2023-03-27 10:18:28 by jayusudindra
This page has been fully proofread once and needs a second look.
  
  
  
                                       ಉತ್ತರಕಾಂಡ
  
  
  
   
  
  
  
  
  
  
  
   
  
  
  
ಬಂದ ಅತಿಥಿಗಳು ಮರಳಿದರು
  
  
  
   
  
  
  
  
  
  
  
   
  
  
  
ಸೀತಾ-ರಾಮರು ಸಿಂಹಾಸನದಲ್ಲಿ ಕುಳಿತಿದ್ದಾಗ ಸಂತುಷ್ಟರಾದ ಋಷಿ
  
  
  
  ಗಳು ಗುಣಗಾನ ಮಾಡಿದರು. ದಂಡಹಸ್ತನಾದ ಕಂಚುಕಿಯು " ಋಷಿಗಳು
  
  
  
   ಮಾತನಾಡುತ್ತಿದ್ದಾರೆ. ಜನ ಮೌನದಿಂದ ಆಲಿಸ- ಬೇಕು " ಎಂದು ನಿವೇದಿಸಿದನು.
  
  
  
   ಅಗಸ್ಯರು ಎದ್ದು ನಿಂತು ನುಡಿಯತೊಡಗಿದರು:
  
  
  
   
  
  
  
  
  
  
  
   
  
  
  
" ರಾಮಚಂದ್ರ, ನಿನ್ನ ಅನುಗ್ರಹದಿಂದ ಸಜ್ಜನರಿಗೆ ಮಂಗಳ ವಾಗಲಿ
  
  
  
   । ಓ ಪ್ರಭುವೆ, ಓ ರಘುವಂಶದ ನಂದಾದೀಪವೆ, ನಿನ್ನ ಕೀರ್ತಿಯನ್ನು ಕೊಂಡಾ
  
  
  
  ಡಲು ಹನುಮಂತ ಬಲ್ಲ; ಚತುರಾನನ ಬಲ್ಲ. ನಮಗೆಲ್ಲಿ ಆ ಶಕ್ತಿ?
  
  
  
   
  
  
  
  
  
  
  
   
  
  
  
ಸುಮಾಲಿ-ಮಾಲಿ ಮೊದಲಾದ ರಕ್ಕಸರನ್ನು ಮೂಲ ರೂಪ- ದಿಂದಲೆ
  
  
  
   ಸಂಹರಿಸಿದೆ. ರಾಮನಾಗಿ ಅವತರಿಸಿ ರಾವಣನನ್ನು ಕೊಂದೆ. ನಿನ್ನಿಂದ
  
  
  
   ಜಗತ್ತು ನೆಮ್ಮದಿಯ ಉಸಿರೆಳೆವಂತಾಗಿದೆ.
  
  
  
   
  
  
  
  
  
  
  
   
  
  
  
ಜಗನ್ನಾಥನಾದ ನೀನು ನಮ್ಮ ಮೇಲೆ ದಯೆ ತೋರದಿದ್ದರೆ ಇನ್ನಾರಿಗೆ
  
  
  
   ರಾಕ್ಷಸರನ್ನು ಕೊಲ್ಲಲು ಸಾಧ್ಯ ? ಕಗ್ಗತ್ತಲೆ ಅಳಿಯ- ಬೇಕಾದರೆ ಸೂರ್ಯನೇ
  
  
  
   
  
  
  
   ಉದಿಸಬೇಕು."
  
  
  
   
  
  
  
  
  
  
  
   
  
  
  
ಎಲ್ಲ ಮಹರ್ಷಿಗಳೂ ಮನದಣಿಯೆ ಭಗವಂತನನ್ನು ಕೊಂಡಾಡಿದರು.
  
  
  
   ರಾಮಚಂದ್ರನು ಎಲ್ಲರನ್ನೂ ಗೌರವಿಸಿ ಯಜ್ಞ ಕಾರ್ಯಗಳಿಗಾಗಿ ಬೀಳ್ಕೊಟ್ಟನು.
  
  
  
   ಹೊತ್ತು ಮುಳುಗುವುದರಲ್ಲಿತ್ತು. ರಾಮಚಂದ್ರನು ಸಂಧ್ಯಾವಂದನೆಗೆಂದು
  
  
  
   ಅಂತಃಪುರವನ್ನು ಪ್ರವೇಶಿಸಿದನು.
  
  
  
   
  
  
  
  
  
  
  
   
  
  
  
ಸಂಧ್ಯಾವಂದನೆಯ ನಂತರ ಅಮೃತತುಲ್ಯವಾದ ರಾಜ- ಭೋಜನವಾ
  
  
  
  ಯಿತು. ಹಾಲ್ನೊರೆಯಂತೆ ಬಿಳುಪಾದ ನವುರಾದ ಹಾಸುಗೆ ಸಜ್ಜೆ ವಮನೆಯಲ್ಲಿ
  
  
  
   ಸಿದ್ಧವಾಗಿತ್ತು. ಹಾವಿನ ಮೇಲೆ ಮಲಗುವ ಹರಿ ಹಾಸುಗೆಯಲ್ಲೊರಗಿದನು !
  
  
  
   
  
  
  
  
  
  
  
   
  
  
  
ನಿತ್ಯ ಮುಕ್ತನಾದ ರಾಮಚಂದ್ರನನ್ನು ಸೀತೆ ತೋಳುಗಳಿಂದ ಬಂಧಿಸಿ
  
  
  
  ದಳು; ರಜೋವಿದೂರನನ್ನು ರಂಜಿಸಿದಳು; ಆತ್ಮಾರಾಮನನ್ನು ತನ್ನ
  
  
  
*- ನನ್ನು ತನ್ನ ನಲುಮೆಯ ಬಗೆಗಳಿಂದ ರಮಿಸಿದಳು.
  
  
  
   
  
  
  
  
  
  
  
   
  
  
  
  
ಬಂದ ಅತಿಥಿಗಳು ಮರಳಿದರು
ಸೀತಾ-ರಾಮರು ಸಿಂಹಾಸನದಲ್ಲಿ ಕುಳಿತಿದ್ದಾಗ ಸಂತುಷ್ಟರಾದ ಋಷಿ
" ರಾಮಚಂದ್ರ, ನಿನ್ನ ಅನುಗ್ರಹದಿಂದ ಸಜ್ಜನರಿಗೆ ಮಂಗಳ ವಾಗಲಿ
ಸುಮಾಲಿ-ಮಾಲಿ ಮೊದಲಾದ ರಕ್ಕಸರನ್ನು ಮೂಲ
ಜಗನ್ನಾಥನಾದ ನೀನು ನಮ್ಮ ಮೇಲೆ ದಯೆ ತೋರದಿದ್ದರೆ ಇನ್ನಾರಿಗೆ
ಎಲ್ಲ ಮಹರ್ಷಿಗಳೂ ಮನದಣಿಯೆ ಭಗವಂತನನ್ನು ಕೊಂಡಾಡಿದರು.
ಸಂಧ್ಯಾವಂದನೆಯ ನಂತರ ಅಮೃತತುಲ್ಯವಾದ ರಾಜ- ಭೋಜನವಾ
ನಿತ್ಯ ಮುಕ್ತನಾದ ರಾಮಚಂದ್ರನನ್ನು ಸೀತೆ ತೋಳುಗಳಿಂದ ಬಂಧಿಸಿ
*