This page has been fully proofread once and needs a second look.

ಸಂಗ್ರಹರಾಮಾಯಣ
 
ಶಂಖ ದುಂದುಭಿಗಳ ಮೊಳಗಿನಿಂದಲೂ ಜಯಜಯಕಾರದ ಕೋಲಾಹಲ
ದಿಂದಲೂ ದಿಕ್ಕು ಕಿವುಡಾಯಿತು.
 

 
ಪೌರರು ಮಂಗಲದ್ರವ್ಯವನ್ನು ಹಿಡಿದುಕೊಂಡು ರಾಮನನ್ನು ಎದುರು
ಗೊಂಡರು. ಈ ಮೆರವಣಿಗೆಯನ್ನು ನೋಡಲು ನಗರದ ಮಹಡಿಗಳ ಮೇಲೆಲ್ಲ
ಹೆಂಗಳೆಯರ ಸಂತೆ ನೆರೆದಿತ್ತು. ಸೀತೆ- ಯೊಡನೆ ರಥವೇರಿಬರುತ್ತಿರುವ ರಾಮ
ಚಂದ್ರನ ಮೇಲೆ ಮುತ್ತೈದೆಯರು ಅರಳು-ಹೂ ಚೆಲ್ಲಿದರು.
 

 
ರಾಮಚಂದ್ರನು-ಇಂದ್ರಪುರದಂತಿರುವ ಅಂತಃಪುರವನ್ನು ಪ್ರವೇಶಿಸಿದನು.
ಕಪಿರಾಜನಾದ ಸುಗ್ರೀವನಿಗೆ ಅರಮನೆಯ ಉದ್ಯಾನದ ನಡುವೆಯಿರುವ ಭವನ-
ದಲ್ಲಿ ವಾಸಕಲ್ಪಿಸಲಾಯಿತು.
 
೨೨೬
 

 
ವಸಿಷ್ಠರ ಆದೇಶದಂತೆ ಸೇವಕರು ಅಭಿಷೇಕದ ಸಾಮಗ್ರಿಗಳನ್ನು ಸಜ್ಜು
ಗೊಳಿಸಿದರು. ಸುಗ್ರೀವನ ಸಂದೇಶದಂತೆ ಸಮುದ್ರದ ಜಲ ವನ್ನು ತರಲು ಕಸಿಪಿಗಳೇ
ಹೊರಟರು. ಸುಷೇಣ ಮೂಡಣ ಕಡಲ ನೀರನ್ನು ತಂದನು.
 
ಹೊರಟರು.
 
ಗವಯ
 
ಗವಯ ಪಡುಕಡಲ ನೀರನ್ನು ತಂದನು. ದಕ್ಷಿಣೋತ್ತರ ಸಾಗರಗಳ ನೀರನ್ನು ಕ್ರಮವಾಗಿ
ಋಷಭನೂ ನಲನೂ ಬಂಗಾರದ ಕೊಡಗಳಲ್ಲಿ ಹೊತ್ತು ತಂದರು.
 

 
ಅಭೀಷೇಕಕ್ಕೆಂದು ಪುರೋಹಿತರಿಗೆ ಋತ್ವಿಕ್ಕುಗಳಿಗೆ ಕರೆ ಹೋಯಿತು.
ವಾಮದೇವ, ಜಾಬಾಲಿ, ಕಶ್ಯಪ, ಕಾತ್ಯಾಯನ, ಸುಯಜ್ಞ ಮೊದಲಾದ
ಮಹರ್ಷಿಗಳೂ ವಸಿಷ್ಠರೊಡನೆ ಕೂಡಿ ಕೊಂಡರು.
 

 
ರಾಮಚಂದ್ರನ ಅಭಿಷೇಕದ ವಾರ್ತೆಯನ್ನು ಕೇಳಿದ ಊರಿನ ಜನಕ್ಕೆ
ಎಲ್ಲಿಲ್ಲದ ಸಂತಸ-ಸಡಗರ. ಎಲ್ಲರ ಬಾಯಲ್ಲೂ ಒಂದೇ ಮಾತು:
 

"
ರಾಮನಿಗೆ ಪಟ್ಟಾಭಿಷೇಕವಂತೆ."
 

 
" ಹದಿನಾಲ್ಕು ವರ್ಷಗಳ ನಂತರ ಮತ್ತೆ ರಾಮಚಂದ್ರನಿಗೆ ಪಟ್ಟಾಭಿಷೇಕ
 
ವಂತೆ."
 

 
"
ನಮ್ಮ ಪ್ರೀತಿಯ ರಾಮ ಮತ್ತೆ ನಮ್ಮನ್ನಾಳುವನಂತೆ."

"ನಮ್ಮ ರಾಮನಿಗೆ ಪಟ್ಟಾಭಿಷೇಕವಂತೆ !"
 

 
ಉರಿಯಿಂದ ಬಳಲುವ ಜನಕ್ಕೆ ಮಳೆ ಸುರಿದಂತೆ ಬಾಳಿನ ಬಂಧನದಿಂದ
ಬವಣೆಪಡುವ ಜನಕ್ಕೆ ಕೈವಲ್ಯವೇ ದೊರಕಿದಂತೆ ಈ ವಾರ್ತೆಯಿಂದ ಜನ
 
ಸಂತಸಗೊಂಡರು.