This page has been fully proofread once and needs a second look.

ಮಿಂಚಿನಬಳ್ಳಿ
 
ಬಲ್ಲದು."
 

"ರಾಕ್ಷಸರ ಕುಲವನ್ನು ಹಾಳುಗೆಡವಿದ ನಿನಗೆ ಈ ಗದೆ ಬುದ್ದಿ ಕಲಿಸ-

ಬಲ್ಲದು.
ಗದೆಯನ್ನು ರಾಮಚಂದ್ರನು ಬಾಣದಿಂದ ಭೇದಿಸಿ ಹಂಗಿಸಿದನು :

 
"ಎಲ್ಲಿದೆ ನಿನ್ನ ಗದೆ ಬುದ್ದಿ ಕಲಿಸಲಿಕ್ಕೆ ? ನಿನ್ನ ಬಲವೆಲ್ಲ ಉಡುಗಿ

ಹೋಗಿದೆ. ಓ ಬ್ರಹ್ಮದ್ರೋಹಿಯೆ, ಈಗ ನೀನು ನಪುಂಸಕನಿಗಿಂತ ಕಡೆ."
 

 
ತಡೆಯಲಾರದ ಸಿಟ್ಟಿನಿಂದ ಖರನು ತಾಲವೃಕ್ಷವೊಂದನ್ನು ಕಿತ್ತು ತಂದನು.
ರಾಮಚಂದ್ರನ ಬಾಣಗಳು ಆ ವೃಕ್ಷವನ್ನೂ, ಅದನ್ನು ಹೊತ್ತು ತಂದವನನ್ನೂ
ಜತೆಯಾಗಿ ನೆಲಕ್ಕುರುಳಿಸಿದವು. ವಜ್ರದ ಪೆಟ್ಟು ತಿಂದ ಪರ್ವತದಂತೆ ಖರನು
ಕುಸಿದುಬಿದ್ದನು.
 
FL
 

 
ದೇವತೆಗಳು ಕೊಂಡಾಡಿದರು. ಋಷಿಗಳು ಹರಸಿದರು. ಗುಹೆಯಿಂದ

ಸೀತೆ-ಲಕ್ಷ್ಮಣರು ಹೊರ ಬಂದರು. ಲಕ್ಷ್ಮಣನು ಆನಂದ ಪರವಶನಾಗಿ ಅಣ್ಣ
ನಿಗೆ ವಂದಿಸಿದನು.
 

 
"ಮುನಿಗಳ ರಕ್ಷಣೆಯ ದೀಕ್ಷೆಯನ್ನು ತೊಟ್ಟ ಓ ನನ್ನ ಆರ್ಯಪುತ್ರನೆ !

ನಿನ್ನ ಕೀರ್ತಿ ಜಗತ್ತನ್ನು ಬೆಳಗಿಸಿತು" ಎಂದು ನಲುಮೆಯ ಸೀತೆ ಪತಿಯನ್ನಪ್ಪಿ
ಕೊಂಡಳು.
 

 
ಶೂರ್ಪಣಖೆ ಲಂಕೆಗೆ ಧಾವಿಸಿದಳು; ರಾವಣನ ಕಾಲಿಗೆ ಅಡ್ಡ ಬಿದ್ದು

ನುಡಿದಳು :
 

 
"ನೀನು ಬರಿಯ ವಿಷಯಲಂಪಟ, ಮೂರು ಲೋಕಗಳನ್ನು ಗೆದ್ದರೇ
-
ನಂತೆ ? ಹೆಣ್ಣುಗಳ ಕೂಟದಲ್ಲಿ ಹೊತ್ತು ಕಳೆವ ನಿನಗೆ ರಾಜತ್ವದ ಬೆಲೆಯೇನು
ಗೊತ್ತು ? ಅಣ್ಣ, ಬಂದ ಅನಿಷ್ಟವನ್ನಾದರೂ ಯೋಚಿಸು- ತ್ತಿರುವೆಯಾ ?
ದಂಡಕಾರಣ್ಯದಲ್ಲಿ ಖರ-ದೂಷಣ-ತ್ರಿಶಿರರನ್ನು ರಾಮ ಕೊಂದಿದ್ದಾನೆ. ನನ್ನನ್ನು
ಹೀಗೆ ವಿರೂಪಗೊಳಿಸಿದ್ದಾನೆ ! ನೀನು ಇದ್ದರೂ ಸತ್ತಂತೆ ಇಲ್ಲಿ ಬಿದ್ದು -
 
ಕೊಂಡಿರುವೆ."
 

 
ಪೆಟ್ಟುತಿಂದ ಹಾವಿನಂತೆ ಸೆಟೆದು ನಿಂತು ರಾವಣನು ಕೇಳಿದ:

 
"ಯಾರವನು ರಾಮನೆಂದರೆ ?"
 

 
ಭಯದಿಂದ ಕಂಪಿಸುತ್ತಲೆ ಶೂರ್ಪಣಖೆ ಉತ್ತರಿಸಿದಳು: