This page has been fully proofread once and needs a second look.


*ಕಾಳಿದಾಸ
 
ನಾನೊಬ್ಬನುಂಟು ಹಲವಾಗಲೆಲ್ಲೂ ಎಂಬ

ಹಂಬಲಿನ ಹಂಬೆ ಹರಿಬಳ್ಳಿವಳ್ಳಿಗಳಾಗಿ

ತನ್ನ ದಾಂಗುಡಿಯ ಗೊನೆ ಬಾನು ಮತ್ತೊಂದಾಗಿ
 
ಣ್ಣೊಂದಾಗಿ
ಒಂದಾಗಿ ಕೆಲವಾಗಿ ಇರುವ ಹರುಹಿನ ತುಂಬ

ನಲಿವುಲಿವು ಒಲುಮೆ ಸೆಲೆ ಚೆಲುವು ಹಂದಿರಗಂಬ-

ವೆನೆ ತಾನೆ ಹೂ, ಹಕ್ಕಿ, ಹೆಣ್ಣು ಕಣ್ಣೆಂದಾಗಿ

ನೀಡಿ ಬಾನ್‌ಮೀನಂಗಳಲ್ಲು ಚಳಮಿಳನಾಗಿ

ಆಗ ಬಗೆಬಗೆ ಮಿಂಚಿತ್ತು ಒಂದೇ ಬಿಂಬ.

ಕಣ್ವ ಕವಿಗ
ಣ್ಣ ಕವಿಗಣ್ಣ ಕನ್ನಡಿಯಲ್ಲಿ ಒಳಮೂಡಿ,
 

 
* ಕಾಳಿದಾಸ
 
॥ ೧
 
ಆ ಕಾವ ನೋವೆ ಹಲವೊಲವಿನಲಿ ಹಾಡಾಗಿ

ಯಾವುದೋ ಹಿರಿಬೆಳಕ ಮಿಸುಕಾಟವೇ ಹಿಗ್ಗಿ

ಇಲ್ಲದುಂಟಾಗಿ ಕತ್ತಲೆಯು ಬೆಳಕಿಗೆ ಬಾಗಿ

ಸಾವು ಸುಲಿಯಲು ಬಾಳೆ ತಿಳಲು ಎನೆ ಸವಿಗೂಡಿ

ಮುದ್ದಾಟವೆನೆ ಬಂತು ಕಾಳಿದಾಸನ ನುಗ್ಗಿ .
 

 
- ಮುಕ್ತಕಂಠ-೮/ಪ್ರ : ೧೯೫೬
 

 
ಭಾವ : ಕಾಳಿದಾಸನಲ್ಲಿ ಅವತರಿಸಿದ ಶಕ್ತಿಯನ್ನು ಕುರಿತು

ಬರೆದದ್ದು.
 

 
ಅರ್ಥ : ಹಂಬೆ-ಹಂಬು=ಬಳ್ಳಿ.
 

 
ದಾಂಗುಡಿ=ಬಳ್ಳಿಯ ಬೆಳವಣಿಗೆಯ ಮುಂಭಾಗದ ತುದಿ.
 

 
ಚಳಮಿಳ=ಚಂಚಲವಾಗಿ ಹೊಳೆ.
 

 
ಮಿಸುಕಾಟ-ಚಲನೆ.
 

 
ಕಾಳಿದಾಸನನ್ನು ಕುರಿತು ಡಾ॥ ದ. ರಾ. ಬೇಂದ್ರೆ
 
NcDesai
 
೪೮ ಕನ್ನಡ ಮೇಘದೂತ - ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇಂದ