This page has not been fully proofread.

ಸಂಗ್ರಹರಾಮಾಯಣ
 
ಎಂದು ಜನ ಕೊಂಡಾಡಿದರು. ರಾಮಚಂದ್ರನ ಮಂದಹಾಸವೇ ಅದಕ್ಕೆ
ಉತ್ತರವಾಯಿತು.
 
ಸಾವಿರಾರು ಗೋವುಗಳನ್ನೂ ಅಪಾರವಾದ ಬೆಳ್ಳಿ-ಬಂಗಾರವನ್ನೂ
ವಿಪ್ರರಿಗೆ ದಾನವಾಗಿ ರಾಮಚಂದ್ರನು ಕೊಟ್ಟನು. ಅಮೂಲ್ಯಗಳಾದ ಒಡವೆ
ತೊಡವೆಗಳನ್ನು ರಾಮಚಂದ್ರನು ಸಂತಸದ ಕೊಡುಗೆಯಾಗಿ ಸೀತೆಗೆ ಒಪ್ಪಿಸಿದನು.
ಹಾಗೆಯೇ ಕಪಿಗಳಿಗೂ ರಾಕ್ಷಸರಿಗೂ ಸಮೃದ್ಧವಾದ ಸಂಭಾವನೆ ದೊರಕಿತು.
 
ಸೀತೆಯ ಮೈತುಂಬ ಬಂಗಾರ, ನಿಸರ್ಗಸುಂದರಿಯಾದ ಆಕೆಗೆ ಬಂಗಾರ
ಗಳಿಂದೇನು ? ಚಿನ್ನದಿಂದ ಆಕೆಗೆ ಚೆಲುವಲ್ಲ. ಅವಳಿಂದ ಚಿನ್ನಕ್ಕೆ ಚೆಲುವು.
ಸೀತೆ ತಾನು ತೊಟ್ಟಿರುವ ಆಭರಣಗಳಲ್ಲಿ ಅತ್ಯುತ್ತಮವಾದ ಹಾರವೊಂದನ್ನು
ಕೈಯಲ್ಲಿ ಹಿಡಿದುಕೊಂಡು ರಾಮಚಂದ್ರನೆಡೆಗೆ ದಿಟ್ಟಿಸಿದಳು.
 
ಒಮ್ಮೆ ತನ್ನೆಡೆಗೆ ಒಮ್ಮೆ ಸರದೆಡೆಗೆ ದೃಷ್ಟಿ ಬೀರಿ ನಸುನಗುತ್ತಿರುವ
ಸೀತೆಯ ಇಂಗಿತ ರಾಮನಿಗೆ ತಿಳಿಯಿತು. ಅವನೂ ಜಾನಕಿಯೆಡೆಗೆ ಕುಡಿ-
ನೋಟವನ್ನು ಬೀರಿ ನುಡಿದನು:
 
(C
 
ಸಾಧಿ, ಬ್ರಹ್ಮಚರ್ಯಾದಿ ಸದ್ಗುಣಗಳಲ್ಲಿ ಶಾಸ್ತ್ರ ಪಾಂಡಿತ್ಯದಲ್ಲಿ
ಯಾರನ್ನು ಮಾರಿಸುವವ ಇನ್ನಿಲ್ಲವೋ ಅಂಥವನಿಗೆ ಈ ಸರವನ್ನು ಉಡುಗರೆ
ಯಾಗಿ ಕೊಡು.
 
ಸುಂದರಿ, ಯಾರ ಪರಾಕ್ರಮ ನಿನಗೆ ಮೆಚ್ಚಿಗೆಯಾಗಿದೆಯೋ, ಯಾರ
ಪರಾಕ್ರಮ ತ್ರಿಭುವನದಲ್ಲಿ ಅಪೂರ್ವವಾಗಿದೆಯೋ ಅಂಥವನು ಈ ಸರವನ್ನು
ಪಡೆಯುವ ಭಾಗ್ಯಶಾಲಿಯಾಗಲಿ.
 
ಯಾರು ನನಗೆ ಹೆಚ್ಚು ಮೆಚ್ಚಿನವರು ಎಂದು ನೀನು ಬಲ್ಲೆ ಯೋ
ಯಾರ ಸಾಹಸ ಸೇವೆಗಳು ನಿನ್ನನ್ನು ಮೆಚ್ಚಿಸಿವೆಯೋ ಅಂಥ ಮಹಾನುಭಾವ-
ನಿಗೆ ಈ ಪ್ರೀತಿಯ ಉಪಹಾರ ದೊರೆಯಲಿ, "
 
ಸೀತೆ ಹನುಮಂತನೆಡೆಗೆ ನೋಡಿ ಮುಗುಳುನಕ್ಕಳು. ಇತರರಿಗೆ
ದುರ್ಲಭವಾದ ತಾಯಿಯ ಅನುಗ್ರಹದ ಹಾರ ಹನುಮಂತನ ಕತ್ತಿನಲ್ಲಿ ವಿರಾಜಿ
ಸಿತು ! ಮಾರುತಿಯ ಎದೆಯಲ್ಲಿ ಇಳಿದುಬಂದ ಹಾರ ಹಿಮಶಿಖರದಿಂದ
ಧುಮ್ಮಿಕ್ಕುವ ಭಾಗೀರಥಿಯಂತೆ ಕಾಣಿಸಿತು !