This page has not been fully proofread.

ಸಂಗ್ರಹರಾಮಾಯಣ
 
* ವಾಲಿಯಿಂದ ತೊಂದರೆಗೊಳಗಾದ ಸುಗ್ರೀವ ನಿನಗೆ ಶರಣಾಗತ
ನಾಗಿದ್ದಾನೆ. ಓ ಪುರುಷೋತ್ತಮನೆ ! ತನ್ನ ಹಿತಕ್ಕಾಗಿಯಾದರೂ ಸುಗ್ರೀವ
ನಿನ್ನ ಸಖ್ಯವನ್ನು ಬಯಸುತ್ತಾನೆ. ನೀನು ನಮ್ಮ ಸ್ವಾಮಿ, ನಿನ್ನ ಕಾರ್ಯ
ಬೇರಲ್ಲ-ನಮ್ಮ ಕಾರ್ಯ ಬೇರಲ್ಲ. ಅದನ್ನು ಪೂರಯಿಸುವುದು ನಮ್ಮ
ಕರ್ತವ್ಯ. " ಎಂದವನೇ ರಾಮ-ಲಕ್ಷ್ಮಣರನ್ನು ತನ್ನ ಹೆಗಲ ಮೇಲೇರಿಸಿ
ಸುಗ್ರೀವನೆಡೆಗೆ ನಡೆದನು. ದೂರದಿಂದಲೆ ಸುಗ್ರೀವನನ್ನು ಕೂಗಿ ಹೇಳಿದನು:
 
COF
 
(6
 
* ಸುಗ್ರೀವ ! ನಮಗೆಲ್ಲರಿಗೂ ಸ್ವಾಮಿಯಾದ ರಾಮಚಂದ್ರ ಚಿತ್ರ-
ಸಿದ್ದಾನೆ, ನೋಡು. ಕೋಟಿ ಜನ್ಮಗಳ ಪುಣ್ಯಕ್ಕೂ ದೊರಕದ ಪ್ರಭುವಿನ
ದರ್ಶನ ನಮ್ಮ ಭಾಗ್ಯದಿಂದ ನಮಗೆ ದೊರಕಿದೆ. ಇವನನ್ನು ಶರಣಾಗು. ನಮ್ಮ
ದುಗುಡವೆಲ್ಲ ದೂರಾಯಿತೆಂದು ತಿಳಿ, ನನ್ನ ಮೇಲೆ ವಿಶ್ವಾಸವಿಟ್ಟು ನೀವಿಬ್ಬರೂ
ಗೆಳೆಯರಾಗಬೇಕು. ರಾಮಪತ್ನಿಯ ಅನ್ವೇಷಣೆಯಲ್ಲಿ ನೀನು ಸಹಾಯಕ
ನಾಗಬೇಕು. "
 
ಮಾರುತಿಯ ಮಾತನ್ನಾಲಿಸಿದ ಸುಗ್ರೀವ 'ಧನ್ಯನಾದೆ' ಎಂದು ರಾಮ-
ಚಂದ್ರನ ಪಾದಗಳಿಗೆರಗಿದನು, ರಾಮಚಂದ್ರ ಅವನನ್ನು ಹಿಡಿದೆಬ್ಬಿಸಿ
"ನಾವಿಬ್ಬರೂ ಮಿತ್ರರಿದ್ದೇವೆ. ಇನ್ನು ನನ್ನ ಕೆಲಸದಲ್ಲಿ ನಿನ್ನ ಹೊಣೆಯಿದೆ;
ನಿನ್ನ ಕೆಲಸದಲ್ಲಿ ನನ್ನದೂ ಹೊಣೆಯಿದೆ" ಎಂದು ಸಂತೈಸಿದನು.
 
ಹನುಮಂತನು ಕೂಡಲೆ ಸಾಕ್ಷಿಭೂತನಾದ ಅಗ್ನಿಯನ್ನು ಬೆಳಗಿಸಿದನು.
ರಾಮಭದ್ರನೂ ಸುಗ್ರೀವನೂ ಕೈಕೈ ಹಿಡಿದುಕೊಂಡು ಅಗ್ನಿಗೆ ಸುತ್ತುವರಿದು
ಮೈತ್ರಿಯ ಪ್ರತಿಜ್ಞೆಯನ್ನು ಪೂರಯಿಸಿದರು.
 
ರಾಮನನ್ನು ಸತ್ಕರಿಸಿದ ಸುಗ್ರೀವನು ಮುಂದಿನ ವಿಷಯವನ್ನು ಪ್ರಸ್ತಾ
 
ಪಿಸಿದನು :
 
* ಪೂಜ್ಯನಾದ ಸ್ನೇಹಿತನೇ ! ನಿನ್ನ ಕಾರ್ಯವನ್ನು ಈ ಮೊದಲೆ ಹನು-
ಮಂತನಿಂದ ತಿಳಿದುಕೊಂಡಿದ್ದೇನೆ. ಸೀತೆಯ ಕುರಿತು ನಮಗೆ ದೊರೆತ
ಕುರುಹುಗಳನ್ನು ನಾನು ವಿನಂತಿಸಿಕೊಳ್ಳಬೇಕು. ನಾನೊಮ್ಮೆ ಸಚಿವರೊಡನೆ
ಪರ್ವತದ ತಪ್ಪಲಲ್ಲಿ ಕುಳಿತಿದ್ದೆ. ಆಗ ರಾವಣನು ಆಕಾಶದಲ್ಲಿ ಹಾರುತ್ತಿರು
ವದನ್ನು ಕಂಡೆ. ಅವನ ಬಳಿಯಲ್ಲಿ ಒಬ್ಬ ಸುಂದರ ಲಲನೆಯಿದ್ದಳು. ಹಾ ರಾಮ-
ಚಂದ್ರು, ಹಾ ಲಕ್ಷಣ ಎಂದಾಕೆ ಕೂಗುತ್ತಿದ್ದಳು. ಆಕೆ ನಮ್ಮನ್ನು ಕಂಡೇ