This page has been fully proofread once and needs a second look.

ಮಿಂಚಿನಬಳ್ಳಿ
 
ತಾರೆಯು ಪ್ರಲಾಪಿಸುತ್ತ, ರಣರಂಗದಲ್ಲಿ ರಕ್ತಸಿಕ್ತನಾಗಿ ಬಿದ್ದಿರುವ ವಾಲಿ
ಯನ್ನು ಕಂಡಳು. ಕಂಡವಳಿಳೆ "ಓ ನನ್ನ ಜೀವದ ಜೀವವೆ' ಎಂದು ಬೊಬ್ಬಿರಿದು
ವಾಲಿಯ ಕಾಲ ಬುಡದಲ್ಲಿ ಬಿದ್ದು ಬಿಟ್ಟಳು. ಅಂಗದನೂ ಇತರ ವಾನರ
ಸ್ತ್ರೀಯರೂ ದುಃಖಿತರಾಗಿ ಅಳತೊಡಗಿದರು. ತಾರೆ- ಯಂತೂ ಪದೇ ಪದೇ ಎದೆ
ಬಡಿದುಕೊಂಡು ವಿಲಾಪಿಸುತ್ತಿದ್ದಳು:
 
0:6
 

 
"ಎದ್ದೇಳು ನಾಥ, ನಿನ್ನ ಪ್ರಿಯೆಯಾದ ನಾನು ಇಲ್ಲಿದ್ದೇನೆ. ನಿರಪ
ರಾ- ಧಿನಿಯಾದ ನನ್ನ ಮೇಲೇಕೆ ಸಿಟ್ಟು, ಒಮ್ಮೆ ಕಣ್ಣೆತೆರೆದು ನೋಡು, ನಿನ್ನ

ಮಗ ಅಂಗದನನ್ನಾದರೂ ನೋಡಿ ಏಳಲಾರೆಯಾ? ನನ್ನನ್ನು ಬಿಟ್ಟು

ಲೋಕಾಂತರಕ್ಕೆ ತೆರಳುವಷ್ಟು ನಿರ್ದಯನೆ ನೀನು ? ನನ್ನನ್ನೂ ನಿನ್ನ ಜತೆಗೆ
ಕರೆದೊಯ್ಯು, ನಿನ್ನ ವಾದಾಸಿಯಾಗಿ ಅಲ್ಲೂ ಇರುತ್ತೇನೆ.
 

 
ಓ ಸುಗ್ರೀವ ! ಈಗಲಾದರೂ ನಿನಗೆ ಸಂತಸವಾಯಿತೆ ? ನಿನ್ನ ಅಣ್ಣನ

ನೆತ್ತರಿನಿಂದ ತೊಯ್ದ ರಾಜ್ಯವನ್ನು ನೀನು ಸುಖವಾಗಿ ಭೋಗಿಸು. ನಿನಗಾದರೂ
 
ದೇವರು ಮಂಗಲ ಮಾಡಲಿ."
 

 
ವಾಲಿಯ ತೊಡೆಯಲ್ಲಿ ತಲೆಯಿಟ್ಟು ತಾರೆ ವಿಲಾಪಿಸುತ್ತಲೇ ಇದ್ದಳು.

ತಾರೆಯ ಮತ್ತು ಪರಿವಾರದ ಕೂಗನ್ನು ಕೇಳಿ ಎಚ್ಚತ್ತ ವಾಲಿ ಮೆಲ್ಲನೆ ಕಣ್ಣೆರೆದು
ಸುಗ್ರೀವನನ್ನು ಕರೆದು ಇಂತೆಂದನು :
 

 
"ಸುಗ್ರೀವ ! ಇನ್ನು ನಮ್ಮಲ್ಲಿ ವೈರವಿಲ್ಲ. ನಾನು ನಿನಗೆ ಅಪರಾಧ

ಮಾಡಿದ್ದೇನೆ. ಅದನ್ನು ಮರೆತುಬಿಡು. ನನ್ನ ಮಗನಾದ ಅಂಗದನನ್ನು ನಿನ್ನ
ಮಗನೆಂದೇ ತಿಳಿ, ಇನ್ನು ಈ ಸಾಮ್ರಾಜ್ಯದ ಅಧಿಕಾರ ನಿನ್ನದು. ಅಂಗದ
ಯುವರಾಜನಾಗಲಿ, ನನ್ನ ಪ್ರೇಯಸಿ ತಾರೆಯನ್ನು ಒಳ್ಳೆಯ ರೀತಿಯಿಂದ
ನೋಡಿಕೊಳ್ಳು ಎಂದು ವಿನಂತಿಸಿಕೊಳ್ಳುತ್ತಿದ್ದೇನೆ. ಇಹಪರಗಳ ಒಳಿತಿಗಾಗಿ
ಎಂದೆಂದೂ ರಾಮನ ಚರಣದಾಸನಾಗಿ ಬದುಕು. ರಾಮ ಕಾವ್ರ್ಯಗಳಲ್ಲಿ ಪ್ರಮಾದ
ವನ್ನೆಸಗದಿರು. ಅಂಗದ ! ನೀನು ಕೂಡ ಹಿರಿಯರಿಗೆ ಒಪ್ಪಾಗಿ ಬಾಳಬೇಕೆಂದು
ನನ್ನ ಬಯಕೆ, ಪ್ರಭು ರಾಮಚಂದ್ರ ! ಸುಗ್ರೀವನನ್ನು ಅಂಗದನನ್ನು ನಿನ್ನ
ಕೈಯಲ್ಲಿ ಅರ್ಪಿಸಿದ್ದೇನೆ."
 

 
ಹೀಗೆಂದು ತನ್ನ ಕತ್ತಿನಲ್ಲಿಯ ಮಾಲೆಯನ್ನು ರಾಮನ ಪಾದಗಳಿಗೆ

ಅರ್ಪಿಸಿದನು. ಜತೆಗೆ ತನ್ನನ್ನು ಕೂಡ. ವಾಲಿಯ ಆತ್ಮ ಮಹೇಂದ್ರನಲ್ಲಿ

ಸೇರಿಕೊಂಡಿತು. ಕಿಷ್ಕಿಂಧೆಯ ತೇಜಸ್ಸು ನಂದಿತು.