This page has been fully proofread once and needs a second look.

ಸಂಗ್ರಹರಾಮಾಯಕ
 
"ಕುಂಭಕರ್ಣ ! ನೀನು ಏಕಾಕಿಯಾಗಿ ಯುದ್ಧಕ್ಕೆ ಹೋಗ- ಬಾರದು.
ನಾವೆಲ್ಲರೂ ನಿನ್ನ ಜತೆಗೆ ಬರುತ್ತೇವೆ. ಅದರ ಮೊದಲು ನಮ್ಮ ಮಾಯಾ
ವಿಧಾನಗಳಿಂದ ಸೀತೆಯನ್ನು ಮೋಸಗೊಳಿಸ- ಬೇಕು."
 

 
ಆಗ ಕುಂಭಕರ್ಣನು "ನಿನ್ನಂಥವರ ದುರ್ಮಂತ್ರದಿಂದಲೆ ಲಂಕೆ ಹಾಳಾ
ಯಿತು" ಎಂದು ಅವನನ್ನು ಗದರಿಸಿ, ರಾವಣನನ್ನು ಅಭಿವಂದಿಸಿ ಯುದ್ಧಕ್ಕೆ
ತೆರಳಿದನು. ಅವನ ಜತೆಗೆ ರಾಕ್ಷಸಸೇನೆ- ಯೂ ಭಾರಿ ಪ್ರಮಾಣದಲ್ಲಿ ಕಪಿ
ಗಳನ್ನಾಕ್ರಮಿಸಿತು.
 
Gra
 

 
ಮುಗಿಲೆತ್ತರಕ್ಕೆ ಬೆಳೆದು ನಿಂತ ಕುಂಭಕರ್ಣನ ಮಹಾ ಕಾಯವನ್ನು
ವನ್ನು ಕಂಡು ಕಪಿಗಳು ದಿಕ್ಕುಗೆಟ್ಟು ಓಡತೊಡಗಿದರು. ಕೆಲವರು ಸೇತು ದಾಟಿ
ಈಚೆಯ ದಡಕ್ಕೆ ಬಂದರು. ಕೆಲವರು ಮರ-ಬಂಡೆ ಗಳೆಡೆಯಲ್ಲಿ ಅವಿತು ಕುಳಿ
ತರು, ಯುವರಾಜ ಅಂಗದನ ಧೀರ- ವಾಣಿ, ಓಡುತ್ತಿರುವ ಕಪಿಗಳಲ್ಲಿ ಯುದ್ಧೋ
ತ್ಸಾಹವನ್ನು ಚಿಗುರಿಸಿತು:
 

 
"ಜಗತ್ಪ್ರಭುವಾದ ರಾಮಚಂದ್ರನು ನಮ್ಮ ರಕ್ಷಕನಾಗಿರು- ವಾಗ, ಓ ನನ್ನ
ಪ್ರೀತಿಯ ಕಪಿಗಳೆ ! ಏಕೆ ಹೇಡಿಗಳಂತೆ, ಷಂಡರಂತೆ ಓಡುತ್ತಿರುವಿರಿ, ಬನ್ನಿ,
ರಾಮಚಂದ್ರನ ಸೇವೆಯಲ್ಲಿ ನಿಮ್ಮ ಪಾಲು ತನ್ನಿ, ಯುದ್ಧಕ್ಕೆ ಅಣಿಯಾಗಿ."
 

 
ಕಪಿಗಳಲ್ಲಿ ಮತ್ತೆ ಹುಮ್ಮಸು ಚಿಮ್ಮಿತು. ಕೈಗೆ ಸಿಕ್ಕಿದ್ದನ್ನು ಹಿಡಿದು
ಕೊಂಡು ಯುದ್ಧಕ್ಕೆ ಸಿದ್ಧರಾದರು. ಕಪಿಗಳೆಸೆದ ದೊಡ್ಡ ದೊಡ್ಡ ಬಂಡೆಗಳು
ಕೂಡ ಕುಂಭಕರ್ಣನ ಮೈಗೆ ತಾಗಿ ಮಣ್ಣು ಮುದ್ದೆಯಂತೆ ಪುಡಿಯಾದವು.
ಎದುರು ಬಂದ ಕಪಿಗಳ ಗುಂಪನ್ನೆ ಕುಂಭಕರ್ಣನು ಮುಷ್ಟಿಯಿಂದ ಅದುಮಿ
ಚೆಲ್ಲಿಬಿಡುತ್ತಿದ್ದನು. ಅನೇಕ ಕಪಿಗಳನ್ನು ಕಬಳಿಸಿದನು. ಕೆಲವರನ್ನು ಮುಸ್ಲಿ
 
ಷ್ಟಿಯಿಂದ- ಲೆ ಚೂರ್ಣಗೊಳಿಸಿದನು.
 

 
ಹೀಗೆ ಕಪಿಗಳ ಸಮೂಹದ ನಾಶವನ್ನು ಕಂಡು ಸುಗ್ರೀವ, ಅಂಗದ,
ಜಾಂಬವಂತ ಈ ಮೂವರು ಯುದ್ಧಕ್ಕೆ ಮುಂದಾದರು. ಈ ಕಪಿತ್ರಯರ
ಶಿಲಾವರ್ಷದಿಂದ ಕುಂಭಕರ್ಣನು ಲವಮಾತ್ರ- ವೂ ಕಂಪಿತನಾಗಲಿಲ್ಲ. ಪ್ರತಿ-
ಯಾಗಿ ಶಿಲಾಖಂಡಗಳೇ ಭಗ್ನವಾದು- ದವು ! ಆಗ ಸುಗ್ರೀವನು ದೊಡ್ಡ ಬೆಟ್ಟ -
ವೊಂದನ್ನು ಶತ್ರುವಿನ ಮೇಲೆಸೆದನು. ಕುಂಭಕರ್ಣನು ನಗುತ್ತ ಅದನ್ನೆ ತಿರುಗಿಸಿ

ಸುಗ್ರೀವನ ಮೇಲೆಸೆದನು. ಪರ್ವತಾಹತನಾದ ಕಪಿರಾಜ ಕುಸಿದು ಬಿದ್ದನು !
ಅಂಗದ, ಜಾಂಬವಂತರಿಗೆ ಅವನ ಒಂದು ಪ್ರಹಾರವೇ ಸಾಕಾಯಿತು.