This page has been fully proofread once and needs a second look.

ಕೃತಜ್ಞತೆ
 

 
ನನ್ನ ಮನದ ಕಜ್ಜಳವ ಕಳೆದು ಹೊಸ ಬೆಳಕು ಹೊತ್ತಿ ಕುಡಿಗೆ

ನಾನು ಹಿಗ್ಗಿದೆನು ನಿನ್ನ ಕೃತಿಯನಿಟ್ಟಂತೆ ನನ್ನ ಮುಡಿಗೆ

'ಹೋಗು ಸುಕವಿ-ರಸ-ದಾಸಿಯಾಗಿ ದುಡಿ" ಎಂದೆ ನನ್ನ ನುಡಿಗೆ

ಮಾತಿನಲ್ಲಿಲೆ ಮೂಲೋಕ ಸೃಜಿಸುವಾ ನಿನ್ನ ಪ್ರತಿಭೆಯಡಿಗೆ
 

 
॥ ೧
 
ಹಿಂದಾಗಲಿಲ್ಲ. ಮುಂದಾಗಲಾರ, ಕವಿ ಕಾಳಿದಾಸ ನೀನು !

ಶೃಂಗಾರದಿಂದೆ ನವಭಕ್ತಿರಸವ ಹೊಮ್ಮಿಸುವ ದಿವ್ಯಭಾನು !

ರಸವತಿಯು ನಿನ್ನ ಸರಸತಿಯು, ಸವಿಗೆ ತುಟಿಮುದ್ದು ಹಾಲು ಜೇನು !

ಕನ್ನಡದೊಳಿಂದು ಕನ್ನಡಿಸಿದಂತೆ ಮೂಡಿರುವಳಿಲ್ಲಿ ತಾನು !
 

 
ಶಬ್ದಾರ್ಥ: ಕಿರುವಕ=ಕೆಂಪುಹೂವಿನ ದೊಡ್ಡ ಗೋರಂಟಿ. ನೀರು=ನೀರಿಗೆ ಮಡಿಕೆ, ನೀವಿಬಂಧ=ಸೀರೆಯನ್ನ
ಉಡುವಾಗ ಹಾಕುವ ಗಂಟು, ಕಂಡಿ=ರಂಧ್ರ, ತಿಗುರು=ಸುಗಂಧ ದ್ರವ್ಯ, ಬಿದಿರಿ=ಹರಡಿ, ವಿಸ್ತರಿಸಿ

ಮುರುಕ=ಮುಖವಿನ್ಯಾಸ, ತಿರುಪಾಟ=ಆವರ್ತ, ಕಾರಣೆ=ಬಣ್ಣದ ಗೆರೆ. ನನ ನನೆ=ಮೊನೆಹಲ್ಲು ಹರಿತವಾದ
ಹಲ್ಲು
ಕುಳಿರ್=ತಂಪು, ಪೊಗರು=ಹೊಳಪು, ಜಾಳಂದ್ರ=ಜಾವಂದ್ರ=ಬಲೆಯಂತೆ ರಂಧ್ರಗಳುಳ್ಳ ಕಿಟಕಿ

ಸಮರು=ಅಂದಗೊಳಿಸು, ಮಲಕು=ತಿರುವು, ಸರಗಂಟು, ಜಲದ=ಮೋಡ, ಹಿಣಿಲ=ಜಡೆಯ ಹೆಣಿ
ಕೆ
ಕೂರ್ತು=ಕುಳಿತು, ಪ್ರೀತಿಯಿಂದ, ದಿಗಿಲ್=ಭಯ, ಅಂಜಿಕೆ, ವಿಸ್ಮಯ, ಸೂರೆಮಾಡು=ಲೂಟಿಮಾ
 
೪೬ ಕನ್ನಡ ಮೇಘದೂತ - ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇ
 
0
 
ಡು