This page has been fully proofread once and needs a second look.

ಮಿಂಚಿನಬಳ್ಳಿ
 
ಕಪಿಗಳು ಗುಹೆಯೊಳಗೆ ನೀರಿರಬೇಕು ಎಂದು ಊಹಿಸಿದರು. ಬಾಯಾರಿ

ಬಳಲಿದ ವಾನರ ವೃಂದ ಗುಹೆಯನ್ನು ಪ್ರವೇಶಿಸಿತು.
 

 
ಗುಹೆಯೆಂದರೆ ಅಂಧಂತಮಸ್ಸು. ಕತ್ತಲು ಕವಿದ ಯೋಜನ ದೂರದ

ಮಾರ್ಗ. ಅಲ್ಲಿ ಕಣ್ಣಿದ್ದವರೂ ಕುರುಡರೇ, ಸೂರ್ಯದೇವನ ಕರುಣೆ ಆ

ಗುಹೆಯೆಡೆಗೆ ಹರಿದೇ ಇರಲಿಲ್ಲ ! ಒಬ್ಬರ ಕೈಯನ್ನು ಒಬ್ಬರು ಹಿಡಿದು- ಕೊಂಡು
ಕಪಿಗಳು ಮುಂದೆ ಸಾಗಿದರು. ಎತ್ತ ಪಯಣ ? ಯಾವುದು ದಾರಿ ? ಯಾರಿಗೆ
ಗೊತ್ತು ?
 
೧೨೮
 

 
ನಿರಾಶರಾದ ಕಪಿಗಳು
ರಾಮನಾಮವನ್ನು ಗಟ್ಟಿಯಾಗಿ ಜಪಿಸುತ್ತ
 
ನಿರಾಶರಾದ ಕಪಿಗಳು

ಮುಂದೆ ಮುಂದೆ ಸಾಗಿದರು.
ಏನು ಅದ್ಭುತ ! ಕತ್ತಲೆ ಕಳೆದು ಹೊಂಬೆ- ಳಕು ಕಾಣಿಸುತ್ತಿದೆ. ಏನು ಸುಂದರವಾದ ಕಾಡು !
 
ಏನು ಅದ್ಭುತ !
 
ಕತ್ತಲೆ ಕಳೆದು ಹೊಂಬೆಳಕು
ಅದೂ ಅಲ್ಲದೆ ಒಬ್ಬ ಹೆಣ್ಣು
 
ಹೆಂಗಸು. ಕಪಿಗಳು ದಿಗ್ಗಾಂಭ್ರಾಂತರಾದರು. ಹನುಮಂತನು ಆಕೆಯ ಬಳಿಸಾರಿ
ನುಡಿದನು:
 

 
" ಸುಂದರಿ, ನೀನು ಯಾರು ? ಇದು ಯಾರ ಭೂಮಿ ? ಇನ್ನು ನಮ್ಮ

ಕುರಿತು ಹೇಳುವದಾದರೆ- ಸುಗ್ರೀವನ ಗೆಳೆಯನಾದ ರಾಮಚಂದ್ರನ ನೃತ್ಯರು
ಭೃತ್ಯರು ನಾವು. ಆತನ ಮಡದಿಯನ್ನು ಹುಡುಕಿಕೊಂಡು ಬರುತ್ತಿದ್ದಾಗ ಅಕಸ್ಮಾತ್ತಾಗಿ
ಈ ಗುಹೆಯನ್ನು ಹೊಕ್ಕೆವು."
 

 
ಯೋಗಿನಿಯು ಸಂತಸದಿಂದಲೇ ಉತ್ತರಿಸಿದಳು:
 

 
"ನಾನು ಮೇರುಸಾವರ್ಣಿಯ ಮಗಳು, ನನ್ನ ಹೆಸರು ಸ್ವಯಂಪ್ರಭೆ, ಈ

ಗುಹೆ ಮಯನಿಂದ ನಿರ್ಮಿತವಾದುದು. ಹೇಮಾ ಎಂಬ ಅಪ್ಸರೆಯೊಡನೆ ಆತ
ಇಲ್ಲಿ ಬಹುಕಾಲ ವಾಸವಾಗಿದ್ದ. ನಾನು ಆ ಅಪ್ಸರೆಯ ಸಖಿ. ನೀವೆಲ್ಲ ಬಳಲಿ
ಬಂದಿದ್ದೀರಿ. ನಿಮಗೆಲ್ಲರಿಗೂ ನನ್ನ ಪ್ರೀತಿಯ ಸ್ವಾಗತ ವಿದೆ."
 

 
ಎಂದು ಮಾತಿನಿಂದ ಅವರನ್ನು ತಣಿಸಿ ಅಮೃತದಂಥ ಹಣ್ಣು-ಗಡ್ಡೆ

ಗಳಿಂದ ಅವರ ಹಸಿವನ್ನು ನೀಗಿಸಿದಳು. ಹೊಟ್ಟೆ ತುಂಬಿದ ಮೇಲೆ ಹೊರಡುವ
ಯೋಚನೆ. ಆದರೆ ಏಕೋ ಕಣ್ಣು ಕಟ್ಟಿದಂತಾಯಿತು. ಹೋಗುವ ಮಾರ್ಗವೇ
ಕಾಣಿಸದು. ಆಗ ಸ್ವಯಂಪ್ರಭೆಯೇ ಅವರಿಗೆ ಮಾರ್ಗದರ್ಶಕಳಾದಳು:
 

 
"ಬ್ರಹ್ಮನ ವರಬಲದಿಂದ ಈ ಗುಹೆ ದುಷ್ಪ್ರವೇಶ್ಯವಾಗಿದೆ. ಯಾರೂ

ಇದರ ಪ್ರವೇಶ ನಿರ್ಗಮಗಳನ್ನು ಅರಿಯರು. ಆದರೂ ಯೋಗಬಲ- ದಿಂದ