This page has been fully proofread once and needs a second look.

ಸಂಗ್ರಹರಾಮಾಯಣ
 
*
" ವಾಲಿಯಿಂದ ತೊಂದರೆಗೊಳಗಾದ ಸುಗ್ರೀವ ನಿನಗೆ ಶರಣಾಗತ

ನಾಗಿದ್ದಾನೆ. ಓ ಪುರುಷೋತ್ತಮನೆ ! ತನ್ನ ಹಿತಕ್ಕಾಗಿಯಾದರೂ ಸುಗ್ರೀವ

ನಿನ್ನ ಸಖ್ಯವನ್ನು ಬಯಸುತ್ತಾನೆ. ನೀನು ನಮ್ಮ ಸ್ವಾಮಿ, ನಿನ್ನ ಕಾರ್ಯ

ಬೇರಲ್ಲ-ನಮ್ಮ ಕಾರ್ಯ ಬೇರಲ್ಲ. ಅದನ್ನು ಪೂರಯಿಸುವುದು ನಮ್ಮ

ಕರ್ತವ್ಯ. " ಎಂದವನೇ ರಾಮ-ಲಕ್ಷ್ಮಣರನ್ನು ತನ್ನ ಹೆಗಲ ಮೇಲೇರಿಸಿ

ಸುಗ್ರೀವನೆಡೆಗೆ ನಡೆದನು. ದೂರದಿಂದಲೆ ಸುಗ್ರೀವನನ್ನು ಕೂಗಿ ಹೇಳಿದನು:
 
COF
 
(6
 
*

 
"
ಸುಗ್ರೀವ ! ನಮಗೆಲ್ಲರಿಗೂ ಸ್ವಾಮಿಯಾದ ರಾಮಚಂದ್ರ ಚಿತ್ತೈ-

ಸಿದ್ದಾನೆ, ನೋಡು. ಕೋಟಿ ಜನ್ಮಗಳ ಪುಣ್ಯಕ್ಕೂ ದೊರಕದ ಪ್ರಭುವಿನ

ದರ್ಶನ ನಮ್ಮ ಭಾಗ್ಯದಿಂದ ನಮಗೆ ದೊರಕಿದೆ. ಇವನನ್ನು ಶರಣಾಗು. ನಮ್ಮ
ದುಗುಡವೆಲ್ಲ ದೂರಾಯಿತೆಂದು ತಿಳಿ, ನನ್ನ ಮೇಲೆ ವಿಶ್ವಾಸ- ವಿಟ್ಟು ನೀವಿಬ್ಬರೂ
ಗೆಳೆಯರಾಗಬೇಕು. ರಾಮಪತ್ನಿಯ ಅನ್ವೇಷಣೆ- ಯಲ್ಲಿ ನೀನು ಸಹಾಯಕ
ನಾಗಬೇಕು. "
 

 
ಮಾರುತಿಯ ಮಾತನ್ನಾಲಿಸಿದ ಸುಗ್ರೀವ 'ಧನ್ಯನಾದೆ' ಎಂದು ರಾಮ-

ಚಂದ್ರನ ಪಾದಗಳಿಗೆರಗಿದನು, ರಾಮಚಂದ್ರ ಅವನನ್ನು ಹಿಡಿದೆಬ್ಬಿಸಿ

"ನಾವಿಬ್ಬರೂ ಮಿತ್ರರಿದ್ದೇವೆ. ಇನ್ನು ನನ್ನ ಕೆಲಸದಲ್ಲಿ ನಿನ್ನ ಹೊಣೆ- ಯಿದೆ;
ನಿನ್ನ ಕೆಲಸದಲ್ಲಿ ನನ್ನದೂ ಹೊಣೆಯಿದೆ" ಎಂದು ಸಂತೈಸಿದನು.
 

 
ಹನುಮಂತನು ಕೂಡಲೆ ಸಾಕ್ಷಿಭೂತನಾದ ಅಗ್ನಿಯನ್ನು ಬೆಳಗಿಸಿದನು.
- ದನು. ರಾಮಭದ್ರನೂ ಸುಗ್ರೀವನೂ ಕೈಕೈ ಹಿಡಿದುಕೊಂಡು ಅಗ್ನಿಗೆ ಸುತ್ತುವರಿದು
ಮೈತ್ರಿಯ ಪ್ರತಿಜ್ಞೆಯನ್ನು ಪೂರಯಿಸಿದರು.
 

 
ರಾಮನನ್ನು ಸತ್ಕರಿಸಿದ ಸುಗ್ರೀವನು ಮುಂದಿನ ವಿಷಯವನ್ನು ಪ್ರಸ್ತಾ
 
ಪಿಸಿದನು :
 
*

 
"
ಪೂಜ್ಯನಾದ ಸ್ನೇಹಿತನೇ ! ನಿನ್ನ ಕಾರ್ಯವನ್ನು ಈ ಮೊದಲೆ ಹನು-
ಮಂತನಿಂದ ತಿಳಿದುಕೊಂಡಿದ್ದೇನೆ. ಸೀತೆಯ ಕುರಿತು ನಮಗೆ ದೊರೆತ
ಕುರುಹುಗಳನ್ನು ನಾನು ವಿನಂತಿಸಿಕೊಳ್ಳಬೇಕು. ನಾನೊಮ್ಮೆ ಸಚಿವರೊಡನೆ
ಪರ್ವತದ ತಪ್ಪಲಲ್ಲಿ ಕುಳಿತಿದ್ದೆ. ಆಗ ರಾವಣನು ಆಕಾಶದಲ್ಲಿ ಹಾರುತ್ತಿರು
ವದನ್ನು ಕಂಡೆ. ಅವನ ಬಳಿಯಲ್ಲಿ ಒಬ್ಬ ಸುಂದರ ಲಲನೆಯಿದ್ದಳು. ಹಾ ರಾಮ-
ಚಂದ್ರು, ಹಾ ಲಕ್ಷ್ಮಣ ಎಂದಾಕೆ ಕೂಗುತ್ತಿದ್ದಳು. ಆಕೆ ನಮ್ಮನ್ನು ಕಂಡೇ