This page has been fully proofread once and needs a second look.

೪೯
 
ಮಡದಿ ರೇವತಿಯ ಮುಖವು ಮೂಡಿದಾ ಕಳ್ಳುಹಾಲ ಕುಡಿದ

ಕೃಷ್ಣನಣ್ಣನಾ ಸಮರ ತೊರೆದು ಒಲಿದಿವಳ ದಂಡೆ ಹಿಡಿದ

ಕುಡಿಯೊ ನೀನು ಸರಸತಿಯ ನೀರ ಬಲರಾಮನನ್ನು ನಂಬಿ

ಬಣ್ಣವಿರಲಿ ಕರಿ ; ಬೆಳ್ಳಗಾಗು ಒಳಗೆಲ್ಲ ಬೆಳಕು ತುಂಬಿ
 
೫೦
 
॥ ೪೯
 
ಜನ್ನುಹು ಕನ್ನೆಯೆ ತೊರೆದಿಳಿದಳಣ್ಣ ಕನಖಲದ ಮಲೆಯ ಬಳಿಗೆ

ಸಗರ ಸಂತತಿಗೆ ಸ್ವರ್ಗದೊಂದು ಸೋಪಾನವಾಗಿ ಇಳೆಗೆ

ಗೌರಿ ಮುರಿವಳಬ್ಬಬ್ಬ ಹುಬ್ಬ-ಎನೆ ನಕ್ಕು ನೊರೆಗಳಿಂದ

ಜಗ್ಗುತಿಹಳು ಶಿವಜಡೆಯ ಚಂದ್ರಮಣಿ ಕೈಯ ತೆರೆಗಳಿಂದ
 

 

 
ನೀನು ಬಾನಿನಲಿ ಕಾಲು ಸೋತು ಬರೆ, ಗಂಗೆ ಕುಡಿಯಲೆಂದು
 

ಸ್ವರ್ಗದಾನೆಯೇ ಸೊಂಡೆ ಚಾಚಿದೊಲು ಕಾಂಬೆ ನೋಟವೊಂದು

ಬೇರೆ ಕಾಣುವದು ನೋಟ, ನೀರಿನಲ್ಲಿ ಛಾಯೆ ಮೂಡಿದಂತೆ

ಗಂಗೆಯನ್ನೆ ಮತ್ತೊಂದು ಕಡೆಗೆ ಆ ಯಮುನೆ ಕೂಡಿದಂತೆ
 

 

 
ಮಂಜು-ಬೆಟ್ಟ ಮುಡಿಯಟ್ಟದಲ್ಲಿ ಕಸ್ತೂರಿ ಮೆಟ್ಟಿನಲ್ಲಿ

ಇಳೆಯ ತೊಳೆಯೆ, ಹೊಳೆಯಾಗಿ ಬರುವ ಸಿರಿಗಂಗೆ ಹುಟ್ಟಿನಲ್ಲಿ

ದಾರಿದಣಿವಿಕೆಯ ಕಳೆಯೊ ನೀನು ಆ ಕೋಡಿನಲ್ಲಿ ಕುಂತು

ಶಿವನ ನಂದಿ ಕೋಡೆತ್ತಿ ಒಗೆದ ಕರಿ ಮಣ್ಣ ಮುದ್ದೆಯಂತು
 
॥ ೫೨
 
ದೇವದಾರು ಮರ ತಾಕಲಾಡಿ, ದಾವಾಗ್ನಿ ಕಿಡಿಯ ಸೊಸೂಸೆ

ಹೊತ್ತಿ ಬಾಲ, ಸುತ್ತಾಡಿ ಚಮರಿಮೃಗವೆತ್ತಿ ಬಾಲ ಬೀಸೆ

ಕುತ್ತದಲ್ಲಿ ಇರೆ ಸುರಿಸು ನೀರು ; ಉರಿ ಈಡೆ ನಿನ್ನ ಮಳೆಗೆ ?

ಕಷ್ಟ ಕಳೆವುದೇ ಇಷ್ಟವಹುದು ಉತ್ತಮರ ಶಕ್ತಿಗಳಿಗೆ
 

 

 
ಸಿಟ್ಟಿನಿಂದ ಸಿಡಿದೆದ್ದು ಶರಭ ಬರೆ ತಾಗಿ, ಕಂಡು ಮಿದುವು.

ಮೂಳೆಗಳನ್ನು ಮುರಿಕೊಳ್ಳಲೆಂದು ಹವಣಿಸಿದ ಹಾಗೆ ಅದುವು

ಆಲಿಕಲ್ಲಿನಿಂದಿಟ್ಟು ಕುಟ್ಟು , ಅದರಂಥ ಮೂಢರೊಳರೇ ?

ಮುಗಿಲಿಗೆಂದು ಕೈ ಹಾಕಿ ಹಾರಿದರೆ ಕಾಲು ಮುರಿದು ಕೊಳರೇ ?
ಕನ್ನಡ ಮೇಘದೂತ
॥ ೫೪
 
 
- ಭಾವಾನುವಾದ ಖಂಡಕಾವ್ಯ : ಲೇ : ದ. ರಾ. ಬೇಂದ್ರೆ (ಅಂಬಿಕಾತನಯದತ್ತ) ೨೩
 
-