This page has been fully proofread once and needs a second look.

-- ಮಿಂಚಿನಬಳ್ಳಿ
 
ಮಾರೀಚನು ಸಾವಿಗೆ ಅಂಜದವನಲ್ಲ. ರಾವಣನ ಖಡ್ಗಕ್ಕೆ ಬಲಿಯಾ

ಗಲು ಮನಸ್ಸಿಲ್ಲದೆ, ಅವನು ಕೊನೆಗೆ ಮಾಯಾಮೃಗವಾಗಲು ಒಪ್ಪಿ- ಕೊಂಡನು.
 

 
ರಾಮನ ಆಶ್ರಮದ ಬಳಿ ಒಂದು ಬಂಗಾರದ ಜಿಂಕೆ ಬಂತು; ಅದು

ಸೀತೆಯ ಕಣ್ಮುಂದೆ ಅತ್ತಿತ್ತ ಸುಳಿದಾಡಿತು. ಮೈಯೆಲ್ಲ ಬಂಗಾರದ ಚುಕ್ಕೆಗಳು.
ದೂರಕ್ಕೂ ತಳತಳಿಸುವ ಕೊಂಬುಗಳು, ಚಿಗುರೆಲೆಗಳ ನಡುವೆ ಜಿಗಿಯುವ ಈ
ಜಿಂಕೆ, ಸೀತೆಯ ಮನವನ್ನು ಸೆಳೆಯಿತು. ಮಾಯಾಮಾನುಷನಾದ ರಾಮ-
ಚಂದ್ರನ ಲೀಲೆಗೆ ತಕ್ಕಂತೆ ಸೀತೆಯೂ ಅಭಿನಯಿಸಿದಳು.
 

 
ದಂಡಕೆಯಿಂದ ಲಂಕೆಗೆ
 

 
"ಆರ್ಯಪುತ್ರ ! ಈ ಬಣ್ಣದ ಜಿಂಕೆಯನ್ನು ಆಡಿಸುವುದೆಂದರೆ ನನಗೆ

ಪ್ರೀತಿ, ಅದನ್ನು ಹಿಡಿದು ಕೊಡಲಾರೆಯಾ ? ಅದು ಜೀವಂತವಾಗಿ ದೊರೆಯ
ದಿದ್ದರೆ, ಅದರ ಬಣ್ಣದ ಚರ್ಮವಾದರೂ ನಮ್ಮ ಆಸನಕ್ಕೆ ಉಪಯೋಗವಾಗ
ಬೇಕು." ಎಂದು ಸೀತೆ ಒತ್ತಾಯಿಸಿದಳು.
 

 
ರಾಮಚಂದ್ರನು " ನಾನು ಬರುವ ವರೆಗೆ ಜೋಕೆಯಾಗಿರು" ಎಂದು

ಲಕ್ಷ್ಮಣನನ್ನು ಎಚ್ಚರಿಸಿ, ಧನುರ್ಧಾರಿಯಾಗಿ ಜಿಂಕೆಯ ಬೆನ್ನಟ್ಟಿದನು. ಮೃಗ
ರೂಪಿಯಾದ ಮಾರೀಚ ಆಶ್ರಮದಿಂದ ದೂರ-ಬಹುದೂರ ಜಿಗಿದನು. ಜೀವಂತ
ವಾಗಿ ಆ ಜಿಂಕೆಯನ್ನು ಹಿಡಿಯುವದು ಸಾಧ್ಯವಿಲ್ಲ- ವೆಂದು ತಿಳಿದ ರಾಮಚಂದ್ರ
ಆ ಮಾಯಾಮೃಗದೆಡೆಗೆ ಒಂದು ಬಾಣ- ವನ್ನೆಸೆದನು. ಪಾತಕಿಯಾದ ಮಾರೀಚ
ಪೆಟ್ಟು ತಿಂದು ನಿಜರೂಪವನ್ನು ತಾಳಿ ನೆಲಕ್ಕುರುಳಿದನು. ಅವನು ಕೊನೆಯು
ಸಿರು ಎಳೆಯುವಾಗ ನುಡಿದ ನುಡಿ "ಓ ಲಕ್ಷ್ಮಣಾ" ಎಂದು ಕಾಡಿನ ಮೂಲೆ
ಮೂಲೆಗಳಲ್ಲಿ ಮಾರ್ಮೊಳಗಿತು !
 

 
ಕೂಗು ಸೀತೆಗೂ ಕೇಳಿಸಿತು. ಅವಳು ಲಕ್ಷ್ಮಣನನ್ನು ಕರೆದು ನುಡಿದಳು:

"ಲಕ್ಷ್ಮಣ, ರಾಮಚಂದ್ರನ ಕೂಗಿನಂತೆ ಕೇಳಿಸುತ್ತಿದೆ ನೋಡು. ನನ್ನ

ನಾಥನಿಗೆ ಏನಾಯಿತೆಂದು ಬೇಗನೆ ತಿಳಿದುಕೊಂಡು ಬಾ ತಮ್ಮ, ಹೋಗು."

 
"ರಾಮಚಂದ್ರನಿಗೆ ಎಲ್ಲಿಯ ಭಯ ತಾಯಿ ? ಇದು ಯಾರದೋ

ರಾಕ್ಷಸರ ಮಾಯೆಯಿರಬೇಕು."
 
.
 

 
.
ಅದಕ್ಕೆ ಸೀತೆ ಕಠಿಣವಾಗಿ ಉತ್ತರಿಸಿದಳು;