This page has been fully proofread once and needs a second look.

೫೦
 
ಮೊದಲ ವಿರಹದಲಿ ಬೆಂದ ಸಖಿಗೆ ನೀ ಹೀಗೆ ಧೈರ್ಯ ಹೇಳಿ

ಶಿವನ ಬಸವ ನಗೆದಿರುವ ನಗದ ತುದಿಯಿಂದ ಕಾಲ ಕೀಳಿ ॥

ಮರಳಿ ಬಂದು, ಅವಳೊಸಗೆ ತಂದು, ನನಗೊಂದು ಬಾಳ ನೀಡು

ಕಳಚಿ ಬೀಳಲಿಹ ಕುಂದಕುಸುಮದೊಲು ಇಹುದು ನನ್ನ ಪಾಡು ॥
 

 

 
ಒಪ್ಪಿಕೊಂಡೆಯಾ, ಅಪ್ಪಾ, ಹೇಳು ಈ ಬಂಧುಕೃತ್ಯವನ್ನು

ಇಲ್ಲವೆಂದು ನಾ ತಿಳಿಯೆ ನಿನ್ನ ಗಂಭೀರ ಮೌನವನ್ನು

ನೀರ ನೀಡಿ ಚಾದಗೆಗೆ, ಸುಮ್ಮನಿಹೆ. ಬೇರೆ ಸಾಕ್ಷ್ಯ ಬೇಕೆ

ತಮ್ಮ ಇಷ್ಟದವರಿಷ್ಟ ಮಾಡುವವ ಬಾಯಲಾಡಲೇಕೆ ?
 
ಶಿ
 

 

 
ಸಿಕ್ಕ ಹಾಗೆ ನಾ ಬೇಡಿಕೊಂಡೆ, ಮಾಡಿದ್ದು ನನ್ನದನ್ನು
ಷ್ಟು ನನ್ನದನ್ನು
ಎನ್ನು ಗೆಳೆಯನಿವ, ಎನ್ನು ಅಗಲಿದವ, ಅಯ್ಯೋ ಪಾಪ, ಎನ್ನು

ತಿಳಿದ ನಾಡು ತಿರುಗಾಡು ಮೇಘವೇ ! ಮಾಟ ಆಟವಾಡಿ

ಬೇಡಿಕೊಂಬೆ ನಾ ಇರಲಿ ಎಂದಿಗೂ ಮೋಡ ಮಿಂಚುಗೂಡಿ ॥
 
ಕನ್ನಡ ಮೇಘದೂತ - ಭಾವಾನುವಾದ ಖಂಡಕಾವ್ಯ: ಲೇ : ದ. ರಾ. ಬೇಂದ್ರೆ (ಅಂಬಿಕಾತನಯದತ್ತ) ೪