This page has been fully proofread once and needs a second look.

ಕಪಿಗಳು ಗುಹೆಯೊಳಗೆ ನೀರಿರಬೇಕು ಎಂದು ಊಹಿಸಿದರು. ಬಾಯಾರಿ
ಬಳಲಿದ ವಾನರ ವೃಂದ ಗುಹೆಯನ್ನು ಪ್ರವೇಶಿಸಿತು.
 
ಗುಹೆಯೆಂದರೆ ಅಂಧಂತಮಸ್ಸು. ಕತ್ತಲು ಕವಿದ ಯೋಜನ ದೂರದ
ಮಾರ್ಗ. ಅಲ್ಲಿ ಕಣ್ಣಿದ್ದವರೂ ಕುರುಡರೇ, ಸೂರ್ಯದೇವನ ಕರುಣೆ ಆ
ಗುಹೆಯೆಡೆಗೆ ಹರಿದೇ ಇರಲಿಲ್ಲ ! ಒಬ್ಬರ ಕೈಯನ್ನು ಒಬ್ಬರು ಹಿಡಿದು- ಕೊಂಡು ಕಪಿಗಳು ಮುಂದೆ ಸಾಗಿದರು. ಎತ್ತ ಪಯಣ ? ಯಾವುದು ದಾರಿ? ಯಾರಿಗೆ ಗೊತ್ತು ?
 
ನಿರಾಶರಾದ ಕಪಿಗಳು ರಾಮನಾಮವನ್ನು ಗಟ್ಟಿಯಾಗಿ ಜಪಿಸುತ್ತ
ಮುಂದೆ ಮುಂದೆ ಸಾಗಿದರು. ಏನು ಅದ್ಭುತ ! ಕತ್ತಲೆ ಕಳೆದು ಹೊಂಬೆ- ಳಕು ಕಾಣಿಸುತ್ತಿದೆ. ಏನು ಸುಂದರವಾದ ಕಾಡು! ಅದೂ ಅಲ್ಲದೆ ಒಬ್ಬ ಹೆಣ್ಣು ಹೆಂಗಸು. ಕಪಿಗಳು ದಿಗ್ಭ್ರಾಂತರಾದರು. ಹನುಮಂತನು ಆಕೆಯ ಬಳಿಸಾರಿ ನುಡಿದನು:
 
" ಸುಂದರಿ, ನೀನು ಯಾರು ? ಇದು ಯಾರ ಭೂಮಿ ? ಇನ್ನು ನಮ್ಮ
ಕುರಿತು ಹೇಳುವದಾದರೆ- ಸುಗ್ರೀವನ ಗೆಳೆಯನಾದ ರಾಮಚಂದ್ರನ ಭೃತ್ಯರು ನಾವು. ಆತನ ಮಡದಿಯನ್ನು ಹುಡುಕಿಕೊಂಡು ಬರುತ್ತಿದ್ದಾಗ ಅಕಸ್ಮಾತ್ತಾಗಿ ಈ ಗುಹೆಯನ್ನು ಹೊಕ್ಕೆವು."
 
ಯೋಗಿನಿಯು ಸಂತಸದಿಂದಲೇ ಉತ್ತರಿಸಿದಳು:
 
"ನಾನು ಮೇರುಸಾವರ್ಣಿಯ ಮಗಳು, ನನ್ನ ಹೆಸರು ಸ್ವಯಂಪ್ರಭೆ, ಈ
ಗುಹೆ ಮಯನಿಂದ ನಿರ್ಮಿತವಾದುದು. ಹೇಮಾ ಎಂಬ ಅಪ್ಸರೆಯೊಡನೆ ಆತ ಇಲ್ಲಿ ಬಹುಕಾಲ ವಾಸವಾಗಿದ್ದ. ನಾನು ಆ ಅಪ್ಸರೆಯ ಸಖಿ. ನೀವೆಲ್ಲ ಬಳಲಿ ಬಂದಿದ್ದೀರಿ. ನಿಮಗೆಲ್ಲರಿಗೂ ನನ್ನ ಪ್ರೀತಿಯ ಸ್ವಾಗತ ವಿದೆ."
 
ಎಂದು ಮಾತಿನಿಂದ ಅವರನ್ನು ತಣಿಸಿ ಅಮೃತದಂಥ ಹಣ್ಣು-ಗಡ್ಡೆ
ಗಳಿಂದ ಅವರ ಹಸಿವನ್ನು ನೀಗಿಸಿದಳು. ಹೊಟ್ಟೆ ತುಂಬಿದ ಮೇಲೆ ಹೊರಡುವ ಯೋಚನೆ. ಆದರೆ ಏಕೋ ಕಣ್ಣು ಕಟ್ಟಿದಂತಾಯಿತು. ಹೋಗುವ ಮಾರ್ಗವೇ ಕಾಣಿಸದು. ಆಗ ಸ್ವಯಂಪ್ರಭೆಯೇ ಅವರಿಗೆ ಮಾರ್ಗದರ್ಶಕಳಾದಳು:
 
"ಬ್ರಹ್ಮನ ವರಬಲದಿಂದ ಈ ಗುಹೆ ದುಷ್ಪ್ರವೇಶ್ಯವಾಗಿದೆ. ಯಾರೂ
ಇದರ ಪ್ರವೇಶ ನಿರ್ಗಮಗಳನ್ನು ಅರಿಯರು. ಆದರೂ ಯೋಗಬಲ- ದಿಂದ