This page has not been fully proofread.

VI
 
ಪತ್ತಿಗಳ ನಿರ್ಣಾಯಕವಾದ ತಾತ್ಪರ್ಯ ನಿರ್ಣಯಾನುಸಾರಿಯಾಗಿ ಇವರು
ಸಂಗ್ರಹ ರಾಮಾಯಣವನ್ನು ರಚಿಸಿರುವರೆಂಬುದನ್ನು ಕಾಣಬಹುದು- ವಾಲಿಯ
ವಧೆಯ ವಿಷಯದಲ್ಲಿ, ಸೀತಾಸಹರಣದ ಸಂದರ್ಭದಲ್ಲಿ.
 
ಸೀತಾರಾಮರ ಅಚ್ಚುಮೆಚ್ಚಿನ ನೇಹಿಗ, ಭಕ್ತ, ಕಿಂಕರ, ಮಂತ್ರಿ ಎಲ್ಲವೂ
ಆದ ಹನುಮಂತನ ರೂಪವು ತನ್ನದೇ ಆದ ಸೇವಾರೂಪದ ಕಾವ್ಯ ಎನ್ನುವುದನ್ನು
ಸಂದರ್ಭ ಬಂದಾಗ ಪೂರ್ಣಪ್ರಜ್ಞರು ಕೆಲ ಭಾಷ್ಯಗಳಲ್ಲಿ ಅಪೌರುಷೇಯವಾದ
ಬಳಿತಾಸೂಕ್ತವನ್ನು ಉಲ್ಲೇ, ತನ್ನ ಅವತಾರದ ಬಗ್ಗೆ ಸಮರ್ಥಿಸುವುದನ್ನು
ನಾವು ನೋಡುತ್ತೇವೆ.
 
ಮೂಲ ರಾಮಾಯಣದಿಂದ ಹಿಡಿದು ಈ ಕ್ಷಣದ ವರೆವಿಗೂ ತನ್ನ
ಘನತೆಯನ್ನು ಸೌಂದರ್ಯವನ್ನು ಉಳಿಸಿಕೊಂಡು ಬಂದ ಪುಣ್ಯಕಥಾನಕವು
ರಾಮಾಯಣ ಎಂದರೆ ತಪ್ಪಾಗದು. ರಾಮನಾಮದಿಂದಲೇ ಹಿರಿದೆನಿಸುವ
ಇದರ ಮಹಾತ್ಮ ಬೇರೆ ಬೇರೆ ರೀತಿಯ ಕಾವ್ಯರೂಪ ತಳೆದು ಬೆಳೆಯುವುದ
ರಲ್ಲಿ ಆಶ್ಚರ್ಯವೇನೂ ಕಾಣಿಸುವುದಿಲ್ಲ. ಆದರೂ ದೊಡ್ಡವರ ಚರಿತ್ರೆಯನ್ನು
ಅವರ ಅತ್ಯಂತ ಒಡನಾಡಿಗಳು ಬರೆದು ಪ್ರಕಾಶಕ್ಕೆ ತಂದಾಗ ನಮ್ಮ ನಂಬುಗೆ
ಗೌರವ ಹೆಚ್ಚಾಗುವಂತೆ ಗುಣಪೂರ್ಣ, ದುಃಖರಹಿತ, ಸುಖರೂಪಿ ರಾಮನ
ಅವತಾರದ ಬಗ್ಗೆ ಆಚಾರ್ಯರು ತಮ್ಮ ಸ್ವಂತ ಅನುಭವದಿಂದಲೇ ನುಡಿದಿದ್ದಾರೆ
ಎಂದಾಗ ನಮಗೆ ಅತಿಶಯ ಆನಂದವಾಗುತ್ತದೆ. ಅವರೀರ್ವರ (ಭಗವಂತ
ನಾಯು) ಸಂಬಂಧ ವಿನಎಂದುದು
 
ಮುಖ್ಯ ಪ್ರಾಣರ ಮೂರನೆಯ ಅವತಾರ ಭಗವತ್ಪಕಾಶಕ್ಕೆ ಹೆಚ್ಚು
ಅವಕಾಶವಿತ್ತಿತು. ಈ ಎಲ್ಲ ಭಾವನೆಗಳ ಮೂಲಕವಾಗಿಯೇ ಆಚಾರ್ಯರ
ಭಕ್ತನೆನಿಸುವ ನಾನು ಈ ರಾಮಾಯಣ ಸಂಗ್ರಹವನ್ನು ಮಾಡಿದ್ದೇನೆ" ಎನ್ನು
ತಾರೆ ನಾರಾಯಣಪಂಡಿತಾಚಾರ್ಯರು,
ಆದುದರಿಂದಲೇ ಆಚಾರರಿಗೆ
ವ್ಯತಿರಿಕ್ತವಾಗಿ ಯಾವುದನ್ನೂ ಬಳಸಿಲ್ಲವೆಂದು ನಾವು ನಿರ್ಧರಿಸಬಹುದು.
ಆದುದರಿಂದ ಈ ಗ್ರಂಥವು ಅತ್ಯಂತ ಮಾನ್ಯವೂ, ಮನನೀಯವೂ ಅಹುದು.
 
ವೇದಗಳಿಂದ ಮಾತ್ರ ತಿಳಿಯಲು ಸಾಧ್ಯವಾಗುವ ಭಗವತ್ಸರೂಪವನ್ನು
ಕನ್ನಡದ ನುಡಿಯಲ್ಲಿ ದೈತಭಾವದಿಂದ ಜನತೆ ಕಾಣುವಂತಾಗಲಿ.