This page has been fully proofread once and needs a second look.

ನಿನ್ನ ಸರ್ವಸ್ವವೂ ಹಾಳಾಯಿತು. ಕೀರ್ತಿ ತಲೆ ಬಗ್ಗಿಸಿತು. ಶೌರ್ಯ ಕಳೆಗುಂದಿತು. ನೀನು ಮಾಡಿದ ಎಲ್ಲ ಪಾತಕಗಳೂ ಸ್ತ್ರೀಚೌರ್ಯ ದಿಂದ ಹೊಸತನವನ್ನು ಪಡೆದಿವೆ. ನೀನು ಅಂಥ ತಪ್ಪನ್ನು ಮಾಡಿದ ದಿನವೆ ನಿನ್ನ ಬಾಳಿನ ಕಾಳರಾತ್ರಿ ಮೊದಲಾಯಿತು.
 
ಆದರೆ ಹೆಚ್ಚು ಕಾಲ ನಿನಗೆ ಇಲ್ಲಿರುವ ಋಣವಿಲ್ಲ. ಸಾಧು ದ್ರೋಹಿಯಾದ ನಿನ್ನ ಹೃದಯವನ್ನು ನನ್ನ ಬಾಣಗಳು ಭೇದಿಸ ಲಿವೆ. ನಿನ್ನ ಮಾಂಸದ ರುಚಿಯನ್ನು ಹದ್ದುಗಳು ಕಾಣಲಿವೆ. ರಾಮಚಂದ್ರನ , ಸೀತೆಯ ಗಂಡನ ಬಲ ಎಂಥದು ಎಂದು ಕಾಣುವಿಯಂತೆ."
 
ರಾಮಚಂದ್ರನ ಮಾತಿನ ಜತೆಗೆಯೇ ಬಾಣವೂ ರಾವಣನಿಗೆ ತಾಕಿತು. ಲೋಕರಾವಣನಾದ ರಾಕ್ಷಸೇಶ್ವರ ತಲೆತಿರುಗಿ, ಕಣ್ಣು ಕತ್ತಲೆಕವಿದಂತಾಗಿ, ನೆಲದಮೇಲೆ ಕುಸಿದುಬಿದ್ದನು.
 
ರಾಮಚಂದ್ರನ ಲೀಲಾನಾಟಕವನ್ನು ಕಂಡು ದೇವತೆಗಳೂ, ಮಹರ್ಷಿಗಳೂ ಹರ್ಷಪುಲಕಿತರಾದರು.
 
ಜಗನ್ಮಾತೆಯ ಅಗ್ನಿ ದಿವ್ಯ
 
ದೇವತೆಗಳಿಂದಲೂ ಋಷಿಗಳಿಂದಲೂ ಪ್ರಾರ್ಥಿತನಾದ ಅಗಸ್ತ್ಯ
ಮುನಿಯು ಆಕಾಶದಿಂದ ಇಳಿದು ರಾಮನ ಬಳಿಬಂದು ವಿಜ್ಞಾಪಿಸಿಕೊಂಡನು :
 
"ಪ್ರಭುವೆ, ನಿನ್ನ ಲೀಲೆಯನ್ನು ವಿರಮಿಸು. ಲೋಕವೈರಿಯಾದ ರಾವಣನನ್ನು ಬೇಗನೆ ಸಂಹರಿಸು. ರಾವಣನು ಬದುಕಿರುವವರೆಗೆ ಜಗತ್ತಿಗೆ ಭಯ ತಪ್ಪಿದ್ದಲ್ಲ. ಸಮಗ್ರ ಲೋಕವೂ ಅವನ ಕೊನೆ- ಯುಸಿರನ್ನು ಕಾಯುತ್ತಿದೆ. ಆ ಕಾರ್ಯವನ್ನು ನೀನು ತ್ವರಿತವಾಗಿ ನಿರ್ವಹಿಸು. ಭಕ್ತಪರಾಯಣನಾದ ನಿನ್ನನ್ನು ಜಗತ್ತು ಕೊಂಡಾಡಿ ಕೃತಾರ್ಥವಾಗಲಿ."
 
ರಾಮಚಂದ್ರನು "ಹಾಗೆಯೇ ಆಗಲಿ" ಎಂದು ಮುಗುಳು ನಗುತ್ತ ಬಿಲ್ಲಿಗೆ ಹೆದೆಯೇರಿಸಿದನು. ರಾವಣನೂ ಅಷ್ಟರಲ್ಲಿ ಮೂರ್ಛೆಯಿಂದೆಚ್ಚತ್ತು ಕದನಕ್ಕೆ ಸಿದ್ಧನಾದನು. ರಾಮಚಂದ್ರನ ಬಲದ ಅರಿವು ರಾವಣನಿಗಿದೆ. ಸೂಚಕಗಳಾದ ಅಪಶಕುನಗಳು ಇದಿರಾದುದನ್ನೂ ಅವನು ಬಲ್ಲ. ಆದರೆ ಅಷ್ಟರಿಂದಲೇ ರಾವಣನು ಕಂಗೆಟ್ಟು ಯುದ್ಧದಿಂದ ಹಿಮ್ಮೆಟ್ಟಲಿಲ್ಲ. ಮಹಾ-
ಮರಣ-