This page has been fully proofread once and needs a second look.

ಮಿಂಚಿನ ಬಳ್ಳಿ
 
ತರವಲ್ಲ, ಅವನ ಹೃದಯ ನಿರ್ಮಲವಾಗಿದೆ; ಅವನು ನನ್ನನ್ನು ಭಕ್ತಿಯಿಂದ
ಕಾಣುತ್ತಿದ್ದಾನೆ ಎಂದು ನಾನು ಬಲ್ಲೆ."
 

 
ಹೀಗೆ ಕಪಿಗಳನ್ನು ಸಂತೈಸಿ, ವಿಭೀಷಣನನ್ನು ಬಳಿಗೆ ಬರ ಮಾಡಿಸಿದನು.

 
ಆಯುಧಗಳನ್ನೆಲ್ಲ ದೂರದಲ್ಲಿಟ್ಟು ವಿಭೀಷಣನು ಶಾಂತರೂಪನಾಗಿ ಬಂದು
ರಾಮಪಾದಗಳಿಗೆ ಎರಗಿದನು.
 

 
ರಾಮಚಂದ್ರನ ಆಶೀರ್ವಾದದಲ್ಲಿ ಭವಿಷ್ಯದ ಭರವಸೆ ತುಂಬಿತ್ತು :

 
"ದೇವದ್ರೋಹಿಯಾದ ರಾವಣನ ಇತಿಹಾಸ ಸದ್ಯದಲ್ಲಿ ಕೊನೆಗೊಳ್ಳ-
ಲಿದೆ. ಆಗ ರಾಕ್ಷಸರ ಸಮೃದ್ಧವಾದ ಸಾಮ್ರಾಜ್ಯ ನಿನ್ನದಾಗುವುದು."

 
ವಿಭೀಷಣನೂ ನಮ್ರನಾಗಿ ವಿನಂತಿಸಿಕೊಂಡನು :
 

 
"ರಾಮಭದ್ರ, ದೇವದುರ್ಲಭವಾದ ನಿನ್ನ ದಾಸ್ಯವೇ ದೊರಕಿದ ಮೇಲೆ
ಇನ್ನೇನು ಬೇಕು ನನಗೆ ? ಕೈವಲ್ಯದ ದಾರಿಯನ್ನು ನಾನು ಕಂಡಿದ್ದೇನೆ. ನಾನು
ಭಾಗ್ಯಶಾಲಿ, ನಿನ್ನ ಪಾದಸೇವಕನಾಗಿ ನಿನ್ನ ಸೈನ್ಯದ ಒಬ್ಬ ನನ್ನಮ್ರ ಸೈನಿಕನಾಗಿ
ನಾನೂ ರಾಕ್ಷಸರೊಡನೆ ಹೋರಾಡಬಯಸುತ್ತೇನೆ."
 

 
ಜಾಂಬವಂತನು ಪುಣ್ಯ ಸಲಿಲಗಳನ್ನು ತಂದನು. ರಾಮ- ಚಂದ್ರನ
ಕೈಯಿಂದಲೆ ವಿಭೀಷಣನಿಗೆ ಅಭಿಷೇಕ ನಡೆಯಿತು; "'ಲಂಕಾಧಿಪತಿ ವಿಭೀಷಣ
ನಿಗೆ ಜಯವಾಗಲಿ' ಎಂದರು ಕಸಿಪಿಗಳು.
 

 
ಸುಗ್ರೀವನೂ ವಿಭೀಷಣನೂ ಜತೆಯಾಗಿ ಯೋಚಿಸಿ ಸಮುದ್ರಕ್ಕೆ ಸೇತು
ವನ್ನು ಬಂಧಿಸುವುದೇ ಸರಿ ಎಂದು ತೀರ್ಮಾನಿಸಿದರು.
 

 
ಇತ್ತ ಶಾರ್ದೂಲನೆಂಬ ರಾವಣನ ದೂತ ಈ ಕಪಿ ಸೇನೆಯನ್ನು ಕಂಡು
ರಾವಣನಿಗೆ ವರದಿಯೊಪ್ಪಿಸಿದನು. ರಾಕ್ಷಸೇಂದ್ರನು ಕ್ಷಣಕಾಲ ಚಿಂತಿಸಿ ನಿಟ್ಟು
ಸಿರೊಂದನ್ನೆಳೆದು ಶುಕನೆಂಬ ರಾಕ್ಷಸ ನನ್ನು ಕರೆದು ಸುಗ್ರೀವನೆಡೆಗೆ ದೌತ್ಯಕ್ಕಾಗಿ
ಕಳಿಸಿಕೊಟ್ಟನು.
 

 
ಶುಕನು ಹೆಸರಿಗೆ ತಕ್ಕಂತೆ ಗಿಳಿಯ ರೂಪವನ್ನು ಧರಿಸಿ ಸಾಗರವನ್ನು
ವನ್ನು ದಾಟಿ ಆಕಾಶದಲ್ಲಿ ಸುಗ್ರೀವನನ್ನು ಕರೆದು ನುಡಿದನು :
 
66
 

 
" ಕಪಿರಾಜ, ನಾನು ರಾವಣನ ದೂತನಾಗಿ
ಬಂದಿದ್ದೇನೆ. ನಮ್ಮ
 
" ಕಪಿರಾಜ, ನಾನು ರಾವಣನ ದೂತನಾಗಿ

ಮಹಾರಾಜ ರಾಮನ ಪತ್ನಿಯನ್ನು ಅಪಹರಿಸಿದ್ದಾನೆ. ಅದು ಅವನ ಅಪಾರ