This page has not been fully proofread.

ಮಿಂಚಿನಬಳ್ಳಿ
 
ನಪುಂಸಕ ನೀನಲ್ಲವಾದರೆ ಮುಂದೆ ಬಾ. ಹನುಮಂತನ ಕೈಗೆ ಸಿಕ್ಕಿದ ಮೇಲೂ
ನೀನು ಉಸಿರಾಡುವುದು ಸಾಧ್ಯವಿಲ್ಲ. ನಿನ್ನ ತೋಳ್ ಬಲವೋ ಅಸ್ತ್ರಬಲವೋ
ಮಾಯಾ ಬಲವೊ ಏನಿದ್ದರೂ ಬರಲಿ, ಯಾವ ತೆರನಾದರೂ ನನ್ನ ವೇಗವನ್ನು
ಸಹಿಸಿದೆಯಾದರೆ ಮಾತ್ರವೆ ನೀನು ನಿಜವಾದ ಗಂಡಸು. ನಿನ್ನಲ್ಲಿ ಅದಟಿದ್ದರೆ
ನನ್ನೊಡನೆ ಹೋರಾಟಕ್ಕೆ ಅಣಿಯಾಗು, ಮುಂದಕ್ಕೆ ಬಾ."
 
೨೦೪
 
ಮೇಘನಾದನಿಗೆ ಮಾರುತಿಯ ಬಲ ಗೊತ್ತಿದ್ದುದರಿಂದಲೇ ಅವನು ಅತ್ತ
ಸುಳಿಯದೆಯೆ ಬೇರೆ ಕಪಿಗಳನ್ನು ಪೀಡಿಸತೊಡಗಿದನು.
 
ಆಗ ಲಕ್ಷ್ಮಣನು ಮೇಘನಾದನನ್ನು ಅಡ್ಡಗಟ್ಟನು. ಜತೆಗೆ ವಿಭೀ-
ಷಣನೂ ಇದ್ದನು. ಮೇಘನಾದನು ವಿಭೀಷಣನನ್ನು ಹಂಗಿಸಿದನು :
 
(6
 
* ಚಿಕ್ಕಪ್ಪ, ಬಂಧುಗಳನ್ನು ತೊರೆದು ನೀಚ ಮಾನವರಿಗೆ ಶರಣುಹೋದೆ.
ನಿನ್ನ ನೀತಿಯನ್ನು ಲೋಕವೇ ಕೊಂಡಾಡಲಿದೆ ! "
 
ವಿಭೀಷಣನ ಉತ್ತರವೂ ಸ್ಪುಟವಾಗಿತ್ತು :
 
* ಕುಮಾರ, ನೀಚರ ಆಶ್ರಯ ನಾನು ಮಾಡಿಲ್ಲ. ಅದು ಮಾಡುತ್ತಿರು-
ವುದು ನೀನು, ನಿನ್ನ ತಂದೆ. ನಾನು ಜಗನ್ನಾಥನನ್ನು ಶರಣಾಗಿದ್ದೇನೆ. ನಾನು
ಭಗವಂತನ ದಾಸ,"
 
ಮೇಘನಾದನು ಲಕ್ಷ್ಮಣನತ್ತ ತಿರುಗಿ ನುಡಿದನು :
 
66
 
* ಲಕ್ಷಣ, ನಿನಗೆ ಸಾಯಲು ಬಯಕೆ ಇದೆಯೆ ? ಯುದ್ಧಕ್ಕೆ ಅಣಿ
ಯಾಗು, ಬದುಕಬೇಕೆಂಬಾಶೆಯಿದ್ದರೆ ಕಾಲುತೆಗೆ ಇಲ್ಲಿಂದ.
ಲಕ್ಷ್ಮಣನು ಕನಲಿ ಗುಡುಗಿದನು:
 
* ಬಾಯಿಬಲದಿಂದ ಶತ್ರುಗಳನ್ನು ಸೋಲಿಸಲು ಬರುವುದಿಲ್ಲ. ಬಡಾಯಿ
ಸಾಕು, ತೋಳುಬಲದ ಪರೀಕ್ಷೆ ನಡೆಯಲಿ."
 
ಮೇಘನಾದನು ಲಕ್ಷ್ಮಣನಮೇಲೂ ವಿಭೀಷಣನಮೇಲೂ ನೂರಾರು
ಬಾಣಗಳನ್ನೆಸೆದನು. ಲಕ್ಷ್ಮಣನೂ ಅಷ್ಟೇ ಚತುರತೆಯಿಂದ ಪ್ರತಿಬಾಣಗಳ
ನೆಸೆದನು. ಇಬ್ಬರೂ ಧನುರ್ವಿದ್ಯೆಯಲ್ಲಿ ಪರಿಣತರು; ಅಸ್ತ್ರವಿದ್ಯೆಯಲ್ಲಿ ಪಾರಂ
ಗತರು. ಎಂದಮೇಲೆ ಯುದ್ಧ ಕಳೆಕಟ್ಟದಿರುತ್ತದೆಯೆ ? ಒಬ್ಬರನ್ನೊಬ್ಬರು
ಮಾರಿಸುವಂತೆ ಕಾದಾಡಿಕೊಂಡರು. ಒಮ್ಮೆಯಂತೂ ಲಕ್ಷ್ಮಣನ ನೂರು