ವಿಜೃಂಭಣೆಯಿಂದ ನೆರವೇರಿಸಿ ಬ್ರಾಹ್ಮಣರ ಕೈತುಂಬ ದುಡ್ಡು ಸುರಿದನು.
 
ಕೇಕಯ ರಾಜನಾದ ಯುಧಾಜಿತ್ತು ಒಮ್ಮೆ ಗಾರ್ಗ್ಯಮುನಿ- ಗಳನ್ನು ರಾಮಚಂದ್ರನೆಡೆಗೆ ಕಳಿಸಿಕೊಟ್ಟನು. ಗಾರ್ಗ್ಯರು ಯುಧಾಜಿತ್ತು ಕೊಟ್ಟಿರುವ ಅಮೌಲ್ಯ ವಸ್ತುಗಳ ಕಾಣಿಕೆಯನ್ನು ಪ್ರಭುವಿಗೆ ಒಪ್ಪಿಸಿದರು. ರಾಮಚಂದ್ರನೂ ಮುನಿಗಳನ್ನು ವಿಧಿ- ವತ್ತಾಗಿ ಪೂಜಿಸಿದನು. ಅನಂತರ ಮುನಿಗಳು ತಾವು ಬಂದ ಕಾರ್ಯವನ್ನು ಅರುಹಿದರು:
 
"ರಾಮಚಂದ್ರ, ಶೈವಾಕ್ಷನೆಂಬ ಗಂಧರ್ವನ ಮಕ್ಕಳು ಮೂರ್ಖ- ತನದಿಂದ ವರ್ತಿಸುತ್ತಿದ್ದಾರೆ. ಅವರ ಸಂಖ್ಯೆ ಒಂದಲ್ಲ, ಎರಡಲ್ಲ ಮೂರು ಕೋಟಿ ! ಅವರ ಪೀಡೆಯಿಂದ ಜನ ಕಂಗಾಲಾಗಿದೆ. ಆ ಮೂರ್ಖರ ಸಂಹಾರವಾಗದಿದ್ದರೆ ಲೋಕಕ್ಕೆ ಕ್ಷೇಮವಿಲ್ಲ. ಇದನ್ನು ಸನ್ನಿಧಾನದಲ್ಲಿ ಅರುಹಲು ನಾನು ಕೇಕಯರಾಜನಿಂದ ನಿಯುಕ್ತನಾಗಿ ಬಂದಿದ್ದೇನೆ."
 
ರಾಮಚಂದ್ರನು ಗಂಧರ್ವಪುತ್ರರ ವಿನಾಶಕ್ಕಾಗಿ ಭರತನನ್ನು ಕಳಿಸಿಕೊಟ್ಟನು. ಸೇನಾಸಮೇತನಾದ ಭರತನು ಹದಿನೈದು ದಿನ- ಗಳ ಪ್ರಯಾಣದ ನಂತರ ಕೇಕಯವನ್ನು ತಲುಪಿದನು. ಅಲ್ಲಿ ಕೇಕಯರಾಜನೂ ಸೇನಾಸಹಿತನಾಗಿ ಇವನೊಡನೆ ಸೇರಿ- ಕೊಂಡನು.
 
ಗಂಧರ್ವ ನಗರವನ್ನು ಮುತ್ತಿದ ಭರತನ ಸೇನೆ ಯುದ್ಧಾಹ್ವಾನ ಕ್ಕಾಗಿ ಶಂಖನಾದವನ್ನು ಮಾಡಿತು. ಸಿಂಹದಂತೆ ಬಲಶಾಲಿಗಳಾದ ಮೂರು ಕೋಟಿ ಗಂಧರ್ವರೂ ಭರತನ ಸೇನೆಯನ್ನು ಎದುರಿಸಿ ದರು. ಏಳು ದಿನಗಳ ತನಕ ಭಯಾನಕವಾದ ಯುದ್ಧ ನಡೆಯಿತು.
 
ಇನ್ನು ಶತ್ರುಗಳನ್ನು ಜೀವಂತವಾಗಿ ಬಿಡುವುದು ಸರಿಯಲ್ಲ ಎನ್ನಿಸಿತು ಭರತನಿಗೆ. ಕೂಡಲೆ ಅವನು ಸಂವರ್ತನಾಮಕವಾಗದ ಕಾಲಾಸ್ತ್ರವನ್ನು