This page has not been fully proofread.

ಕೃತಜ್ಞತೆ
 
ನನ್ನ ಮನದ ಕಜ್ಜಳವ ಕಳೆದು ಹೊಸ ಬೆಳಕು ಹೊತ್ತಿ ಕುಡಿಗೆ
ನಾನು ಹಿಗ್ಗಿದೆನು ನಿನ್ನ ಕೃತಿಯನಿಟ್ಟಂತೆ ನನ್ನ ಮುಡಿಗೆ
'ಹೋಗು ಸುಕವಿ-ರಸ-ದಾಸಿಯಾಗಿ ದುಡಿ" ಎಂದೆ ನನ್ನ ನುಡಿಗೆ
ಮಾತಿನಲ್ಲಿ ಮೂಲೋಕ ಸೃಜಿಸುವಾ ನಿನ್ನ ಪ್ರತಿಭೆಯಡಿಗೆ
 

 
ಹಿಂದಾಗಲಿಲ್ಲ. ಮುಂದಾಗಲಾರ, ಕವಿ ಕಾಳಿದಾಸ ನೀನು !
ಶೃಂಗಾರದಿಂದೆ ನವಭಕ್ತಿರಸವ ಹೊಮ್ಮಿಸುವ ದಿವ್ಯಭಾನು !
ರಸವತಿಯು ನಿನ್ನ ಸರಸತಿಯು, ಸವಿಗೆ ತುಟಿಮುದ್ದು ಹಾಲು ಜೇನು !
ಕನ್ನಡದೊಳಿಂದು ಕನ್ನಡಿಸಿದಂತೆ ಮೂಡಿರುವಳಿಲ್ಲಿ ತಾನು !
 
ಶಬ್ದಾರ್ಥ: ಕಿರುವಕ=ಕೆಂಪುಹೂವಿನ ದೊಡ್ಡ ಗೋರಂಟಿ. ನೀರು=ನೀರಿಗೆ ಮಡಿಕೆ, ನೀವಿಬಂಧ=ಸೀರೆಯನ್ನ
ಉಡುವಾಗ ಹಾಕುವ ಗಂಟು, ಕಂಡಿ=ರಂಧ್ರ, ತಿಗುರು=ಸುಗಂಧ ದ್ರವ್ಯ, ಬಿದಿರಿ=ಹರಡಿ, ವಿಸ್ತರಿಸಿ
ಮುರುಕ=ಮುಖವಿನ್ಯಾಸ, ತಿರುಪಾಟ=ಆವರ್ತ ಕಾರಣೆ=ಬಣ್ಣದ ಗೆರೆ. ನನ=ಮೊನೆಹಲ್ಲು ಹರಿತವಾದವ
ಕುಳಿರ್=ತಂಪು, ಪೊಗರು=ಹೊಳಪು, ಜಾಳಂದ್ರ=ಜಾವಂದ್ರ=ಬಲೆಯಂತೆ ರಂಧ್ರಗಳುಳ್ಳ ಕಿಟಕಿ
ಸಮರು=ಅಂದಗೊಳಿಸು, ಮಲಕು=ತಿರುವು, ಸರಗಂಟು, ಜಲದ=ಮೋಡ, ಹಿಣಿಲ=ಜಡೆಯ ಹಣಿಸ
ಕೂರ್ತು=ಕುಳಿತು, ಪ್ರೀತಿಯಿಂದ, ದಿಗಿಲ್=ಭಯ, ಅಂಜಿಕೆ, ವಿಸ್ಮಯ, ಸೂರೆಮಾಡು=ಲೂಟಿಮಾಡ
 
೪೬ ಕನ್ನಡ ಮೇಘದೂತ - ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇ
 
0