This page has been fully proofread once and needs a second look.

"ಯುಕ್ತಿ, ಬಲವಿಲ್ಲದೆ ಶಾಸ್ತ್ರದ ಪರಿಜ್ಞಾನವಿಲ್ಲದೆ, ಅನುಭವಿ ಗಳ ಒಡನಾಟವಿಲ್ಲದೆ ಮನಬಂದಂತೆ ಗಳಹುವ ಮೂರ್ಖರಿಗೆ ಮಂತ್ರ ಸಭೆಯಲ್ಲಿ ತಾಣವಿಲ್ಲ. ಮಂತ್ರಿಯಾದವನು ವಿನಯ ಸಂಪನ್ನನಾಗಿರಬೇಕು. ನೈತಿಕ ಬಲವುಳ್ಳವನಾಗಿರಬೇಕು. ಧರ್ಮಾಧರ್ಮಗಳನ್ನು ಬಲ್ಲವನಾಗಿರಬೇಕು. ಪೂರ್ವಾಪರ- ಗಳನ್ನು ತಿಳಿದು ನಿರೂಪಿಸುವ ವಿವೇಕಿಯಾಗಿರಬೇಕು. ರಾಜತಂತ್ರ ಗಳನ್ನರಿಯದ ಗಾಂಪರೊಡನೆ ಮಾಡುವ ಮಂತ್ರಾಲೋಚನ ನಪುಂಸಕನ ರತಿಯಂತೆ ನಿರ್ವೀರ್ಯವಾಗಿದೆ ! ನಿನ್ನ ಮಂತ್ರಿಗಳು ಈ ದೋಷಗಳಿಗೆ ನೆಲೆವನೆ. ಒಂದು ಗುಣವೂ ಅವರಲ್ಲಿ ಕಾಣ- ದಾಗಿದೆ. ಇವರ ಮಂತ್ರಾಲೋಚನೆ ನಿನ್ನನ್ನು ಅನರ್ಥಕ್ಕೆ ಸೆಳೆಯುತ್ತಿದೆ ಎಂದು ನನಗನಿಸುತ್ತಿದೆ. ಸಾಕು ಈ ಷಂಡಪ್ರಣಯ.
 
ಮಹರ್ಷಿ ಪುಲಸ್ತ್ಯರ ವಂಶದಲ್ಲಿ ಹುಟ್ಟಿದವನು ನೀನು. ಶಾಸ್ತ್ರ ತಂತ್ರಗಳನ್ನು ಬಲ್ಲವನು. ಲೋಕನಿಂದಿತವಾದ ವರ್ತನೆ ನಿನಗೆ ತರವಲ್ಲ. ಈ ಹೆಣ್ಣಿನ ಹುಚ್ಚನ್ನು ಬಿಟ್ಟು ಬಿಡು. ನೀನು ಮೂರು ಲೋಕಗಳನ್ನೂ ಗೆದ್ದ ಮಹಾವೀರ ಎಂದುಕೊಳ್ಳುತ್ತಿರುವೆಯಲ್ಲ. ನಿನ್ನನ್ನು ಪೀಡಿಸುತ್ತಿರುವ ಕಾಮದೇವನನ್ನು ನೀನು ನಿಗ್ರಹಿಸ ದಾದೆ. ಎಲ್ಲಿ ತ್ರಿಲೋಕ ವಿಜಯ ! ನಿನ್ನ ವಿಕತ್ಥನಗಳಿಗೆ ಏನು ಬೆಲೆ ಬಂತು ? ಈ ಸ್ತ್ರೀ ಮೋಹವನ್ನು ತೊರೆದುಬಿಡು. ಆಗ ನೀನು
ನಿಜಕ್ಕೂ ತ್ರಿಲೋಕ ವಿಜಯಿಯಾಗುವೆ.
 
ಪತಿವ್ರತೆಯಾದ ಹೆಣ್ಣನ್ನು ಕೆಣಕುವುದು ಹುಡುಗಾಟವಲ್ಲ. ಹೂವಿನ ಮಾಲೆಯೆಂದು ಬಗೆದು ಮಲಗಿದ ಹಾವನ್ನು ಕೆಣಕು ತ್ತಿರುವೆ. ಮಹಾರಾಜ, ಕೈಮುಗಿದು ವಿನಂತಿಮಾಡಿಕೊಳ್ಳುತ್ತಿದ್ದೇನೆ. ರಾಮನೊಡನೆ ಜಗಳ ಬೇಡ, ಆ ಕರುಣಾಳುವಿನೊಡನೆ ಕಲಹ ಬೇಡ, ಸೀತೆಯನ್ನು ಅವನಿಗೆ ಒಪ್ಪಿಸಿ ಬಿಡು.
 
ನೀನು ಅಧರ್ಮದ ಹಾದಿಯನ್ನೇ ತುಳಿದೆಯಾದರೆ ಧರ್ಮ ಪ್ರಿಯರಾದ ಬಂಧುಗಳು ನಿನ್ನೊಡನೆ ಬಾಳಲಾರರು. ಕೆಟ್ಟ ಯೋಚನೆ ಮನದಲ್ಲಿ ಸುಳಿಯದಿರಲಿ, ಲಂಕೆಯಲ್ಲಿ ಅಧರ್ಮ ತಾಂಡವವಾಡದಿರಲಿ, ಸೀತೆಯನ್ನು ರಾಮನಿಗೆ ಒಪ್ಪಿಸಿಬಿಡು.
 
ರಾಮನ ಅನುಗ್ರಹದ ಮುಂದೆ ಎಲ್ಲ ಸಂಪತ್ತೂ ಸಣ್ಣದು. ಅವನು ಸಂತುಷ್ಟನಾದರೆ ಎಲ್ಲವೂ ಇದೆ. ಅವನು ಮುನಿದರೆ ಸರ್ವನಾಶ, ಲೋಕನಾಥನಾದ ರಾಮನಿಗೆ ಸೀತೆಯನ್ನು ಒಪ್ಪಿಸಿಬಿಡು.